🎉 Up to 70% Off Selected ItemsShop Sale
HomeStore

ಬ್ರಹ್ಮಜ್ಞಾನ ಮತ್ತು ಬ್ರಹ್ಮವಿದ್ಯೆ

Product image 1
Product image 2

ಬ್ರಹ್ಮಜ್ಞಾನ ಮತ್ತು ಬ್ರಹ್ಮವಿದ್ಯೆ

ಬ್ರಹ್ಮಜ್ಞಾನ ಮತ್ತು ಬ್ರಹ್ಮವಿದ್ಯೆ

ಈ ಜಗತ್ತಿನಲ್ಲಿ ಒಂದೊಂದು ಹೂವು ಒ೦ದೊ೦ದು ಬಣ್ಣದಲ್ಲಿರುವುದು ವಾಸ್ತವದಲ್ಲಿ ನಿಜವೆಂದೇ ತೋರಿದರೂ ಆ ಎಲ್ಲಾ ಹೂವುಗಳಿಗೂ ಬಣ್ಣ ಮೂಡಿರುವುದು ಬಣ್ಣ ರಹಿತವಾಗಿ ಕಂಡು ಬರುವ ಬೆಳಕಿನ ಕಿರಣಗಳಿಂದ ಎನ್ನೋದು ಗಮನಿಸಬೇಕಾದ ಸತ್ಯ. ಬೆಳಕಿನ ಕಿರಣಗಳನ್ನು ಹೀರಿಕೊಳ್ಳುವ, ಪ್ರತಿಫಲಿಸುವ ಗುಣದಲ್ಲಿ ಹೂವಿನಿಂದ ಹೂವಿಗೆ ಪ್ರತ್ಯೇಕತೆ ಇರುತ್ತದೆ. ಆ ಒಂದು ಗುಣದಿಂದಾಗಿಯೇ ಒಂದೊಂದು ಹೂವು ಒಂದೊಂದು ಬಣ್ಣದಿಂದ ನಮಗೆ ಗೋಚರಿಸುತ್ತದೆ. ಪರಿಪೂರ್ಣ ಬೆಳಕಿನಲ್ಲಿ ಎಲ್ಲಾ ಬಣ್ಣಗಳ ಕಿರಣಗಳು ಅಡಗಿದ್ದರೂ ಅದು ನಮ್ಮ ಕಣ್ಣಿಗೆ ಬಣ್ಣ ರಹಿತವಾಗಿ ಕಂಡುಬರುತ್ತದೆ. ಅದೇ ರೀತಿ ಪರಿಪೂರ್ಣ ವಿಶ್ವ ಪ್ರಜ್ಞೆಯು ರಾಗ ದ್ವೇಷ ರಹಿತವಾಗಿದ್ದರೂ ಮನಸ್ಸಿನ ವಿಭಿನ್ನ ಅಭಿವ್ಯಕ್ತಿ ಸಾಮರ್ಥ್ಯದಿಂದಾಗಿ ಅದೇ ವಿಶ್ವ ಪ್ರಜ್ಞೆಯೇ ವೈಚಾರಿಕತೆ. ಅಸ್ತಿತ್ವವಾದ. ನಾಸ್ತಿಕವಾದ, ಆಸ್ತಿಕವಾದ... ಹೀಗೆ ಹಲವು ರೂಪದಲ್ಲಿ ಅಭಿವ್ಯಕ್ತಗೊಂಡು ನಾನೇ ಬೇರೆ ನನ್ನ ವಿಚಾರವೇ ಬೇರೆ ಎಂಬ ನಿಲುವಿಗೆ ಕಾರಣವಾಗುತ್ತದೆ. ವಿವಿಧತೆ ಎನ್ನೋದು ಪ್ರಕೃತಿ ಈ ಜಗತ್ತನ್ನು ಮುನ್ನಡೆಸುವ ಸೂತ್ರ. ಅದನ್ನೇ 'ಮಾಯೆ' ಎಂದು ಕರೆಯುವುದು. ಆ ಮಾಯೆಯ ಅರಿವಾದರೆ ಆಸ್ತಿಕನಿಗೆ ನಾಸ್ತಿಕ ಪ್ರತ್ಯೇಕ ಅನಿಸುವುದಿಲ್ಲ, ಬೆಳಕಿನಲ್ಲಿರುವವನಿಗೆ ಕತ್ತಲೆಯನ್ನು ಒಪ್ಪಿಕೊಳ್ಳುವುದು ಸಾಧ್ಯವಾದರೆ ಬದುಕು ಸಂಭ್ರಮವಾಗು ಇದೆ, ಬದುಕು ಸಾರ್ಥಕವಾಗುತ್ತದೆ. ಅದೇ ಬ್ರಹ್ಮಜ್ಞಾನ

$1.62
ಬ್ರಹ್ಮಜ್ಞಾನ ಮತ್ತು ಬ್ರಹ್ಮವಿದ್ಯೆ
$1.62

Product Information

Shipping & Returns

Description

ಈ ಜಗತ್ತಿನಲ್ಲಿ ಒಂದೊಂದು ಹೂವು ಒ೦ದೊ೦ದು ಬಣ್ಣದಲ್ಲಿರುವುದು ವಾಸ್ತವದಲ್ಲಿ ನಿಜವೆಂದೇ ತೋರಿದರೂ ಆ ಎಲ್ಲಾ ಹೂವುಗಳಿಗೂ ಬಣ್ಣ ಮೂಡಿರುವುದು ಬಣ್ಣ ರಹಿತವಾಗಿ ಕಂಡು ಬರುವ ಬೆಳಕಿನ ಕಿರಣಗಳಿಂದ ಎನ್ನೋದು ಗಮನಿಸಬೇಕಾದ ಸತ್ಯ. ಬೆಳಕಿನ ಕಿರಣಗಳನ್ನು ಹೀರಿಕೊಳ್ಳುವ, ಪ್ರತಿಫಲಿಸುವ ಗುಣದಲ್ಲಿ ಹೂವಿನಿಂದ ಹೂವಿಗೆ ಪ್ರತ್ಯೇಕತೆ ಇರುತ್ತದೆ. ಆ ಒಂದು ಗುಣದಿಂದಾಗಿಯೇ ಒಂದೊಂದು ಹೂವು ಒಂದೊಂದು ಬಣ್ಣದಿಂದ ನಮಗೆ ಗೋಚರಿಸುತ್ತದೆ. ಪರಿಪೂರ್ಣ ಬೆಳಕಿನಲ್ಲಿ ಎಲ್ಲಾ ಬಣ್ಣಗಳ ಕಿರಣಗಳು ಅಡಗಿದ್ದರೂ ಅದು ನಮ್ಮ ಕಣ್ಣಿಗೆ ಬಣ್ಣ ರಹಿತವಾಗಿ ಕಂಡುಬರುತ್ತದೆ. ಅದೇ ರೀತಿ ಪರಿಪೂರ್ಣ ವಿಶ್ವ ಪ್ರಜ್ಞೆಯು ರಾಗ ದ್ವೇಷ ರಹಿತವಾಗಿದ್ದರೂ ಮನಸ್ಸಿನ ವಿಭಿನ್ನ ಅಭಿವ್ಯಕ್ತಿ ಸಾಮರ್ಥ್ಯದಿಂದಾಗಿ ಅದೇ ವಿಶ್ವ ಪ್ರಜ್ಞೆಯೇ ವೈಚಾರಿಕತೆ. ಅಸ್ತಿತ್ವವಾದ. ನಾಸ್ತಿಕವಾದ, ಆಸ್ತಿಕವಾದ... ಹೀಗೆ ಹಲವು ರೂಪದಲ್ಲಿ ಅಭಿವ್ಯಕ್ತಗೊಂಡು ನಾನೇ ಬೇರೆ ನನ್ನ ವಿಚಾರವೇ ಬೇರೆ ಎಂಬ ನಿಲುವಿಗೆ ಕಾರಣವಾಗುತ್ತದೆ. ವಿವಿಧತೆ ಎನ್ನೋದು ಪ್ರಕೃತಿ ಈ ಜಗತ್ತನ್ನು ಮುನ್ನಡೆಸುವ ಸೂತ್ರ. ಅದನ್ನೇ 'ಮಾಯೆ' ಎಂದು ಕರೆಯುವುದು. ಆ ಮಾಯೆಯ ಅರಿವಾದರೆ ಆಸ್ತಿಕನಿಗೆ ನಾಸ್ತಿಕ ಪ್ರತ್ಯೇಕ ಅನಿಸುವುದಿಲ್ಲ, ಬೆಳಕಿನಲ್ಲಿರುವವನಿಗೆ ಕತ್ತಲೆಯನ್ನು ಒಪ್ಪಿಕೊಳ್ಳುವುದು ಸಾಧ್ಯವಾದರೆ ಬದುಕು ಸಂಭ್ರಮವಾಗು ಇದೆ, ಬದುಕು ಸಾರ್ಥಕವಾಗುತ್ತದೆ. ಅದೇ ಬ್ರಹ್ಮಜ್ಞಾನ

ಬ್ರಹ್ಮಜ್ಞಾನ ಮತ್ತು ಬ್ರಹ್ಮವಿದ್ಯೆ | Harivu Books