🎉 Up to 70% Off Selected ItemsShop Sale
HomeStore

ಕ್ಷಣಕ್ಕೊಂದು ಕಥೆ

Product image 1

ಕ್ಷಣಕ್ಕೊಂದು ಕಥೆ

ಕ್ಷಣಕ್ಕೊಂದು ಕಥೆ

'ಭಾರತೀಯರು ನೂರಾರು ವರ್ಷಗಳಿಂದ ತಮ್ಮ ಮಕ್ಕಳಿಗೆ ಕಥೆಗಳ ಮೂಲಕ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಆ ಮಕ್ಕಳಲ್ಲಿ ಸೃಜನಶೀಲತೆ, ಸೂಕ್ಷ್ಮಬುದ್ಧಿ, ವಿವೇಕ ಮತ್ತು ಧರ್ಮಶ್ರದ್ಧೆ ಬೆಳೆಯುವುದಕ್ಕೆ ಕಥೆಗಳೇ ಕಾರಣ. ಇದು ಪರಿಣಾಮಕಾರಿಯಾದ ವಿಧಾನ. ನಾವೂ ಇದನ್ನು ಅನುಸರಿಸಬೇಕಾಗಿದೆ.'

-ಬರಾಕ್ ಒಬಾಮಾ, 

ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷರು

ಇತ್ತೀಚೆಗೆ ಕಥೆಗಳನ್ನು ಸ್ವಾರಸ್ಯಕರವಾಗಿ ಹೇಳುವವರು ಮತ್ತು ಕುತೂಹಲದಿಂದ ಕೇಳಿಸಿಕೊಳ್ಳುವವರು ಕಡಿಮೆಯಾಗಿದ್ದಾರೆ ಎನ್ನುವ ಅಳಲು ಸತ್ಯಕ್ಕೆ ದೂರವಲ್ಲ. ಈ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ಮಕ್ಕಳಿಗಾಗಿಯೇ ಬರೆದಿರುವ 120 ಸಣ್ಣ ಕಥೆಗಳ ಸಂಕಲನವೇ ಈ ಹೊತ್ತಗೆ 'ಕ್ಷಣಕ್ಕೊಂದು ಕಥೆ.'

ಮಕ್ಕಳ ಚಂಚಲ ಬುದ್ಧಿಯನ್ನು ಹಿಡಿದಿಡಲು ಸಣ್ಣ ಕಥೆಗಿಂತ ಉತ್ತಮ ಮಾರ್ಗವಿಲ್ಲ. 'ಕ್ಷಣಕ್ಕೊಂದು ಕಥೆ' ಯ ಮೂಲಕ, ಮೌಲ್ಯಗಳನ್ನು ಪ್ರತಿಪಾದಿಸುವ ಪ್ರಯತ್ನ ಇಲ್ಲಿ ನಡೆದಿದೆ.

ಈ ಕೃತಿಯನ್ನು ರಚಿಸಿರುವ ಸಂಪಟೂರು ವಿಶ್ವನಾಥ್ ಕಳೆದ 45 ವರ್ಷಗಳಿಂದ ಸುಮಾರು 89 ಪುಸ್ತಕಗಳನ್ನೂ, 3000ಕ್ಕೂ ಮಿಕ್ಕಿ ಲೇಖನಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕೆಡಮಿ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಹಾಸ್ಯಬ್ರಹ್ಮ ಬೀಚಿ ಪ್ರಶಸ್ತಿ, ಸಪ್ನ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ವಿಭೂಷಣ ಪ್ರಶಸ್ತಿ ಮುಂತಾದವನ್ನು ಪಡೆದಿರುವ ವಿಶ್ವನಾಥ್‌ರ 'ಕ್ಷಣಕ್ಕೊಂದು ಕಥೆ' ಸಪ್ನ ಬುಕ್ ಹೌಸ್ ಪ್ರಕಟಿಸುತ್ತಿರುವ ಲೇಖಕರ 14ನೆಯ ಪುಸ್ತಕ.

ಕನ್ನಡ ನಾಡಿನ ಪುಸ್ತಕಪ್ರಿಯರು ಕೊಂಡು ಓದಬೇಕಾದ, ಮಕ್ಕಳ ಕಥೆ ಪುಸ್ತಕ ಇದು.

ಪ್ರಕಾಶಕರು.

$1.08
ಕ್ಷಣಕ್ಕೊಂದು ಕಥೆ
$1.08

Product Information

Shipping & Returns

Description

'ಭಾರತೀಯರು ನೂರಾರು ವರ್ಷಗಳಿಂದ ತಮ್ಮ ಮಕ್ಕಳಿಗೆ ಕಥೆಗಳ ಮೂಲಕ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಆ ಮಕ್ಕಳಲ್ಲಿ ಸೃಜನಶೀಲತೆ, ಸೂಕ್ಷ್ಮಬುದ್ಧಿ, ವಿವೇಕ ಮತ್ತು ಧರ್ಮಶ್ರದ್ಧೆ ಬೆಳೆಯುವುದಕ್ಕೆ ಕಥೆಗಳೇ ಕಾರಣ. ಇದು ಪರಿಣಾಮಕಾರಿಯಾದ ವಿಧಾನ. ನಾವೂ ಇದನ್ನು ಅನುಸರಿಸಬೇಕಾಗಿದೆ.'

-ಬರಾಕ್ ಒಬಾಮಾ, 

ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷರು

ಇತ್ತೀಚೆಗೆ ಕಥೆಗಳನ್ನು ಸ್ವಾರಸ್ಯಕರವಾಗಿ ಹೇಳುವವರು ಮತ್ತು ಕುತೂಹಲದಿಂದ ಕೇಳಿಸಿಕೊಳ್ಳುವವರು ಕಡಿಮೆಯಾಗಿದ್ದಾರೆ ಎನ್ನುವ ಅಳಲು ಸತ್ಯಕ್ಕೆ ದೂರವಲ್ಲ. ಈ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ಮಕ್ಕಳಿಗಾಗಿಯೇ ಬರೆದಿರುವ 120 ಸಣ್ಣ ಕಥೆಗಳ ಸಂಕಲನವೇ ಈ ಹೊತ್ತಗೆ 'ಕ್ಷಣಕ್ಕೊಂದು ಕಥೆ.'

ಮಕ್ಕಳ ಚಂಚಲ ಬುದ್ಧಿಯನ್ನು ಹಿಡಿದಿಡಲು ಸಣ್ಣ ಕಥೆಗಿಂತ ಉತ್ತಮ ಮಾರ್ಗವಿಲ್ಲ. 'ಕ್ಷಣಕ್ಕೊಂದು ಕಥೆ' ಯ ಮೂಲಕ, ಮೌಲ್ಯಗಳನ್ನು ಪ್ರತಿಪಾದಿಸುವ ಪ್ರಯತ್ನ ಇಲ್ಲಿ ನಡೆದಿದೆ.

ಈ ಕೃತಿಯನ್ನು ರಚಿಸಿರುವ ಸಂಪಟೂರು ವಿಶ್ವನಾಥ್ ಕಳೆದ 45 ವರ್ಷಗಳಿಂದ ಸುಮಾರು 89 ಪುಸ್ತಕಗಳನ್ನೂ, 3000ಕ್ಕೂ ಮಿಕ್ಕಿ ಲೇಖನಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕೆಡಮಿ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಹಾಸ್ಯಬ್ರಹ್ಮ ಬೀಚಿ ಪ್ರಶಸ್ತಿ, ಸಪ್ನ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ವಿಭೂಷಣ ಪ್ರಶಸ್ತಿ ಮುಂತಾದವನ್ನು ಪಡೆದಿರುವ ವಿಶ್ವನಾಥ್‌ರ 'ಕ್ಷಣಕ್ಕೊಂದು ಕಥೆ' ಸಪ್ನ ಬುಕ್ ಹೌಸ್ ಪ್ರಕಟಿಸುತ್ತಿರುವ ಲೇಖಕರ 14ನೆಯ ಪುಸ್ತಕ.

ಕನ್ನಡ ನಾಡಿನ ಪುಸ್ತಕಪ್ರಿಯರು ಕೊಂಡು ಓದಬೇಕಾದ, ಮಕ್ಕಳ ಕಥೆ ಪುಸ್ತಕ ಇದು.

ಪ್ರಕಾಶಕರು.

ಕ್ಷಣಕ್ಕೊಂದು ಕಥೆ | Harivu Books