🎉 Up to 70% Off Selected ItemsShop Sale
HomeStore

ಅರಿವಿನ ದಾರಿ

Product image 1
Product image 2

ಅರಿವಿನ ದಾರಿ

ಅರಿವಿನ ದಾರಿ

"ಗಣಿತ ತಜ್ಞರಾಗಿರುವ ಅಶ್ವತ್ ಎಸ್.ಎಲ್. ಅವರು ನುರಿತ ತಜ್ಞರಂತೆ ಪದಪುಂಜಗಳ ಮೂಲಕ, ಒಮ್ಮೆಗೆ ಕೈಗೆತ್ತಿಕೊಂಡರೆ ಇಡೀ ಪುಸ್ತಕವನ್ನೇ ಓದುವಂತೆ, ಮಸ್ತಕದ ಶುದ್ಧಿಗೆ, ಅದರ ಸಿದ್ಧಿಗೆ ತಕ್ಕ ಬುದ್ಧಿಗೆ ತಾವು ವೃದ್ಧಿಯಾಗಿಸಿಕೊಳ್ಳುವ ಹಾಗೆ 150 ಪುಟಗಳಲ್ಲಿ ನಮಗೆ ಉಡುಗೊರೆಯಾಗಿ **'ಅರಿವಿನ ದಾರಿ'**ಯನ್ನು ನೀಡಿದ್ದಾರೆ.

ಕೇವಲ ಪರೀಕ್ಷೆಗಳಲ್ಲಿ ಅಂಕ ಪಡೆದು ಮೆಚ್ಚುವುದಕ್ಕಿಂತಲೂ, ಶಂಕೆಯಿಲ್ಲದೆ ಬದುಕನ್ನು ಅಚ್ಚುಕಟ್ಟಾಗಿ ನಡೆಸುವಂತಹ ಧೀಮಂತಿಕೆಯ ಶಕ್ತಿಯನ್ನು ಗುರುತಿಸಿಕೊಳ್ಳುವ ಹಾಗೆ ವಿದ್ಯಾರ್ಥಿಗಳಿಗೆ ದರ್ಪಣವಾಗಿಸಿ ಈ ಕೃತಿಯನ್ನು ನೀಡಿದ್ದಾರೆ. ಅವರಿಗೆ ನಾವೆಲ್ಲರೂ ಕೂಡ ಕೃತಜ್ಞರೇ ಹೌದು. ಒಂದೊಂದು ವಿಷಯವನ್ನು ಓದುವಾಗಲೂ ಕೂಡ ಒಬ್ಬೊಬ್ಬ ವ್ಯಕ್ತಿಯ ವ್ಯಕ್ತಿತ್ವ ನಮ್ಮ ಮಸ್ತಕಕ್ಕೆ ಸ್ಪಷ್ಟವಾಗುತ್ತಾ ಹೋಗುತ್ತದೆ. ಸ್ಪುಟವಾದ ಭಾಷೆ, ಸುಲಲಿತ ಶೈಲಿ, ಅರ್ಥವಾಗುವಂತಹ ವಾಕ್ಯಗಳು; ಯಾವುದೇ ಕಠಿಣ ಶಬ್ದಗಳಿಗೆ ಶಬ್ದಕೋಶವನ್ನು ತಡಕಾಡುತ್ತಾ ಅದರಲ್ಲಿ ಅರ್ಥ ಹುಡುಕುವ ಪ್ರಯತ್ನಕ್ಕೆ ಇಲ್ಲಿ ಎಡೆಯೇ ಇಲ್ಲ. ನಾವು ಆಡುವ ಭಾಷೆಗಳ ಮೂಲಕವೇ ಅದಕ್ಕೊಂದು ರೂಪ ಕೊಟ್ಟು, ಅಂದಗೆಡದಂತೆ ಚಂದವಾಗಿ ಮನಸ್ಸಿಗೆ ಸುಗಂಧ ಲೇಪನವಾಗುವ ಹಾಗೆ, ವಿಚಾರ ಸಾಹಿತ್ಯದಿಂದ ನಮ್ಮೆಲ್ಲರಿಗೂ ಅವರು ಬಡಿಸಿರುವ ಆರೋಗ್ಯಕರವಾದ ಪ್ರಸಾದದಂತೆ ನಮ್ಮ ಮನಸ್ಸನ್ನು ಓದಿಸುತ್ತದೆ ಈ ಹೊತ್ತಗೆ.

ಪ್ರತಿಯೊಬ್ಬರೂ ಕೂಡ ಇಂತಹ ಕೃತಿಯನ್ನು ತಮ್ಮ ಮನೆಗಳಿಗೆ ತರಿಸಿ, ಮನಗಳಿಗೆ ಅದನ್ನು ತಿಳಿಸಿ ಮತ್ತು ಮನೆ-ಮನ ಎರಡರಲ್ಲಿಯೂ ಕೂಡ ಅದನ್ನು ಪುಸ್ತಕ ಮನೆಯನ್ನಾಗಿಸಿಕೊಳ್ಳುವುದರ ಮೂಲಕ ಮಸ್ತಕವನ್ನು ಶುಭ್ರವಾಗಿರಿಸಿಕೊಳ್ಳಲಿ ಎನ್ನುವುದು ನನ್ನ ಇಂಗಿತ."

- ಹಿರೇಮಗಳೂರು ಕಣ್ಣನ್ (ಕನ್ನಡ ಪೂಜಾರಿ)

$2.16
ಅರಿವಿನ ದಾರಿ
$2.16

Product Information

Shipping & Returns

Description

"ಗಣಿತ ತಜ್ಞರಾಗಿರುವ ಅಶ್ವತ್ ಎಸ್.ಎಲ್. ಅವರು ನುರಿತ ತಜ್ಞರಂತೆ ಪದಪುಂಜಗಳ ಮೂಲಕ, ಒಮ್ಮೆಗೆ ಕೈಗೆತ್ತಿಕೊಂಡರೆ ಇಡೀ ಪುಸ್ತಕವನ್ನೇ ಓದುವಂತೆ, ಮಸ್ತಕದ ಶುದ್ಧಿಗೆ, ಅದರ ಸಿದ್ಧಿಗೆ ತಕ್ಕ ಬುದ್ಧಿಗೆ ತಾವು ವೃದ್ಧಿಯಾಗಿಸಿಕೊಳ್ಳುವ ಹಾಗೆ 150 ಪುಟಗಳಲ್ಲಿ ನಮಗೆ ಉಡುಗೊರೆಯಾಗಿ **'ಅರಿವಿನ ದಾರಿ'**ಯನ್ನು ನೀಡಿದ್ದಾರೆ.

ಕೇವಲ ಪರೀಕ್ಷೆಗಳಲ್ಲಿ ಅಂಕ ಪಡೆದು ಮೆಚ್ಚುವುದಕ್ಕಿಂತಲೂ, ಶಂಕೆಯಿಲ್ಲದೆ ಬದುಕನ್ನು ಅಚ್ಚುಕಟ್ಟಾಗಿ ನಡೆಸುವಂತಹ ಧೀಮಂತಿಕೆಯ ಶಕ್ತಿಯನ್ನು ಗುರುತಿಸಿಕೊಳ್ಳುವ ಹಾಗೆ ವಿದ್ಯಾರ್ಥಿಗಳಿಗೆ ದರ್ಪಣವಾಗಿಸಿ ಈ ಕೃತಿಯನ್ನು ನೀಡಿದ್ದಾರೆ. ಅವರಿಗೆ ನಾವೆಲ್ಲರೂ ಕೂಡ ಕೃತಜ್ಞರೇ ಹೌದು. ಒಂದೊಂದು ವಿಷಯವನ್ನು ಓದುವಾಗಲೂ ಕೂಡ ಒಬ್ಬೊಬ್ಬ ವ್ಯಕ್ತಿಯ ವ್ಯಕ್ತಿತ್ವ ನಮ್ಮ ಮಸ್ತಕಕ್ಕೆ ಸ್ಪಷ್ಟವಾಗುತ್ತಾ ಹೋಗುತ್ತದೆ. ಸ್ಪುಟವಾದ ಭಾಷೆ, ಸುಲಲಿತ ಶೈಲಿ, ಅರ್ಥವಾಗುವಂತಹ ವಾಕ್ಯಗಳು; ಯಾವುದೇ ಕಠಿಣ ಶಬ್ದಗಳಿಗೆ ಶಬ್ದಕೋಶವನ್ನು ತಡಕಾಡುತ್ತಾ ಅದರಲ್ಲಿ ಅರ್ಥ ಹುಡುಕುವ ಪ್ರಯತ್ನಕ್ಕೆ ಇಲ್ಲಿ ಎಡೆಯೇ ಇಲ್ಲ. ನಾವು ಆಡುವ ಭಾಷೆಗಳ ಮೂಲಕವೇ ಅದಕ್ಕೊಂದು ರೂಪ ಕೊಟ್ಟು, ಅಂದಗೆಡದಂತೆ ಚಂದವಾಗಿ ಮನಸ್ಸಿಗೆ ಸುಗಂಧ ಲೇಪನವಾಗುವ ಹಾಗೆ, ವಿಚಾರ ಸಾಹಿತ್ಯದಿಂದ ನಮ್ಮೆಲ್ಲರಿಗೂ ಅವರು ಬಡಿಸಿರುವ ಆರೋಗ್ಯಕರವಾದ ಪ್ರಸಾದದಂತೆ ನಮ್ಮ ಮನಸ್ಸನ್ನು ಓದಿಸುತ್ತದೆ ಈ ಹೊತ್ತಗೆ.

ಪ್ರತಿಯೊಬ್ಬರೂ ಕೂಡ ಇಂತಹ ಕೃತಿಯನ್ನು ತಮ್ಮ ಮನೆಗಳಿಗೆ ತರಿಸಿ, ಮನಗಳಿಗೆ ಅದನ್ನು ತಿಳಿಸಿ ಮತ್ತು ಮನೆ-ಮನ ಎರಡರಲ್ಲಿಯೂ ಕೂಡ ಅದನ್ನು ಪುಸ್ತಕ ಮನೆಯನ್ನಾಗಿಸಿಕೊಳ್ಳುವುದರ ಮೂಲಕ ಮಸ್ತಕವನ್ನು ಶುಭ್ರವಾಗಿರಿಸಿಕೊಳ್ಳಲಿ ಎನ್ನುವುದು ನನ್ನ ಇಂಗಿತ."

- ಹಿರೇಮಗಳೂರು ಕಣ್ಣನ್ (ಕನ್ನಡ ಪೂಜಾರಿ)

ಅರಿವಿನ ದಾರಿ | Harivu Books