🎉 Up to 70% Off Selected ItemsShop Sale
HomeStore

ಕೌನ್ಸೆಲಿಂಗ್ ಕಥೆಗಳು

Product image 1
Product image 2

ಕೌನ್ಸೆಲಿಂಗ್ ಕಥೆಗಳು

ಕೌನ್ಸೆಲಿಂಗ್ ಕಥೆಗಳು

ಆತ್ಮೀಯರಾದ ಶ್ರೀಮತಿ ಅಶ್ವಿನಿ ರಾಮಾನುಜಂ ಅಪರೂಪದ ಆಪ್ತ ಸಲಹೆಗಾರರು. ಅನೇಕ ಜನರಿಗೆ ಸಲಹೆ ನೀಡಿ ಆಪ್ತರಾದವರು. ಈಗ ಅವರು 'ಕೌನ್ಸೆಲಿಂಗ್ ಕಥೆಗಳು' ಎಂಬ ಸುಂದರವಾದ ಗ್ರಂಥವನ್ನು ರಚಿಸಿದ್ದಾರೆ. ತಮ್ಮ ಅನುಭವಕ್ಕೆ ಬಂದ, ಕೇಳಿದ, ಓದಿದ, ಅನೇಕ ಸಂದರ್ಭಗಳಿಗೆ ತಾವು ಧ್ವನಿಯಾಗಿ, 'ಹೇಗೆ ಸರಿಯಾದ ಸಮಯಕ್ಕೆ ದೊರೆತ ಸಲಹೆ ಪ್ರಯೋಜನಕಾರಿಯಾದೀತು?' ಎಂಬುದನ್ನು ಸರಳ, ಸುಲಲಿತ ಮಾತುಗಳಲ್ಲಿ ಹೇಳಿದ್ದಾರೆ. ಪುಸ್ತಕ ಒಂದು ಪತ್ತೇದಾರಿ ಕಾದಂಬರಿಯ ಹಾಗೆ ಓದಿಸಿಕೊಳ್ಳುತ್ತಾ ಹೋಗುತ್ತದೆ. ಕೊನೆಗೆ ಪರಿಹಾರ ಕಂಡಾಗ ಓದುಗರ ಮನಸ್ಸು ನಿರಾಳವಾಗುತ್ತದೆ. ಅಲ್ಲಿರುವ ಘಟನೆಗಳು, ಅವುಗಳನ್ನು ಹೇಳುವ, ಕುತೂಹಲವನ್ನು ಉಳಿಸಿಕೊಳ್ಳುವ ಆದರೆ ವೃತ್ತಿಪರತೆಯನ್ನು ಬಿಟ್ಟುಕೊಡದ ವಿಧಾನ ಮನಸ್ಸನ್ನು ತಟ್ಟುತ್ತದೆ.

ಡಾ. ಗುರುರಾಜ ಕರಜಗಿ

ಮನಃಶಾಸ್ತ್ರಜ್ಞ ಅಥವಾ ಆಪ್ತಸಲಹೆಗಾರರ ಬಳಿ ಬರುವ ಹಲವಾರು ವ್ಯಕ್ತಿಗಳ ಸಮಸ್ಯೆಗಳ ವಿಶ್ಲೇಷಣೆಯನ್ನು ಇಲ್ಲಿ ಅರ್ಥಪೂರ್ಣವಾಗಿ ಮಾಡಲಾಗಿದೆ. ಪ್ರತಿಯೊಂದು ಕಥೆಯಲ್ಲಿ ವಿಷಯ ವೈವಿಧ್ಯತೆ, ಭಿನ್ನತೆ ಹಾಗೂ ವಿಶಿಷ್ಟತೆ ಇದೆ. ಕೇವಲ ಒಂದು ವರ್ಗ ಅಂದರೆ ಮಕ್ಕಳು, ಯುವಕರು ಅಥವಾ ಹಿರಿಯರ ಪ್ರಕರಣಗಳಿಗೆ ಸೀಮಿತವಾಗದೆ, ಎಲ್ಲ ಹಂತದ ಜನರ ಮಾನಸಿಕ ತುಮುಲಗಳ ಅನಾವರಣವನ್ನು ನಾವಿಲ್ಲಿ ಕಾಣಬಹುದಾಗಿದೆ. ಪ್ರತಿಯೊಂದು ಕಥೆಯ ಮೂಲಕ ಸಮಾಜಕ್ಕೆ ಎಚ್ಚರಿಕೆ ಇದೆ. ಕೈಗೊಳ್ಳಬೇಕಾದ ಜಾಗೃತಿ ಕ್ರಮಗಳ ಸಲಹೆಯೂ ಇದೆ. ಮನಃಶಾಸ್ತ್ರಜ್ಞನಾಗಿ, ಮನೋವೈದ್ಯನಾಗಿ, ಆಪ್ತಸಲಹೆಗಾರನಾಗಿ ಅನುಭವದ ಮೇಲೆ ಹೇಳುವುದೆಂದರೆ, ಈ ಕೃತಿ ಸಮಾಜಕ್ಕೆ ಅತ್ಯುಪಯುಕ್ತಕರ.

ಡಾ. ಆನಂದ ಪಾಂಡುರಂಗಿ

$1.73
ಕೌನ್ಸೆಲಿಂಗ್ ಕಥೆಗಳು
$1.73

Product Information

Shipping & Returns

Description

ಆತ್ಮೀಯರಾದ ಶ್ರೀಮತಿ ಅಶ್ವಿನಿ ರಾಮಾನುಜಂ ಅಪರೂಪದ ಆಪ್ತ ಸಲಹೆಗಾರರು. ಅನೇಕ ಜನರಿಗೆ ಸಲಹೆ ನೀಡಿ ಆಪ್ತರಾದವರು. ಈಗ ಅವರು 'ಕೌನ್ಸೆಲಿಂಗ್ ಕಥೆಗಳು' ಎಂಬ ಸುಂದರವಾದ ಗ್ರಂಥವನ್ನು ರಚಿಸಿದ್ದಾರೆ. ತಮ್ಮ ಅನುಭವಕ್ಕೆ ಬಂದ, ಕೇಳಿದ, ಓದಿದ, ಅನೇಕ ಸಂದರ್ಭಗಳಿಗೆ ತಾವು ಧ್ವನಿಯಾಗಿ, 'ಹೇಗೆ ಸರಿಯಾದ ಸಮಯಕ್ಕೆ ದೊರೆತ ಸಲಹೆ ಪ್ರಯೋಜನಕಾರಿಯಾದೀತು?' ಎಂಬುದನ್ನು ಸರಳ, ಸುಲಲಿತ ಮಾತುಗಳಲ್ಲಿ ಹೇಳಿದ್ದಾರೆ. ಪುಸ್ತಕ ಒಂದು ಪತ್ತೇದಾರಿ ಕಾದಂಬರಿಯ ಹಾಗೆ ಓದಿಸಿಕೊಳ್ಳುತ್ತಾ ಹೋಗುತ್ತದೆ. ಕೊನೆಗೆ ಪರಿಹಾರ ಕಂಡಾಗ ಓದುಗರ ಮನಸ್ಸು ನಿರಾಳವಾಗುತ್ತದೆ. ಅಲ್ಲಿರುವ ಘಟನೆಗಳು, ಅವುಗಳನ್ನು ಹೇಳುವ, ಕುತೂಹಲವನ್ನು ಉಳಿಸಿಕೊಳ್ಳುವ ಆದರೆ ವೃತ್ತಿಪರತೆಯನ್ನು ಬಿಟ್ಟುಕೊಡದ ವಿಧಾನ ಮನಸ್ಸನ್ನು ತಟ್ಟುತ್ತದೆ.

ಡಾ. ಗುರುರಾಜ ಕರಜಗಿ

ಮನಃಶಾಸ್ತ್ರಜ್ಞ ಅಥವಾ ಆಪ್ತಸಲಹೆಗಾರರ ಬಳಿ ಬರುವ ಹಲವಾರು ವ್ಯಕ್ತಿಗಳ ಸಮಸ್ಯೆಗಳ ವಿಶ್ಲೇಷಣೆಯನ್ನು ಇಲ್ಲಿ ಅರ್ಥಪೂರ್ಣವಾಗಿ ಮಾಡಲಾಗಿದೆ. ಪ್ರತಿಯೊಂದು ಕಥೆಯಲ್ಲಿ ವಿಷಯ ವೈವಿಧ್ಯತೆ, ಭಿನ್ನತೆ ಹಾಗೂ ವಿಶಿಷ್ಟತೆ ಇದೆ. ಕೇವಲ ಒಂದು ವರ್ಗ ಅಂದರೆ ಮಕ್ಕಳು, ಯುವಕರು ಅಥವಾ ಹಿರಿಯರ ಪ್ರಕರಣಗಳಿಗೆ ಸೀಮಿತವಾಗದೆ, ಎಲ್ಲ ಹಂತದ ಜನರ ಮಾನಸಿಕ ತುಮುಲಗಳ ಅನಾವರಣವನ್ನು ನಾವಿಲ್ಲಿ ಕಾಣಬಹುದಾಗಿದೆ. ಪ್ರತಿಯೊಂದು ಕಥೆಯ ಮೂಲಕ ಸಮಾಜಕ್ಕೆ ಎಚ್ಚರಿಕೆ ಇದೆ. ಕೈಗೊಳ್ಳಬೇಕಾದ ಜಾಗೃತಿ ಕ್ರಮಗಳ ಸಲಹೆಯೂ ಇದೆ. ಮನಃಶಾಸ್ತ್ರಜ್ಞನಾಗಿ, ಮನೋವೈದ್ಯನಾಗಿ, ಆಪ್ತಸಲಹೆಗಾರನಾಗಿ ಅನುಭವದ ಮೇಲೆ ಹೇಳುವುದೆಂದರೆ, ಈ ಕೃತಿ ಸಮಾಜಕ್ಕೆ ಅತ್ಯುಪಯುಕ್ತಕರ.

ಡಾ. ಆನಂದ ಪಾಂಡುರಂಗಿ

ಕೌನ್ಸೆಲಿಂಗ್ ಕಥೆಗಳು | Harivu Books