🎉 Up to 70% Off Selected ItemsShop Sale
HomeStore

ಬುದ್ಧಚರಣ ಸ್ಪಂದನ

Product image 1

ಬುದ್ಧಚರಣ ಸ್ಪಂದನ

ಬುದ್ಧಚರಣ ಸ್ಪಂದನ

ಕೃತಿ: ಗೋವಿಂದ ಪೈ ಅವರ ವೈಶಾಖಿಯನ್ನು ನಾನು ನನ್ನ ಪದವಿ ತರಗತಿಯಲ್ಲಿ ಪಠ್ಯವಾಗಿ ಓದಿ ಪ್ರಭಾವಿತನಾಗಿದ್ದ. ಆಮೇಲೆ ಡಾ. ಎಲ್‌.ಬಸವರಾಜು ಅವರ ಬುದ್ಧಚರಿತೆ ಓದಿದ್ದೆ. ಆದರೆ, ನಿಮ್ಮ: ಕಾವ್ಯದ ಓದಿನಿಂದ ಜೀವಾಂತರಗಳ ಮೂಲಕ ಬುದ್ಧನನ್ನು ಪೂರ್ಣವಾಗಿ ಸಾಧ್ಯವಾಯಿತು. ಆರಂಭಕಾಂಡ" ಓದುವಾಗಲೇ ನಿಮ್ಮ ಮನಸ್ಸು ಲೌಕಿಕ ಜಗತ್ತಿನ ಎಲ್ಲವನ್ನೂ ಕಳಕೊಂಡು ಬುದ್ಧಚರಣದೆಡೆಗೆ ಪಯಣಿಸಲು ಸಿದ್ಧವಾದ ಪ್ರಶಾಂತತೆ ಕಾಯಿತು ಪೂರ್ವಕಾಂಡದಿಂದ ಮೊದಲಾದ ಕಥೆಗಳ ಉಪದೇಶಗಳು ಅಂತರ್ಗತವಾಗಿ ಮೂಲಕ ಬುದ್ಧಚರಿತದ ಕಥನದ ಸುಖವನ್ನು ತಂದುಕೊಟ್ಟವು. ಮಧ್ಯಕಾಂಡದಿಂದ ತೊಡಗಿ ಪರಿನಿರ್ವಾಣ ಕಾಂಡದವರೆಗೆ ಒಂದೊಂದು ಕಾಂಡವೂ ನಮ್ಮನ್ನು ಒಂದೊಂದು ಕೊಂಡೊಯ್ಯುತ್ತದೆ, ಇಲ್ಲಿ ನಾವು ಕೇವಲ ಓದುಗರಾಗಿ ಉಳಿಯುವುದಿಲ್ಲ, ನಾವೆಲ್ಲ ಶ್ರವಣಭಿಕ್ಕುಗಳಾಗಿಬಿಡುತ್ತೇವೆ. ನಿಮ್ಮ ಬುದ್ಧಚರಣವ ಕಾವ್ಯದ ಹೊರಗೆ ಬುದ್ಧಮೀಮಾಂಸೆಯನ್ನು ಹೃದೃತಮಾಡಿಸಿದ ಮಹಾಕಾವ್ಯ ಅಭಿನಂದನೆಗಿಂತ ಹೆಚ್ಚಾಗಿ ನಾನು ಕೃತಜ್ಞತೆಗಳನ್ನು ಸಲ್ಲಿಸಬೇಕು. ಬುದ್ಧಚರಣ 21ನೇ ಶತಮಾನಕ್ಕೆ ನಿಜವಾಗಿ ಸಲ್ಲುವ ಮಹಾಕಾವ್ಯ

-ಬಿ.ಎ.ವಿವೇಕ ರೈ

ಕವಿ: ನಿರಾಕಾರವನ್ನು ಇನಿತೂ ಭಂಗಗೊಳಿಸದೆ ಪದಗಳ ಮೂಲಕವೇ ಮನಗಾಣುವ ಕಡಿದಾದ ದಾರಿಯಲ್ಲಿ ನುಡಿದುಬಂದ ಕವಿಬಂಧು ಎಚ್ಚೆ ಅವರನ್ನು ಅಕ್ಕರದ ಅಕ್ಕಸಾಲಿಗ ಎಂದು ಅಕ್ಕರೆಯಿಂದ ಕರೆಯುವುದುಂಟು; ಅವರದೇ ಒಂದು ಕವಿತೆಯಲ್ಲಿ, ಜಕಣಾಚಾರಿ ತಾನು ಕೆತ್ತಿದ ಶಿಲ್ಪವೊಂದರ ಮೊಗದಲ್ಲಿ ಏನೋ ಕೊರತೆ ಮನಗಂಡವನೆ, ಆ ವಿಗ್ರಹದ ಕಂಕುಳಲ್ಲಿ ಮೆಲ್ಲಗೆ ಉಳಿಯನ್ನು ಆಡಿಸುತ್ತಾನೆ. ಝಗ್ಗೆಂದು ಅದರ ಮೊಗದಲ್ಲಿ ಮಂದಹಾಸ ಮೂಡಿಬಿಡುತ್ತದೆ! ಕಲೆ ಅನ್ನುವುದು ಜೀವನಕಲೆಯಾಗುವ ಕ್ಷಣ ಅದು. ಇಂಥ ಅಗಣಿತ ಅನುಪಮ ಕ್ಷಣಗಳನ್ನು ಹಿಡಿದು ಮತ್ತೆ ಹಾರಲು ಬಿಡುವ ಅವರ ನಿಡುಗಾಲದ ಕಾವ್ಯ ವಿಲಾಸವು ಒಂದು ಅಖಂಡ ತತ್ತರ ಉಪಾಸನೆಯೇ ಆಗಿದೆ. ತಮ್ಮ ಕಾಣ್ಯ, ಒಕ್ಕಣೆ, ಕೌಶಲ, ವೈವಿಧ್ಯ ಮತ್ತು ಪ್ರಯೋಗಶೀಲತೆಗಳ ಮೂಲಕ ಕಾವ್ಯಾಸಕ್ತರ ಸಂವೇದನೆಯನ್ನು ದಾಹವನ್ನು ಪೋಷಿಸುತ್ತಲೇ ಬಂದಿರುವ ಎಚ್ಚೆಸ್ಟಿ ಅವರಿಗೆ ಸದಾ ನೆಮ್ಮದಿ, ಚಡಪಡಿಕೆ, ಸ್ಫೂರ್ತಿಯನ್ನು ಕೋರುತ್ತೇನೆ.

-ಜಯಂತ ಕಾಯ್ಕಿಣಿ
$2.70
ಬುದ್ಧಚರಣ ಸ್ಪಂದನ
$2.70

Product Information

Shipping & Returns

Description

ಕೃತಿ: ಗೋವಿಂದ ಪೈ ಅವರ ವೈಶಾಖಿಯನ್ನು ನಾನು ನನ್ನ ಪದವಿ ತರಗತಿಯಲ್ಲಿ ಪಠ್ಯವಾಗಿ ಓದಿ ಪ್ರಭಾವಿತನಾಗಿದ್ದ. ಆಮೇಲೆ ಡಾ. ಎಲ್‌.ಬಸವರಾಜು ಅವರ ಬುದ್ಧಚರಿತೆ ಓದಿದ್ದೆ. ಆದರೆ, ನಿಮ್ಮ: ಕಾವ್ಯದ ಓದಿನಿಂದ ಜೀವಾಂತರಗಳ ಮೂಲಕ ಬುದ್ಧನನ್ನು ಪೂರ್ಣವಾಗಿ ಸಾಧ್ಯವಾಯಿತು. ಆರಂಭಕಾಂಡ" ಓದುವಾಗಲೇ ನಿಮ್ಮ ಮನಸ್ಸು ಲೌಕಿಕ ಜಗತ್ತಿನ ಎಲ್ಲವನ್ನೂ ಕಳಕೊಂಡು ಬುದ್ಧಚರಣದೆಡೆಗೆ ಪಯಣಿಸಲು ಸಿದ್ಧವಾದ ಪ್ರಶಾಂತತೆ ಕಾಯಿತು ಪೂರ್ವಕಾಂಡದಿಂದ ಮೊದಲಾದ ಕಥೆಗಳ ಉಪದೇಶಗಳು ಅಂತರ್ಗತವಾಗಿ ಮೂಲಕ ಬುದ್ಧಚರಿತದ ಕಥನದ ಸುಖವನ್ನು ತಂದುಕೊಟ್ಟವು. ಮಧ್ಯಕಾಂಡದಿಂದ ತೊಡಗಿ ಪರಿನಿರ್ವಾಣ ಕಾಂಡದವರೆಗೆ ಒಂದೊಂದು ಕಾಂಡವೂ ನಮ್ಮನ್ನು ಒಂದೊಂದು ಕೊಂಡೊಯ್ಯುತ್ತದೆ, ಇಲ್ಲಿ ನಾವು ಕೇವಲ ಓದುಗರಾಗಿ ಉಳಿಯುವುದಿಲ್ಲ, ನಾವೆಲ್ಲ ಶ್ರವಣಭಿಕ್ಕುಗಳಾಗಿಬಿಡುತ್ತೇವೆ. ನಿಮ್ಮ ಬುದ್ಧಚರಣವ ಕಾವ್ಯದ ಹೊರಗೆ ಬುದ್ಧಮೀಮಾಂಸೆಯನ್ನು ಹೃದೃತಮಾಡಿಸಿದ ಮಹಾಕಾವ್ಯ ಅಭಿನಂದನೆಗಿಂತ ಹೆಚ್ಚಾಗಿ ನಾನು ಕೃತಜ್ಞತೆಗಳನ್ನು ಸಲ್ಲಿಸಬೇಕು. ಬುದ್ಧಚರಣ 21ನೇ ಶತಮಾನಕ್ಕೆ ನಿಜವಾಗಿ ಸಲ್ಲುವ ಮಹಾಕಾವ್ಯ

-ಬಿ.ಎ.ವಿವೇಕ ರೈ

ಕವಿ: ನಿರಾಕಾರವನ್ನು ಇನಿತೂ ಭಂಗಗೊಳಿಸದೆ ಪದಗಳ ಮೂಲಕವೇ ಮನಗಾಣುವ ಕಡಿದಾದ ದಾರಿಯಲ್ಲಿ ನುಡಿದುಬಂದ ಕವಿಬಂಧು ಎಚ್ಚೆ ಅವರನ್ನು ಅಕ್ಕರದ ಅಕ್ಕಸಾಲಿಗ ಎಂದು ಅಕ್ಕರೆಯಿಂದ ಕರೆಯುವುದುಂಟು; ಅವರದೇ ಒಂದು ಕವಿತೆಯಲ್ಲಿ, ಜಕಣಾಚಾರಿ ತಾನು ಕೆತ್ತಿದ ಶಿಲ್ಪವೊಂದರ ಮೊಗದಲ್ಲಿ ಏನೋ ಕೊರತೆ ಮನಗಂಡವನೆ, ಆ ವಿಗ್ರಹದ ಕಂಕುಳಲ್ಲಿ ಮೆಲ್ಲಗೆ ಉಳಿಯನ್ನು ಆಡಿಸುತ್ತಾನೆ. ಝಗ್ಗೆಂದು ಅದರ ಮೊಗದಲ್ಲಿ ಮಂದಹಾಸ ಮೂಡಿಬಿಡುತ್ತದೆ! ಕಲೆ ಅನ್ನುವುದು ಜೀವನಕಲೆಯಾಗುವ ಕ್ಷಣ ಅದು. ಇಂಥ ಅಗಣಿತ ಅನುಪಮ ಕ್ಷಣಗಳನ್ನು ಹಿಡಿದು ಮತ್ತೆ ಹಾರಲು ಬಿಡುವ ಅವರ ನಿಡುಗಾಲದ ಕಾವ್ಯ ವಿಲಾಸವು ಒಂದು ಅಖಂಡ ತತ್ತರ ಉಪಾಸನೆಯೇ ಆಗಿದೆ. ತಮ್ಮ ಕಾಣ್ಯ, ಒಕ್ಕಣೆ, ಕೌಶಲ, ವೈವಿಧ್ಯ ಮತ್ತು ಪ್ರಯೋಗಶೀಲತೆಗಳ ಮೂಲಕ ಕಾವ್ಯಾಸಕ್ತರ ಸಂವೇದನೆಯನ್ನು ದಾಹವನ್ನು ಪೋಷಿಸುತ್ತಲೇ ಬಂದಿರುವ ಎಚ್ಚೆಸ್ಟಿ ಅವರಿಗೆ ಸದಾ ನೆಮ್ಮದಿ, ಚಡಪಡಿಕೆ, ಸ್ಫೂರ್ತಿಯನ್ನು ಕೋರುತ್ತೇನೆ.

-ಜಯಂತ ಕಾಯ್ಕಿಣಿ
ಬುದ್ಧಚರಣ ಸ್ಪಂದನ | Harivu Books