🎉 Up to 70% Off Selected ItemsShop Sale
HomeStore

ಅರ್ನೆಸ್ಟೊ ಚೆ ಗುವಾರ

Product image 1

ಅರ್ನೆಸ್ಟೊ ಚೆ ಗುವಾರ

ಅರ್ನೆಸ್ಟೊ ಚೆ ಗುವಾರ

''ಕ್ರಾಂತಿಯ ಹಂಬಲ ಹೋರಾಟಗಳಲ್ಲಿ ನನ್ನನ್ನು ನಾನು ತೊಡಗಿಸಿ ಕೊಂಡು ಪಡೆದ ಪಕ್ಷ ದೃಷ್ಟಿಕೋನ ನನ್ನ ಹಿಂದಿನ ವೈದ್ಯಕೀಯ ವಿದ್ಯಾರ್ಥಿ ದೆಸೆಯಲ್ಲಿ ಇರಲಿಲ್ಲ. ನಾನು ಎಲ್ಲರಂತೆ ಯಶಸ್ಸಿಗೆ ಆಶಿಸಿದೆ; ನಾನೊಬ್ಬ ಪ್ರಸಿದ್ಧ ಸಂಶೋಧಕನಾಗಿ, ಬಿಡುವಿಲ್ಲದೆ ದುಡಿದು, ಜೀವಿಗಳೆಲ್ಲರಿಗೂ ಲಾಭವಾಗುವಂತಹ ಏನಾದರೂ ಸಂಶೋಧನ ಮಾಡುವ ಕನಸು ಕಾಣುತ್ತಿದೆ. ಆದರೆ ಇವೆಲ್ಲ ವೈಯಕ್ತಿಕ ಯಶಸ್ಸಿಗಾಗಿ ಕಟ್ಟಿದ ಕನಸುಗಳು. ನಮ್ಮೆಲ್ಲರಂತೆ ನಾನೂ ಸಹ ನಮ್ಮ ಪರಿಸರದಿಂದ ರೂಪಿತವಾದ ವ್ಯಕ್ತಿಯಾಗಿದ್ದೆ. 

''`.... ದಾರಿದ್ರ್ಯದಿಂದಾಗಿ, ಹೇಗೆ ತಂದೆ ತಾಯಿಯರು ತಮ್ಮ ಮಕ್ಕಳ ರೋಗಗಳಿಗೆ ಔಷಧಿ ಕೊಡಲಾರದಾಗಿದ್ದರೆಂಬುದನ್ನು ಕಂಡೆ, ಹಸಿವೆ ಮತ್ತು ನರಳಿಕೆಗಳಿಂದ ಪೀಡಿತನಾದ ತಂದೆ ತನ್ನ ಮಗು ಸಾಯುವುದನ್ನು ನಿರ್ವಿಕಾರವಾಗಿ ಸಹಿಸಿಕೊಳ್ಳುವಷ್ಟು ಪಶುಪ್ರಾಯನಾಗಿ ಮನುಷ್ಯನು ಅಥ ಪಾತಾಳಕ್ಕೆ ಜಾರುವುದನ್ನು ಕಂಡೆ. ಪ್ರಸಿದ್ಧ ಸಂಶೋಧಕನಾಗುವುದಕ್ಕಿಂತ ಅಥವಾ ಆರೋಗ್ಯಶಾಸ್ತ್ರಕ್ಕೆ ಒಂದು ಅಮೂಲ್ಯ ಕೊಡುಗೆ ಕೊಡುವುದಕ್ಕಿಂತಲೂ ಯಾವ ರೀತಿಯಲ್ಲೂ ಕನಿಷ್ಠವೆಂದು ಹೇಳಲಾಗದ ಜೀವನದ ಧೈಯ ಇನ್ನೊಂದು ಇದೆಯೆಂದು ನಾನು ಕಂಡುಕೊಂಡೆ - ಈ ಜನರ ಸಹಾಯಕ್ಕೆ ನಾನು ಒದಗಬೇಕೆಂಬ ಜ್ಞಾನೋದಯವಾಗಿತ್ತು."

ಚೆ ಗುವಾರರಂಥ ಕ್ರಾಂತಿಕಾರಿ ಆಯ್ದುಕೊಂಡ ಅತ್ಯಂತ ಕಷ್ಟದ ಆಯ್ಕೆಯನ್ನು, ಅದನ್ನು ನೆರವೇರಿಸುವ ಪ್ರಯತ್ನದಲ್ಲಿ ಒಮ್ಮೆಯೂ ಶತ್ರುವಿನೊಂದಿಗೆ ರಾಜಿಮಾಡಿಕೊಳ್ಳುವ ಭಾವ ಅವರ ತಲೆಯಲ್ಲಿ ಸುಳಿಯಲಿಲ್ಲವೆಂಬುದನ್ನು ಚಿತ್ರಿಸುವ ಕೃತಿ ಇದು. ಚೆ ಅವರ ಬದುಕಿನ, ಅದೇ ವೇಳೆ ಲ್ಯಾಟಿನ್ ಅಮೆರಿಕಾದ ದೇಶಗಳ ಬದುಕಿನ ಮೇಲೆ ಬೆಳಕು ಚೆಲ್ಲುವ ಕೃತಿಯಿದು.

ಸೋವಿಯತ್ ಲೇಖಕ ಐ. ಲಾವ್ರತ್‌ಸ್ಕಿಯವರು ರಷ್ಯನ್ ಭಾಷೆಯಲ್ಲಿ ಬರೆದಿರುವ ಈ ಕೃತಿ ಹಲವಾರು ಭಾಷೆಗಳಲ್ಲಿ ಪ್ರಕಟವಾಗಿದೆ. ಕನ್ನಡಾನುವಾದ ಮೊದಲ ಬಾರಿ 1990ರಲ್ಲಿ ಪ್ರಕಟಗೊಂಡು ಈವರೆಗೆ ಹಲವು ಮರುಮುದ್ರಣಗಳನ್ನು ಕಂಡಿದೆ.
$3.19
ಅರ್ನೆಸ್ಟೊ ಚೆ ಗುವಾರ
$3.19

Product Information

Shipping & Returns

Description

''ಕ್ರಾಂತಿಯ ಹಂಬಲ ಹೋರಾಟಗಳಲ್ಲಿ ನನ್ನನ್ನು ನಾನು ತೊಡಗಿಸಿ ಕೊಂಡು ಪಡೆದ ಪಕ್ಷ ದೃಷ್ಟಿಕೋನ ನನ್ನ ಹಿಂದಿನ ವೈದ್ಯಕೀಯ ವಿದ್ಯಾರ್ಥಿ ದೆಸೆಯಲ್ಲಿ ಇರಲಿಲ್ಲ. ನಾನು ಎಲ್ಲರಂತೆ ಯಶಸ್ಸಿಗೆ ಆಶಿಸಿದೆ; ನಾನೊಬ್ಬ ಪ್ರಸಿದ್ಧ ಸಂಶೋಧಕನಾಗಿ, ಬಿಡುವಿಲ್ಲದೆ ದುಡಿದು, ಜೀವಿಗಳೆಲ್ಲರಿಗೂ ಲಾಭವಾಗುವಂತಹ ಏನಾದರೂ ಸಂಶೋಧನ ಮಾಡುವ ಕನಸು ಕಾಣುತ್ತಿದೆ. ಆದರೆ ಇವೆಲ್ಲ ವೈಯಕ್ತಿಕ ಯಶಸ್ಸಿಗಾಗಿ ಕಟ್ಟಿದ ಕನಸುಗಳು. ನಮ್ಮೆಲ್ಲರಂತೆ ನಾನೂ ಸಹ ನಮ್ಮ ಪರಿಸರದಿಂದ ರೂಪಿತವಾದ ವ್ಯಕ್ತಿಯಾಗಿದ್ದೆ. 

''`.... ದಾರಿದ್ರ್ಯದಿಂದಾಗಿ, ಹೇಗೆ ತಂದೆ ತಾಯಿಯರು ತಮ್ಮ ಮಕ್ಕಳ ರೋಗಗಳಿಗೆ ಔಷಧಿ ಕೊಡಲಾರದಾಗಿದ್ದರೆಂಬುದನ್ನು ಕಂಡೆ, ಹಸಿವೆ ಮತ್ತು ನರಳಿಕೆಗಳಿಂದ ಪೀಡಿತನಾದ ತಂದೆ ತನ್ನ ಮಗು ಸಾಯುವುದನ್ನು ನಿರ್ವಿಕಾರವಾಗಿ ಸಹಿಸಿಕೊಳ್ಳುವಷ್ಟು ಪಶುಪ್ರಾಯನಾಗಿ ಮನುಷ್ಯನು ಅಥ ಪಾತಾಳಕ್ಕೆ ಜಾರುವುದನ್ನು ಕಂಡೆ. ಪ್ರಸಿದ್ಧ ಸಂಶೋಧಕನಾಗುವುದಕ್ಕಿಂತ ಅಥವಾ ಆರೋಗ್ಯಶಾಸ್ತ್ರಕ್ಕೆ ಒಂದು ಅಮೂಲ್ಯ ಕೊಡುಗೆ ಕೊಡುವುದಕ್ಕಿಂತಲೂ ಯಾವ ರೀತಿಯಲ್ಲೂ ಕನಿಷ್ಠವೆಂದು ಹೇಳಲಾಗದ ಜೀವನದ ಧೈಯ ಇನ್ನೊಂದು ಇದೆಯೆಂದು ನಾನು ಕಂಡುಕೊಂಡೆ - ಈ ಜನರ ಸಹಾಯಕ್ಕೆ ನಾನು ಒದಗಬೇಕೆಂಬ ಜ್ಞಾನೋದಯವಾಗಿತ್ತು."

ಚೆ ಗುವಾರರಂಥ ಕ್ರಾಂತಿಕಾರಿ ಆಯ್ದುಕೊಂಡ ಅತ್ಯಂತ ಕಷ್ಟದ ಆಯ್ಕೆಯನ್ನು, ಅದನ್ನು ನೆರವೇರಿಸುವ ಪ್ರಯತ್ನದಲ್ಲಿ ಒಮ್ಮೆಯೂ ಶತ್ರುವಿನೊಂದಿಗೆ ರಾಜಿಮಾಡಿಕೊಳ್ಳುವ ಭಾವ ಅವರ ತಲೆಯಲ್ಲಿ ಸುಳಿಯಲಿಲ್ಲವೆಂಬುದನ್ನು ಚಿತ್ರಿಸುವ ಕೃತಿ ಇದು. ಚೆ ಅವರ ಬದುಕಿನ, ಅದೇ ವೇಳೆ ಲ್ಯಾಟಿನ್ ಅಮೆರಿಕಾದ ದೇಶಗಳ ಬದುಕಿನ ಮೇಲೆ ಬೆಳಕು ಚೆಲ್ಲುವ ಕೃತಿಯಿದು.

ಸೋವಿಯತ್ ಲೇಖಕ ಐ. ಲಾವ್ರತ್‌ಸ್ಕಿಯವರು ರಷ್ಯನ್ ಭಾಷೆಯಲ್ಲಿ ಬರೆದಿರುವ ಈ ಕೃತಿ ಹಲವಾರು ಭಾಷೆಗಳಲ್ಲಿ ಪ್ರಕಟವಾಗಿದೆ. ಕನ್ನಡಾನುವಾದ ಮೊದಲ ಬಾರಿ 1990ರಲ್ಲಿ ಪ್ರಕಟಗೊಂಡು ಈವರೆಗೆ ಹಲವು ಮರುಮುದ್ರಣಗಳನ್ನು ಕಂಡಿದೆ.
ಅರ್ನೆಸ್ಟೊ ಚೆ ಗುವಾರ | Harivu Books