🎉 Up to 70% Off Selected ItemsShop Sale
HomeStore

ಕಂದನ ಕಾವ್ಯಮಾಲೆ

Product image 1

ಕಂದನ ಕಾವ್ಯಮಾಲೆ

ಕಂದನ ಕಾವ್ಯಮಾಲೆ

ತಮ್ಮ ಅನ್ಯದುರ್ಲಭ ವ್ಯಕ್ತಿತ್ವ ಮತ್ತು ವೈವಿಧ್ಯತರ ಬರವಣಿಗೆಯಿಂದ ಕನ್ನಡ ಸಾಹಿತ್ಯಕ್ಕೆ ಬೆಲೆ ಬಾಳುವ ಬಳುವಳಿಯನ್ನು ಓದಿಸಿರುವ ಮಹನೀಯ ಚೇತನ ಡಾ. ಜಿ. ಪಿ. ರಾಜರತ್ನಂ. ಸುದೀರ್ಘ ಕಾಲದ ಬಹು ವಿಪುಲ ಬರಹಗಳ ಜೊತೆಗೆ ಹಿರಿಯ ಮತ್ತು ನವೋದಿತರ ಲಿಖಾವಟ್ಟುಗಳ ಸತ್ವ, ಸವಿಗಳನ್ನು ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಮನಗಾಣಿಸುವ ಕೈಂಕರ್ಯವನ್ನು ಕೈಕೊಂಡು ಕೃತಕೃತ್ಯರಾದವರು ಜಿ. ಪಿ. ರಾಜರತ್ನಂ.

ಅವರಿಂದ ರಚಿತವಾದ ಶಿಶು ಸಾಹಿತ್ಯ, ನಾಟಕ ಹಾಗೂ ಇತರ ಗದ್ಯ ಲೇಖನಗಳ ಇಪ್ಪತ್ತೈದು ಕೃತಿಗಳು ಇದೀಗ ಬೆಂಗಳೂರಿನ ಸುವಿಖ್ಯಾತ ಸಪ್ಪ ಬುಕ್ ಹೌಸ್ ವತಿಯಿಂದ ಪುನಃ ಬೆಳಕು ಕಾಣುತ್ತಿವೆ. ಇಲ್ಲಿನ ಬರಹಗಳಲ್ಲಿ ರಾಜರತ್ನಂ ಅವರ ಹೃದಯಂಗಮ ಶೈಲಿಯ, ಸುಗಮ ಗ್ರಹಿಕೆಯ ಆಪ್ತ ನುಡಿಗಾರಿಕೆಯ ಮೊಹರು ಅಷ್ಟೊತ್ತಿದೆ. ಅವರ ಸರ್ವ ಸಮನ್ವಯ ರೂಪಿ ನಿರ್ಮಲಾಂತಃಕರಣದ ಮುಕ್ತ ಸೆಲೆಯ ಗಂಡು ಧ್ವನಿ ಅನುರಣಿಸಿದೆ.

ಜಿ. ಪಿ. ರಾಜರತ್ನಂ ವಿರಚಿತ ಇನ್ನೂರ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತರುವ ಗುರುತರ ಹಾಗೂ ಸಾಹಸಮಯ ಯೋಜನೆಯನ್ನು ಸಪ್ನ ಬುಕ್ ಹೌಸ್ ಹಮ್ಮಿಕೊಂಡಿರುವುದು ಅಭಿನಂದನೀಯ ಸಂಗತಿ, ಕನ್ನಡದ ರತ್ನಪ್ರಾಯ ಸಾಹಿತ್ಯ ಪರಿಚಾರಕನ ಕೃತಿಗಳಿಗೆ ಮರುಜೀವ ಹಾಗೂ ಪ್ರಸಾರವನ್ನು ಒದಗಿಸಲಿರುವ ಈ ಪ್ರಕಾಶನ ಸಂಸ್ಥೆಗೆ ಅಮಿತ ಯಶಸ್ಸನ್ನು ಹಾರೈಸುತ್ತೇನೆ. ಸಿರಿಗನ್ನಡಂ ಗೆಲ್ಲೆ.

• ಪ್ರೊ. ಕೆ. ಎಸ್. ನಿಸಾರ್ ಅಹಮದ್

$2.70
ಕಂದನ ಕಾವ್ಯಮಾಲೆ
$2.70

Product Information

Shipping & Returns

Description

ತಮ್ಮ ಅನ್ಯದುರ್ಲಭ ವ್ಯಕ್ತಿತ್ವ ಮತ್ತು ವೈವಿಧ್ಯತರ ಬರವಣಿಗೆಯಿಂದ ಕನ್ನಡ ಸಾಹಿತ್ಯಕ್ಕೆ ಬೆಲೆ ಬಾಳುವ ಬಳುವಳಿಯನ್ನು ಓದಿಸಿರುವ ಮಹನೀಯ ಚೇತನ ಡಾ. ಜಿ. ಪಿ. ರಾಜರತ್ನಂ. ಸುದೀರ್ಘ ಕಾಲದ ಬಹು ವಿಪುಲ ಬರಹಗಳ ಜೊತೆಗೆ ಹಿರಿಯ ಮತ್ತು ನವೋದಿತರ ಲಿಖಾವಟ್ಟುಗಳ ಸತ್ವ, ಸವಿಗಳನ್ನು ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಮನಗಾಣಿಸುವ ಕೈಂಕರ್ಯವನ್ನು ಕೈಕೊಂಡು ಕೃತಕೃತ್ಯರಾದವರು ಜಿ. ಪಿ. ರಾಜರತ್ನಂ.

ಅವರಿಂದ ರಚಿತವಾದ ಶಿಶು ಸಾಹಿತ್ಯ, ನಾಟಕ ಹಾಗೂ ಇತರ ಗದ್ಯ ಲೇಖನಗಳ ಇಪ್ಪತ್ತೈದು ಕೃತಿಗಳು ಇದೀಗ ಬೆಂಗಳೂರಿನ ಸುವಿಖ್ಯಾತ ಸಪ್ಪ ಬುಕ್ ಹೌಸ್ ವತಿಯಿಂದ ಪುನಃ ಬೆಳಕು ಕಾಣುತ್ತಿವೆ. ಇಲ್ಲಿನ ಬರಹಗಳಲ್ಲಿ ರಾಜರತ್ನಂ ಅವರ ಹೃದಯಂಗಮ ಶೈಲಿಯ, ಸುಗಮ ಗ್ರಹಿಕೆಯ ಆಪ್ತ ನುಡಿಗಾರಿಕೆಯ ಮೊಹರು ಅಷ್ಟೊತ್ತಿದೆ. ಅವರ ಸರ್ವ ಸಮನ್ವಯ ರೂಪಿ ನಿರ್ಮಲಾಂತಃಕರಣದ ಮುಕ್ತ ಸೆಲೆಯ ಗಂಡು ಧ್ವನಿ ಅನುರಣಿಸಿದೆ.

ಜಿ. ಪಿ. ರಾಜರತ್ನಂ ವಿರಚಿತ ಇನ್ನೂರ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತರುವ ಗುರುತರ ಹಾಗೂ ಸಾಹಸಮಯ ಯೋಜನೆಯನ್ನು ಸಪ್ನ ಬುಕ್ ಹೌಸ್ ಹಮ್ಮಿಕೊಂಡಿರುವುದು ಅಭಿನಂದನೀಯ ಸಂಗತಿ, ಕನ್ನಡದ ರತ್ನಪ್ರಾಯ ಸಾಹಿತ್ಯ ಪರಿಚಾರಕನ ಕೃತಿಗಳಿಗೆ ಮರುಜೀವ ಹಾಗೂ ಪ್ರಸಾರವನ್ನು ಒದಗಿಸಲಿರುವ ಈ ಪ್ರಕಾಶನ ಸಂಸ್ಥೆಗೆ ಅಮಿತ ಯಶಸ್ಸನ್ನು ಹಾರೈಸುತ್ತೇನೆ. ಸಿರಿಗನ್ನಡಂ ಗೆಲ್ಲೆ.

• ಪ್ರೊ. ಕೆ. ಎಸ್. ನಿಸಾರ್ ಅಹಮದ್

ಕಂದನ ಕಾವ್ಯಮಾಲೆ | Harivu Books