ಭಾವ ತೀರ ಯಾನ
ಸೋಲಿಸಬೇಡ, ಗೆಲಿಸಯ್ಯಾ... ಎಂಬುದು ಇವತ್ತು ಎಲ್ಲರ ಪ್ರಾರ್ಥನೆಯೂ ಆಗಿದೆ. ತಮಾಷೆಯೆಂದರೆ, ಸದಾ ಗೆಲುವಿಗಾಗಿ ಹಂಬಲಿಸುವ, ಗೆಲುವನ್ನೇ ಧ್ಯಾನಿಸುವ ಮನುಷ್ಯ, ರಿಸ್ಕ್ಗೆ ಕೈ ಹಾಕಲು ಹಿಂಜರಿಯುತ್ತಾನೆ. ಹೆದರುತ್ತಾನೆ. ಇವತ್ತಿನ ಸಂದರ್ಭದಲ್ಲಿ ಗೆಲ್ಲಲು ಹೊರಟ ಜನಕ್ಕೆ ಒಬ್ಬ ಹೀರೊ ಬೇಕು. ಕಣ್ಣೆದುರಿಗೆ ಒಂದು ರೋಲ್ ಮಾಡೆಲ್ ಇರಬೇಕು. ಆಗ ಮಾತ್ರ ಮನಸ್ಸೆಂಬುದು ಯಶಸ್ಸಿನ ಕನವರಿಕೆಗೆ ಮುಂದಾಗುತ್ತದೆ. ಗೆಲುವಿನ ಕಥೆಗಳನ್ನು ಮತ್ತೆ ಮತ್ತೆ ಕೇಳಲು ಆಸೆಪಡುತ್ತದೆ. ನನ್ನ ಸಂತೋಷವೆಂದರೆ, ಈ ಪುಸ್ತಕದ ಪ್ರತಿ ಪುಟದಲ್ಲೂ ಜೀವಂತಿಕೆಯಿದೆ. ಗೆಲುವಿನ ಸುವಾಸನೆಯಿದೆ, ಪ್ರೀತಿಯಿದೆ. ಪರೀಕ್ಷೆಗೆ ಹೊರಟು ನಿಂತ ಮಗನ ಹಣೆಗೆ ತಿಲಕವಿಟ್ಟು- 'ಒಳ್ಳೆಯದಾಗುತ್ತೆ ಕಂದಾ, ಹೋಗಿ ಬಾ' ಎಂದು ಅಮ್ಮ ಶುಭ ಹಾರೈಸುತ್ತಾಳಲ್ಲ; ಅಂಥದೊಂದು ಅಕ್ಕರೆಯಿದೆ.
ಕೇಳಿ: ಈ ಪುಸ್ತಕದಲ್ಲಿರುವ ರಿಯಲ್ ಹೀರೋಗಳೆಲ್ಲ ಶೂನ್ಯದಿಂದಲೇ ಬದುಕು ಆರಂಭಿಸಿದವರು. ನನ್ನ ಅದೃಷ್ಟ: ಅವರೆಲ್ಲ ಮಾತಿಗೆ ಸಿಕ್ಕಿದ್ದಾರೆ. ಗಂಟೆಗಟ್ಟಲೆ ಹರಟಿದ್ದಾರೆ. ಸುಖ-ದುಃಖ ಹಂಚಿಕೊಂಡಿದ್ದಾರೆ. ಇಷ್ಟಾದ ಮೇಲೆ, ಈ ರಿಯಲ್ ಹೀರೋಗಳ ಹಳೆಯ ಕಥೆಯನ್ನು ಬರೆಯುವಾಗೆಲ್ಲ, ಅವರಿಗೆ ಎದುರಾದ ಕ್ರೌರ್ಯ, ಅವಮಾನ, ಸಂಕಟವನ್ನು ನೆನೆದು ನಡುಗಿ ಹೋಗಿದ್ದೇನೆ. ಎಷ್ಟೋ ಬಾರಿ, ಬೇರೊಬ್ಬರ ಸಂಕಟ ನನ್ನದೇ ಆದಂತಾಗಿ, ಬರೆವ ಕೈ ತಡವರಿಸಿ, ಗಂಟಲುಬ್ಬಿ ಬಂದು, ಕಣ್ಣೀರು ಕೆನ್ನೆಗಿಳಿದ ಮೋದಕ್ಕೆ ಬೆರಗಾಗಿದ್ದೇನೆ. ಕಡೆಗೊಮ್ಮೆ, ಗೆಲುವೆಂಬುದು ಅವರ ಮನೆಯ ಬಾಗಿಲು ತಟ್ಟಿತು ಎಂದು ಬರೆದ ತಕ್ಷಣ ಸಕ್ಕರೆ ತಿಂದು ಸಂಭ್ರಮಿಸಿದ್ದೇನೆ. ಹೌದು, ಬರೆಯುವ ಸಂದರ್ಭದಲ್ಲಿ ಕಣ್ಣ ಮುಂದೆ ಬೇರೇನೂ ಇಲ್ಲ ಎನ್ನುವಷ್ಟರ ಮಟ್ಟಿಗೆ ಇಲ್ಲಿನ ಬರಹಗಳು ನನ್ನನ್ನು ಆವರಿಸಿಕೊಂಡಿವೆ. ಗೆಲುವೆಂಬುದು, ನನ್ನ ಜೊತೆಗಿರುವ ಎಲ್ಲರಿಗೂ ದಕ್ಕಲಿ ಎಂದು ಪ್ರಾರ್ಥಿಸುವಂತೆಯೂ ಮಾಡಿವೆ.
-ಎ. ಆರ್. ಮಣಿಕಾಂತ್
Product Information
Product Information
Shipping & Returns
Shipping & Returns


ಭಾವ ತೀರ ಯಾನ
ಭಾವ ತೀರ ಯಾನ
ಸೋಲಿಸಬೇಡ, ಗೆಲಿಸಯ್ಯಾ... ಎಂಬುದು ಇವತ್ತು ಎಲ್ಲರ ಪ್ರಾರ್ಥನೆಯೂ ಆಗಿದೆ. ತಮಾಷೆಯೆಂದರೆ, ಸದಾ ಗೆಲುವಿಗಾಗಿ ಹಂಬಲಿಸುವ, ಗೆಲುವನ್ನೇ ಧ್ಯಾನಿಸುವ ಮನುಷ್ಯ, ರಿಸ್ಕ್ಗೆ ಕೈ ಹಾಕಲು ಹಿಂಜರಿಯುತ್ತಾನೆ. ಹೆದರುತ್ತಾನೆ. ಇವತ್ತಿನ ಸಂದರ್ಭದಲ್ಲಿ ಗೆಲ್ಲಲು ಹೊರಟ ಜನಕ್ಕೆ ಒಬ್ಬ ಹೀರೊ ಬೇಕು. ಕಣ್ಣೆದುರಿಗೆ ಒಂದು ರೋಲ್ ಮಾಡೆಲ್ ಇರಬೇಕು. ಆಗ ಮಾತ್ರ ಮನಸ್ಸೆಂಬುದು ಯಶಸ್ಸಿನ ಕನವರಿಕೆಗೆ ಮುಂದಾಗುತ್ತದೆ. ಗೆಲುವಿನ ಕಥೆಗಳನ್ನು ಮತ್ತೆ ಮತ್ತೆ ಕೇಳಲು ಆಸೆಪಡುತ್ತದೆ. ನನ್ನ ಸಂತೋಷವೆಂದರೆ, ಈ ಪುಸ್ತಕದ ಪ್ರತಿ ಪುಟದಲ್ಲೂ ಜೀವಂತಿಕೆಯಿದೆ. ಗೆಲುವಿನ ಸುವಾಸನೆಯಿದೆ, ಪ್ರೀತಿಯಿದೆ. ಪರೀಕ್ಷೆಗೆ ಹೊರಟು ನಿಂತ ಮಗನ ಹಣೆಗೆ ತಿಲಕವಿಟ್ಟು- 'ಒಳ್ಳೆಯದಾಗುತ್ತೆ ಕಂದಾ, ಹೋಗಿ ಬಾ' ಎಂದು ಅಮ್ಮ ಶುಭ ಹಾರೈಸುತ್ತಾಳಲ್ಲ; ಅಂಥದೊಂದು ಅಕ್ಕರೆಯಿದೆ.
ಕೇಳಿ: ಈ ಪುಸ್ತಕದಲ್ಲಿರುವ ರಿಯಲ್ ಹೀರೋಗಳೆಲ್ಲ ಶೂನ್ಯದಿಂದಲೇ ಬದುಕು ಆರಂಭಿಸಿದವರು. ನನ್ನ ಅದೃಷ್ಟ: ಅವರೆಲ್ಲ ಮಾತಿಗೆ ಸಿಕ್ಕಿದ್ದಾರೆ. ಗಂಟೆಗಟ್ಟಲೆ ಹರಟಿದ್ದಾರೆ. ಸುಖ-ದುಃಖ ಹಂಚಿಕೊಂಡಿದ್ದಾರೆ. ಇಷ್ಟಾದ ಮೇಲೆ, ಈ ರಿಯಲ್ ಹೀರೋಗಳ ಹಳೆಯ ಕಥೆಯನ್ನು ಬರೆಯುವಾಗೆಲ್ಲ, ಅವರಿಗೆ ಎದುರಾದ ಕ್ರೌರ್ಯ, ಅವಮಾನ, ಸಂಕಟವನ್ನು ನೆನೆದು ನಡುಗಿ ಹೋಗಿದ್ದೇನೆ. ಎಷ್ಟೋ ಬಾರಿ, ಬೇರೊಬ್ಬರ ಸಂಕಟ ನನ್ನದೇ ಆದಂತಾಗಿ, ಬರೆವ ಕೈ ತಡವರಿಸಿ, ಗಂಟಲುಬ್ಬಿ ಬಂದು, ಕಣ್ಣೀರು ಕೆನ್ನೆಗಿಳಿದ ಮೋದಕ್ಕೆ ಬೆರಗಾಗಿದ್ದೇನೆ. ಕಡೆಗೊಮ್ಮೆ, ಗೆಲುವೆಂಬುದು ಅವರ ಮನೆಯ ಬಾಗಿಲು ತಟ್ಟಿತು ಎಂದು ಬರೆದ ತಕ್ಷಣ ಸಕ್ಕರೆ ತಿಂದು ಸಂಭ್ರಮಿಸಿದ್ದೇನೆ. ಹೌದು, ಬರೆಯುವ ಸಂದರ್ಭದಲ್ಲಿ ಕಣ್ಣ ಮುಂದೆ ಬೇರೇನೂ ಇಲ್ಲ ಎನ್ನುವಷ್ಟರ ಮಟ್ಟಿಗೆ ಇಲ್ಲಿನ ಬರಹಗಳು ನನ್ನನ್ನು ಆವರಿಸಿಕೊಂಡಿವೆ. ಗೆಲುವೆಂಬುದು, ನನ್ನ ಜೊತೆಗಿರುವ ಎಲ್ಲರಿಗೂ ದಕ್ಕಲಿ ಎಂದು ಪ್ರಾರ್ಥಿಸುವಂತೆಯೂ ಮಾಡಿವೆ.
-ಎ. ಆರ್. ಮಣಿಕಾಂತ್
Original: $1.62
-70%$1.62
$0.49Product Information
Product Information
Shipping & Returns
Shipping & Returns
Description
ಸೋಲಿಸಬೇಡ, ಗೆಲಿಸಯ್ಯಾ... ಎಂಬುದು ಇವತ್ತು ಎಲ್ಲರ ಪ್ರಾರ್ಥನೆಯೂ ಆಗಿದೆ. ತಮಾಷೆಯೆಂದರೆ, ಸದಾ ಗೆಲುವಿಗಾಗಿ ಹಂಬಲಿಸುವ, ಗೆಲುವನ್ನೇ ಧ್ಯಾನಿಸುವ ಮನುಷ್ಯ, ರಿಸ್ಕ್ಗೆ ಕೈ ಹಾಕಲು ಹಿಂಜರಿಯುತ್ತಾನೆ. ಹೆದರುತ್ತಾನೆ. ಇವತ್ತಿನ ಸಂದರ್ಭದಲ್ಲಿ ಗೆಲ್ಲಲು ಹೊರಟ ಜನಕ್ಕೆ ಒಬ್ಬ ಹೀರೊ ಬೇಕು. ಕಣ್ಣೆದುರಿಗೆ ಒಂದು ರೋಲ್ ಮಾಡೆಲ್ ಇರಬೇಕು. ಆಗ ಮಾತ್ರ ಮನಸ್ಸೆಂಬುದು ಯಶಸ್ಸಿನ ಕನವರಿಕೆಗೆ ಮುಂದಾಗುತ್ತದೆ. ಗೆಲುವಿನ ಕಥೆಗಳನ್ನು ಮತ್ತೆ ಮತ್ತೆ ಕೇಳಲು ಆಸೆಪಡುತ್ತದೆ. ನನ್ನ ಸಂತೋಷವೆಂದರೆ, ಈ ಪುಸ್ತಕದ ಪ್ರತಿ ಪುಟದಲ್ಲೂ ಜೀವಂತಿಕೆಯಿದೆ. ಗೆಲುವಿನ ಸುವಾಸನೆಯಿದೆ, ಪ್ರೀತಿಯಿದೆ. ಪರೀಕ್ಷೆಗೆ ಹೊರಟು ನಿಂತ ಮಗನ ಹಣೆಗೆ ತಿಲಕವಿಟ್ಟು- 'ಒಳ್ಳೆಯದಾಗುತ್ತೆ ಕಂದಾ, ಹೋಗಿ ಬಾ' ಎಂದು ಅಮ್ಮ ಶುಭ ಹಾರೈಸುತ್ತಾಳಲ್ಲ; ಅಂಥದೊಂದು ಅಕ್ಕರೆಯಿದೆ.
ಕೇಳಿ: ಈ ಪುಸ್ತಕದಲ್ಲಿರುವ ರಿಯಲ್ ಹೀರೋಗಳೆಲ್ಲ ಶೂನ್ಯದಿಂದಲೇ ಬದುಕು ಆರಂಭಿಸಿದವರು. ನನ್ನ ಅದೃಷ್ಟ: ಅವರೆಲ್ಲ ಮಾತಿಗೆ ಸಿಕ್ಕಿದ್ದಾರೆ. ಗಂಟೆಗಟ್ಟಲೆ ಹರಟಿದ್ದಾರೆ. ಸುಖ-ದುಃಖ ಹಂಚಿಕೊಂಡಿದ್ದಾರೆ. ಇಷ್ಟಾದ ಮೇಲೆ, ಈ ರಿಯಲ್ ಹೀರೋಗಳ ಹಳೆಯ ಕಥೆಯನ್ನು ಬರೆಯುವಾಗೆಲ್ಲ, ಅವರಿಗೆ ಎದುರಾದ ಕ್ರೌರ್ಯ, ಅವಮಾನ, ಸಂಕಟವನ್ನು ನೆನೆದು ನಡುಗಿ ಹೋಗಿದ್ದೇನೆ. ಎಷ್ಟೋ ಬಾರಿ, ಬೇರೊಬ್ಬರ ಸಂಕಟ ನನ್ನದೇ ಆದಂತಾಗಿ, ಬರೆವ ಕೈ ತಡವರಿಸಿ, ಗಂಟಲುಬ್ಬಿ ಬಂದು, ಕಣ್ಣೀರು ಕೆನ್ನೆಗಿಳಿದ ಮೋದಕ್ಕೆ ಬೆರಗಾಗಿದ್ದೇನೆ. ಕಡೆಗೊಮ್ಮೆ, ಗೆಲುವೆಂಬುದು ಅವರ ಮನೆಯ ಬಾಗಿಲು ತಟ್ಟಿತು ಎಂದು ಬರೆದ ತಕ್ಷಣ ಸಕ್ಕರೆ ತಿಂದು ಸಂಭ್ರಮಿಸಿದ್ದೇನೆ. ಹೌದು, ಬರೆಯುವ ಸಂದರ್ಭದಲ್ಲಿ ಕಣ್ಣ ಮುಂದೆ ಬೇರೇನೂ ಇಲ್ಲ ಎನ್ನುವಷ್ಟರ ಮಟ್ಟಿಗೆ ಇಲ್ಲಿನ ಬರಹಗಳು ನನ್ನನ್ನು ಆವರಿಸಿಕೊಂಡಿವೆ. ಗೆಲುವೆಂಬುದು, ನನ್ನ ಜೊತೆಗಿರುವ ಎಲ್ಲರಿಗೂ ದಕ್ಕಲಿ ಎಂದು ಪ್ರಾರ್ಥಿಸುವಂತೆಯೂ ಮಾಡಿವೆ.
-ಎ. ಆರ್. ಮಣಿಕಾಂತ್












