ಹೆಕ್ಕಿ ತಂದ ನೆನಪುಗಳು
ಹಳೆಯ ಕಳೆದು ಹೋದ ದಿನಗಳಿಗೆ ಒಮ್ಮೆಯಾದರೂ ನಾನು ಹಿಂದಿರುಗಬೇಕು ಏನನ್ನಾದರೂ ಬದಲಿಸಬೇಕೆಂದಲ್ಲ, ಕೆಲವನ್ನು ಮತ್ತೊಂದು ಬಾರಿ ಅನುಭವಿಸುವ ಖುಷಿಗಷ್ಟೇ...”
ಹೌದು, ನೆನಪುಗಳ ಚಾಪೆಯಲ್ಲಿ ಖುಷಿಯ ಘಟನೆಗಳು ಮತ್ತು ವಿಷಾದದ, ಬೇಡದ, ಪಶ್ಚಾತ್ತಾಪದ, ನೋವಿನ ಹತ್ತು ಹಲವಾರು ಘಟನೆಗಳು ಜೊತೆಯಾಗಿ ಹೆಣೆದುಕೊಂಡು ಬಿಟ್ಟಿರುತ್ತವೆ. ಯಾವುದನ್ನು ಕಿತ್ತರೂ ಹೆಣಿಗೆ ಅಳ್ಳಕವಾಗಿ ಚಾಪೆ ಹಾಳಾಗುತ್ತದೆ. ಇದ್ದಂತೆಯೇ ಉಳಿಸಿಕೊಂಡರೆ ಬೇಡವಾದ ಕಡ್ಡಿಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತ ಕಾಡಿಸುತ್ತವೆ, ಆದರೆ ಚಾಪೆ ಗಟ್ಟಿಯಾಗಿಯೇ ಉಳಿಯುತ್ತದೆ. ಗುರುರಾಜ ಕೊಡ್ಕಣಿಯವರ "ಹೆಕ್ಕಿ ತಂದ ನೆನಪುಗಳು" ಇಂಥದ್ದೇ ಮೂವತ್ತೊಂದು ಬರಹಗಳ ಸಂಕಲನ. ಬಾಲ್ಯದ ಘಟನೆಗಳಿಂದ ಶುರುವಾಗಿ, ಯೌವನ ಮತ್ತು ಯೌವನ ಮಾಗುವವರೆಗಿನ ಅವರ ಬರಹಗಳನ್ನು ಓದುವುದೇ ಒಂದು ಖುಷಿ. ಕೆಲವರ ಬಾಲ್ಯ ತುಂಬ ಸಮೃದ್ದವಾಗಿರುತ್ತದೆ. ಅಂಥವರನ್ನು ಪುಣ್ಯವಂತರು ಎನ್ನುತ್ತೇನೆ ನಾನು. ಗುರುರಾಜ ಕೊಡ್ಕಣಿ ಕೂಡಾ ಇಂಥ ಪುಣ್ಯವಂತರಲ್ಲಿ ಒಬ್ಬರು! ಅವರ ಬಾಲ್ಯದ ಬಗೆಗಿನ ಸುಮಾರು ಬರಹಗಳು ತುಟಿಯಂಚಿನಲ್ಲಿ ನಗೆ ಉಕ್ಕಿಸಿದರೆ, ಕೆಲವು ಉರುಳಾಡಿ ನಗಿಸುವಂತಿವೆ. ಅದರಲ್ಲೂ ಅವರ ಬಾಲ್ಯ ಹಳ್ಳಿಯಲ್ಲಿ ಕಳೆದಿರುವುದರಿಂದ ಅದು ಸಾಕಷ್ಟು ವರ್ಣರಂಜಿತವಾಗಿದೆ ಮತ್ತು ವಿಸ್ತಾರ ಕ್ಯಾನ್ವಾಸಿನಲ್ಲಿ ಚಿತ್ರಿತವಾಗಿದೆ. ಈ ಎಲ್ಲದರ ಬಗ್ಗೆ ಬರೆಯುವಾಗ ಅವರ ಬರಹದಲ್ಲಿ ಆ ದಿನಗಳನ್ನು "ಮತ್ತೊಮ್ಮೆ ಜೀವಿಸಿದ ಖುಷಿ ಕಾಣಿಸುತ್ತದೆಯಷ್ಟೇ ಹೊರತು, ನಮ್ಮ ಕಾಲವೇ ಚೆಂದ ಎನ್ನುವ ಹಳಹಳಿಕೆ ಕಾಣಬರುವುದಿಲ್ಲ. ಹಾಗಾಗಿ ಓದುವಾಗ ಯಾವುದೇ ಋಣಾತ್ಮಕ ಚಿಂತನೆ ನಮ್ಮಲ್ಲಿ ಮೂಡುವುದಿಲ್ಲ. ಯೌವನದ ಒಂದಿಷ್ಟು ಎಡವಟ್ಟುಗಳ ಬಗ್ಗೆಯೂ ದಾಖಲಿಸುತ್ತಾರಾದರೂ, ಅವುಗಳನ್ನು ಕೂಡಾ ಮೀರಿ ಬದುಕು ಕಟ್ಟಿಕೊಂಡ ಪರಿಣಾಮವಾಗಿ ಹಗುರವಾಗಿ ಓದಿಸಿಕೊಂಡು ಬಿಡುತ್ತವೆ.
Product Information
Product Information
Shipping & Returns
Shipping & Returns


ಹೆಕ್ಕಿ ತಂದ ನೆನಪುಗಳು
ಹೆಕ್ಕಿ ತಂದ ನೆನಪುಗಳು
ಹಳೆಯ ಕಳೆದು ಹೋದ ದಿನಗಳಿಗೆ ಒಮ್ಮೆಯಾದರೂ ನಾನು ಹಿಂದಿರುಗಬೇಕು ಏನನ್ನಾದರೂ ಬದಲಿಸಬೇಕೆಂದಲ್ಲ, ಕೆಲವನ್ನು ಮತ್ತೊಂದು ಬಾರಿ ಅನುಭವಿಸುವ ಖುಷಿಗಷ್ಟೇ...”
ಹೌದು, ನೆನಪುಗಳ ಚಾಪೆಯಲ್ಲಿ ಖುಷಿಯ ಘಟನೆಗಳು ಮತ್ತು ವಿಷಾದದ, ಬೇಡದ, ಪಶ್ಚಾತ್ತಾಪದ, ನೋವಿನ ಹತ್ತು ಹಲವಾರು ಘಟನೆಗಳು ಜೊತೆಯಾಗಿ ಹೆಣೆದುಕೊಂಡು ಬಿಟ್ಟಿರುತ್ತವೆ. ಯಾವುದನ್ನು ಕಿತ್ತರೂ ಹೆಣಿಗೆ ಅಳ್ಳಕವಾಗಿ ಚಾಪೆ ಹಾಳಾಗುತ್ತದೆ. ಇದ್ದಂತೆಯೇ ಉಳಿಸಿಕೊಂಡರೆ ಬೇಡವಾದ ಕಡ್ಡಿಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತ ಕಾಡಿಸುತ್ತವೆ, ಆದರೆ ಚಾಪೆ ಗಟ್ಟಿಯಾಗಿಯೇ ಉಳಿಯುತ್ತದೆ. ಗುರುರಾಜ ಕೊಡ್ಕಣಿಯವರ "ಹೆಕ್ಕಿ ತಂದ ನೆನಪುಗಳು" ಇಂಥದ್ದೇ ಮೂವತ್ತೊಂದು ಬರಹಗಳ ಸಂಕಲನ. ಬಾಲ್ಯದ ಘಟನೆಗಳಿಂದ ಶುರುವಾಗಿ, ಯೌವನ ಮತ್ತು ಯೌವನ ಮಾಗುವವರೆಗಿನ ಅವರ ಬರಹಗಳನ್ನು ಓದುವುದೇ ಒಂದು ಖುಷಿ. ಕೆಲವರ ಬಾಲ್ಯ ತುಂಬ ಸಮೃದ್ದವಾಗಿರುತ್ತದೆ. ಅಂಥವರನ್ನು ಪುಣ್ಯವಂತರು ಎನ್ನುತ್ತೇನೆ ನಾನು. ಗುರುರಾಜ ಕೊಡ್ಕಣಿ ಕೂಡಾ ಇಂಥ ಪುಣ್ಯವಂತರಲ್ಲಿ ಒಬ್ಬರು! ಅವರ ಬಾಲ್ಯದ ಬಗೆಗಿನ ಸುಮಾರು ಬರಹಗಳು ತುಟಿಯಂಚಿನಲ್ಲಿ ನಗೆ ಉಕ್ಕಿಸಿದರೆ, ಕೆಲವು ಉರುಳಾಡಿ ನಗಿಸುವಂತಿವೆ. ಅದರಲ್ಲೂ ಅವರ ಬಾಲ್ಯ ಹಳ್ಳಿಯಲ್ಲಿ ಕಳೆದಿರುವುದರಿಂದ ಅದು ಸಾಕಷ್ಟು ವರ್ಣರಂಜಿತವಾಗಿದೆ ಮತ್ತು ವಿಸ್ತಾರ ಕ್ಯಾನ್ವಾಸಿನಲ್ಲಿ ಚಿತ್ರಿತವಾಗಿದೆ. ಈ ಎಲ್ಲದರ ಬಗ್ಗೆ ಬರೆಯುವಾಗ ಅವರ ಬರಹದಲ್ಲಿ ಆ ದಿನಗಳನ್ನು "ಮತ್ತೊಮ್ಮೆ ಜೀವಿಸಿದ ಖುಷಿ ಕಾಣಿಸುತ್ತದೆಯಷ್ಟೇ ಹೊರತು, ನಮ್ಮ ಕಾಲವೇ ಚೆಂದ ಎನ್ನುವ ಹಳಹಳಿಕೆ ಕಾಣಬರುವುದಿಲ್ಲ. ಹಾಗಾಗಿ ಓದುವಾಗ ಯಾವುದೇ ಋಣಾತ್ಮಕ ಚಿಂತನೆ ನಮ್ಮಲ್ಲಿ ಮೂಡುವುದಿಲ್ಲ. ಯೌವನದ ಒಂದಿಷ್ಟು ಎಡವಟ್ಟುಗಳ ಬಗ್ಗೆಯೂ ದಾಖಲಿಸುತ್ತಾರಾದರೂ, ಅವುಗಳನ್ನು ಕೂಡಾ ಮೀರಿ ಬದುಕು ಕಟ್ಟಿಕೊಂಡ ಪರಿಣಾಮವಾಗಿ ಹಗುರವಾಗಿ ಓದಿಸಿಕೊಂಡು ಬಿಡುತ್ತವೆ.
Product Information
Product Information
Shipping & Returns
Shipping & Returns
Description
ಹಳೆಯ ಕಳೆದು ಹೋದ ದಿನಗಳಿಗೆ ಒಮ್ಮೆಯಾದರೂ ನಾನು ಹಿಂದಿರುಗಬೇಕು ಏನನ್ನಾದರೂ ಬದಲಿಸಬೇಕೆಂದಲ್ಲ, ಕೆಲವನ್ನು ಮತ್ತೊಂದು ಬಾರಿ ಅನುಭವಿಸುವ ಖುಷಿಗಷ್ಟೇ...”
ಹೌದು, ನೆನಪುಗಳ ಚಾಪೆಯಲ್ಲಿ ಖುಷಿಯ ಘಟನೆಗಳು ಮತ್ತು ವಿಷಾದದ, ಬೇಡದ, ಪಶ್ಚಾತ್ತಾಪದ, ನೋವಿನ ಹತ್ತು ಹಲವಾರು ಘಟನೆಗಳು ಜೊತೆಯಾಗಿ ಹೆಣೆದುಕೊಂಡು ಬಿಟ್ಟಿರುತ್ತವೆ. ಯಾವುದನ್ನು ಕಿತ್ತರೂ ಹೆಣಿಗೆ ಅಳ್ಳಕವಾಗಿ ಚಾಪೆ ಹಾಳಾಗುತ್ತದೆ. ಇದ್ದಂತೆಯೇ ಉಳಿಸಿಕೊಂಡರೆ ಬೇಡವಾದ ಕಡ್ಡಿಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತ ಕಾಡಿಸುತ್ತವೆ, ಆದರೆ ಚಾಪೆ ಗಟ್ಟಿಯಾಗಿಯೇ ಉಳಿಯುತ್ತದೆ. ಗುರುರಾಜ ಕೊಡ್ಕಣಿಯವರ "ಹೆಕ್ಕಿ ತಂದ ನೆನಪುಗಳು" ಇಂಥದ್ದೇ ಮೂವತ್ತೊಂದು ಬರಹಗಳ ಸಂಕಲನ. ಬಾಲ್ಯದ ಘಟನೆಗಳಿಂದ ಶುರುವಾಗಿ, ಯೌವನ ಮತ್ತು ಯೌವನ ಮಾಗುವವರೆಗಿನ ಅವರ ಬರಹಗಳನ್ನು ಓದುವುದೇ ಒಂದು ಖುಷಿ. ಕೆಲವರ ಬಾಲ್ಯ ತುಂಬ ಸಮೃದ್ದವಾಗಿರುತ್ತದೆ. ಅಂಥವರನ್ನು ಪುಣ್ಯವಂತರು ಎನ್ನುತ್ತೇನೆ ನಾನು. ಗುರುರಾಜ ಕೊಡ್ಕಣಿ ಕೂಡಾ ಇಂಥ ಪುಣ್ಯವಂತರಲ್ಲಿ ಒಬ್ಬರು! ಅವರ ಬಾಲ್ಯದ ಬಗೆಗಿನ ಸುಮಾರು ಬರಹಗಳು ತುಟಿಯಂಚಿನಲ್ಲಿ ನಗೆ ಉಕ್ಕಿಸಿದರೆ, ಕೆಲವು ಉರುಳಾಡಿ ನಗಿಸುವಂತಿವೆ. ಅದರಲ್ಲೂ ಅವರ ಬಾಲ್ಯ ಹಳ್ಳಿಯಲ್ಲಿ ಕಳೆದಿರುವುದರಿಂದ ಅದು ಸಾಕಷ್ಟು ವರ್ಣರಂಜಿತವಾಗಿದೆ ಮತ್ತು ವಿಸ್ತಾರ ಕ್ಯಾನ್ವಾಸಿನಲ್ಲಿ ಚಿತ್ರಿತವಾಗಿದೆ. ಈ ಎಲ್ಲದರ ಬಗ್ಗೆ ಬರೆಯುವಾಗ ಅವರ ಬರಹದಲ್ಲಿ ಆ ದಿನಗಳನ್ನು "ಮತ್ತೊಮ್ಮೆ ಜೀವಿಸಿದ ಖುಷಿ ಕಾಣಿಸುತ್ತದೆಯಷ್ಟೇ ಹೊರತು, ನಮ್ಮ ಕಾಲವೇ ಚೆಂದ ಎನ್ನುವ ಹಳಹಳಿಕೆ ಕಾಣಬರುವುದಿಲ್ಲ. ಹಾಗಾಗಿ ಓದುವಾಗ ಯಾವುದೇ ಋಣಾತ್ಮಕ ಚಿಂತನೆ ನಮ್ಮಲ್ಲಿ ಮೂಡುವುದಿಲ್ಲ. ಯೌವನದ ಒಂದಿಷ್ಟು ಎಡವಟ್ಟುಗಳ ಬಗ್ಗೆಯೂ ದಾಖಲಿಸುತ್ತಾರಾದರೂ, ಅವುಗಳನ್ನು ಕೂಡಾ ಮೀರಿ ಬದುಕು ಕಟ್ಟಿಕೊಂಡ ಪರಿಣಾಮವಾಗಿ ಹಗುರವಾಗಿ ಓದಿಸಿಕೊಂಡು ಬಿಡುತ್ತವೆ.











