🎉 Up to 70% Off Selected ItemsShop Sale
HomeStore

ಅಂತರಂಗ

Product image 1
Product image 2

ಅಂತರಂಗ

ಅಂತರಂಗ

ಡಾ।। ಜಿ.ಎಂ. ತುಂಗೇಶ್, ಸಾಹಿತ್ಯ, ಪತ್ರಿಕೋದ್ಯಮ ಮತ್ತು ತತ್ವಶಾಸ್ತ್ರ ವಿಷಯಗಳಲ್ಲಿ ಸಮಾನಾಸಕ್ತಿ ಹೊಂದಿದ್ದಾರೆ. ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ತಾಂತ್ರಿಕ ಕಾಲೇಜು, ವರ್ಧಮಾನ್ ತಾಂತ್ರಿಕ ಮಹಾವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ಉತ್ತರ ಪೂರ್ವ ಆಫ್ರಿಕಾದ ಎರಿಟ್ರಿಯ ತಾಂತ್ರಿಕ ವಿದ್ಯಾಲಯ, ಮಣಿಪಾಲದ (ಮಾಹೆ) ವಿಶ್ವವಿದ್ಯಾಲಯ ಮುಂತಾದ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿನ ಮಾನವಿಕ ಅಧ್ಯಯನ ವಿಭಾಗಗಳಲ್ಲಿ ಇಂಗ್ಲಿಷ್ ಸಾಹಿತ್ಯ, ಭಾಷಾಶಾಸ್ತ್ರ ಮತ್ತು ತತ್ವಶಾಸ್ತ್ರ ವಿಷಯಗಳ ಪ್ರಾಧ್ಯಾಪಕರಾಗಿ ಕಾರ್ಯವಹಿಸಿ 2023ರಲ್ಲಿ ಸೇವಾ ನಿವೃತ್ತಿ ಹೊಂದಿದರು.

ಸೇವಾ ಅವಧಿಯಲ್ಲಿ ಸುಮಾರು 60 ವೈಚಾರಿಕ-ಸಾಹಿತ್ಯ ಲೇಖನಗಳನ್ನು ಪ್ರಮುಖ ದಿನಪತ್ರಿಕೆಗಳಲ್ಲಿಯೂ, 30ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ರಾಷ್ಟ್ರೀಯ ಮತ್ತುಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿಯೂ ಪ್ರಕಟಿಸಿದ್ದಾರೆ. ಅಲ್ಲದೇ, ಅಮೆರಿಕಾದ ಹಾರ್ವಡ್್ರ, ಜರ್ಮನಿಯ ಹೈಡೆಲ್ಬರ್ಗ್, ಸಿಂಗಾಪುರ್ನ ನ್ಯಾನ್ಯಾಂಗ್ ಟೆಕ್ನಾಲಜಿಕಲ್ ಯೂನಿವರ್ಸಿಟಿ (NTU), ನೇಪಾಳದ ತ್ರಿಭುವನ್, ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಮುಂತಾದ ಹೆಸರಾಂತ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಕೇಂದ್ರಗಳಿಗೆ ಭೇಟಿ ನೀಡಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತಹ ಲ್ಯಾಂಗ್ಜ್ ಅಂಡ್ ಕ್ರಿಟಿಸಿಸಮ್ ಫಾರ್ ಬಿಗಿನರ್ಸ್ (ಸಾಹಿತ್ಯ ಮತ್ತು ವಿಮರ್ಶೆ, ಆರಂಭಿಕ ಓದುಗರಿಗಾಗಿ), ಮತ್ತು ಕಲ್ಟರ್ ಅಂಡ್ ಡೆವಲ್ ಮೆಂಟ್ ಫಾರ್ ಇಂಡಿವಿಜುಯಲ್ಸ್ (ಸಾಹಿತ್ಯ ಮತ್ತು ಸಂಸ್ಕೃತಿ ವೈಯುಕ್ತಿಕ ಬೆಳವಣಿಗೆಗಾಗಿ) ಎಂಬ ಎರಡು ಕೃತಿಗಳನ್ನು ವಿದ್ಯಾಕುಟೀರ್, ನವದೆಹಲಿ, ಪ್ರಕಾಶನದ ಅಡಿಯಲ್ಲಿ ಪ್ರಕಟಿಸಿದ್ದು, ಈ ಕೃತಿಗಳು ಓದುಗರ ಮೆಚ್ಚುಗೆ ಗಳಿಸಿವೆ.

ಲೇಖಕರಿಗೆ, ಭದ್ರಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ 1995ರಲ್ಲಿ ಇಂಗ್ಲಿಷ್ ವಿಭಾಗದ ಉತ್ತಮ ಅಧ್ಯಾಪಕ ಪ್ರಶಸ್ತಿ, 2021ರಲ್ಲಿ ವೆಸ್ಟ್ ಮಿಡ್ಯಾಂಡ್ಸ್ (ಇಂಗ್ಲೆಂಡ್)ನ ಸೆಂಟರ್ ಫಾರ್ ಪ್ಯೂಮನ್ ಡೆವಲ್ಮೆಂಟ್ ಸಂಸ್ಥೆಯು ವಿಜಯವಾಡದ ಸಿ.ಪಿ.ಸಿ.ಇ. ಶಿಕ್ಷಣ ಸಂಸ್ಥೆಯ ಸಹ ಯೋಗದಲ್ಲಿ ನೀಡುವ ಶೈಕ್ಷಣಿಕ ಪ್ರಶಸ್ತಿ, 2024ರಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಹೆಸರಾಂತ ಶಿಕ್ಷಕರಾದ ಜಿ.ಆರ್. ಭಾರ್ಗೆಶಪ್ಪ ಅವರ ಸ್ಮರಣಾರ್ಥ ನೀಡುವ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಪ್ರಸ್ತುತ ಈ ಕೃತಿ 'ಅಂತರಂಗ'ವು, ನನ್ನೂರ ಹೆಮ್ಮೆಯ ಗೊ.ರು.ಚ. ಪ್ರತಿಷ್ಠಾನ ವತಿಯಿಂದ ಪ್ರಕಟಗೊಳ್ಳುತ್ತಿರುವುದು ನನ್ನಲ್ಲಿ ಅತೀವ ಸಂತೋಷ ಮತ್ತು ಅಭಿಮಾನವನ್ನು ಉಂಟುಮಾಡಿವೆ.

$2.16
ಅಂತರಂಗ
$2.16

Product Information

Shipping & Returns

Description

ಡಾ।। ಜಿ.ಎಂ. ತುಂಗೇಶ್, ಸಾಹಿತ್ಯ, ಪತ್ರಿಕೋದ್ಯಮ ಮತ್ತು ತತ್ವಶಾಸ್ತ್ರ ವಿಷಯಗಳಲ್ಲಿ ಸಮಾನಾಸಕ್ತಿ ಹೊಂದಿದ್ದಾರೆ. ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ತಾಂತ್ರಿಕ ಕಾಲೇಜು, ವರ್ಧಮಾನ್ ತಾಂತ್ರಿಕ ಮಹಾವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ಉತ್ತರ ಪೂರ್ವ ಆಫ್ರಿಕಾದ ಎರಿಟ್ರಿಯ ತಾಂತ್ರಿಕ ವಿದ್ಯಾಲಯ, ಮಣಿಪಾಲದ (ಮಾಹೆ) ವಿಶ್ವವಿದ್ಯಾಲಯ ಮುಂತಾದ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿನ ಮಾನವಿಕ ಅಧ್ಯಯನ ವಿಭಾಗಗಳಲ್ಲಿ ಇಂಗ್ಲಿಷ್ ಸಾಹಿತ್ಯ, ಭಾಷಾಶಾಸ್ತ್ರ ಮತ್ತು ತತ್ವಶಾಸ್ತ್ರ ವಿಷಯಗಳ ಪ್ರಾಧ್ಯಾಪಕರಾಗಿ ಕಾರ್ಯವಹಿಸಿ 2023ರಲ್ಲಿ ಸೇವಾ ನಿವೃತ್ತಿ ಹೊಂದಿದರು.

ಸೇವಾ ಅವಧಿಯಲ್ಲಿ ಸುಮಾರು 60 ವೈಚಾರಿಕ-ಸಾಹಿತ್ಯ ಲೇಖನಗಳನ್ನು ಪ್ರಮುಖ ದಿನಪತ್ರಿಕೆಗಳಲ್ಲಿಯೂ, 30ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ರಾಷ್ಟ್ರೀಯ ಮತ್ತುಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿಯೂ ಪ್ರಕಟಿಸಿದ್ದಾರೆ. ಅಲ್ಲದೇ, ಅಮೆರಿಕಾದ ಹಾರ್ವಡ್್ರ, ಜರ್ಮನಿಯ ಹೈಡೆಲ್ಬರ್ಗ್, ಸಿಂಗಾಪುರ್ನ ನ್ಯಾನ್ಯಾಂಗ್ ಟೆಕ್ನಾಲಜಿಕಲ್ ಯೂನಿವರ್ಸಿಟಿ (NTU), ನೇಪಾಳದ ತ್ರಿಭುವನ್, ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಮುಂತಾದ ಹೆಸರಾಂತ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಕೇಂದ್ರಗಳಿಗೆ ಭೇಟಿ ನೀಡಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತಹ ಲ್ಯಾಂಗ್ಜ್ ಅಂಡ್ ಕ್ರಿಟಿಸಿಸಮ್ ಫಾರ್ ಬಿಗಿನರ್ಸ್ (ಸಾಹಿತ್ಯ ಮತ್ತು ವಿಮರ್ಶೆ, ಆರಂಭಿಕ ಓದುಗರಿಗಾಗಿ), ಮತ್ತು ಕಲ್ಟರ್ ಅಂಡ್ ಡೆವಲ್ ಮೆಂಟ್ ಫಾರ್ ಇಂಡಿವಿಜುಯಲ್ಸ್ (ಸಾಹಿತ್ಯ ಮತ್ತು ಸಂಸ್ಕೃತಿ ವೈಯುಕ್ತಿಕ ಬೆಳವಣಿಗೆಗಾಗಿ) ಎಂಬ ಎರಡು ಕೃತಿಗಳನ್ನು ವಿದ್ಯಾಕುಟೀರ್, ನವದೆಹಲಿ, ಪ್ರಕಾಶನದ ಅಡಿಯಲ್ಲಿ ಪ್ರಕಟಿಸಿದ್ದು, ಈ ಕೃತಿಗಳು ಓದುಗರ ಮೆಚ್ಚುಗೆ ಗಳಿಸಿವೆ.

ಲೇಖಕರಿಗೆ, ಭದ್ರಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ 1995ರಲ್ಲಿ ಇಂಗ್ಲಿಷ್ ವಿಭಾಗದ ಉತ್ತಮ ಅಧ್ಯಾಪಕ ಪ್ರಶಸ್ತಿ, 2021ರಲ್ಲಿ ವೆಸ್ಟ್ ಮಿಡ್ಯಾಂಡ್ಸ್ (ಇಂಗ್ಲೆಂಡ್)ನ ಸೆಂಟರ್ ಫಾರ್ ಪ್ಯೂಮನ್ ಡೆವಲ್ಮೆಂಟ್ ಸಂಸ್ಥೆಯು ವಿಜಯವಾಡದ ಸಿ.ಪಿ.ಸಿ.ಇ. ಶಿಕ್ಷಣ ಸಂಸ್ಥೆಯ ಸಹ ಯೋಗದಲ್ಲಿ ನೀಡುವ ಶೈಕ್ಷಣಿಕ ಪ್ರಶಸ್ತಿ, 2024ರಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಹೆಸರಾಂತ ಶಿಕ್ಷಕರಾದ ಜಿ.ಆರ್. ಭಾರ್ಗೆಶಪ್ಪ ಅವರ ಸ್ಮರಣಾರ್ಥ ನೀಡುವ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಪ್ರಸ್ತುತ ಈ ಕೃತಿ 'ಅಂತರಂಗ'ವು, ನನ್ನೂರ ಹೆಮ್ಮೆಯ ಗೊ.ರು.ಚ. ಪ್ರತಿಷ್ಠಾನ ವತಿಯಿಂದ ಪ್ರಕಟಗೊಳ್ಳುತ್ತಿರುವುದು ನನ್ನಲ್ಲಿ ಅತೀವ ಸಂತೋಷ ಮತ್ತು ಅಭಿಮಾನವನ್ನು ಉಂಟುಮಾಡಿವೆ.

ಅಂತರಂಗ | Harivu Books