ನಾಲ್ಕು ಋತುಗಳ ಹುಡುಗಿ
ನಾಗಶ್ರೀ ಅವರು ತಮ್ಮ ಮೊದಲ ಸಂಕಲನದಲ್ಲಿಯೇ ಬೆಳೆಯುವ ಕವಿಯಾಗಿ ಭರವಸೆ ಮೂಡಿಸಿದ್ದಾರೆ. ಈ ಸಂಕಲನದಲ್ಲಿನ ಕವಿತೆಗಳು ಕೇವಲ ವೈಯಕ್ತಿಕ ನೆಲೆಯಲ್ಲಷ್ಟೇ ನಿಲ್ಲದೆ, ಸಾಮಾಜಿಕ ಆಯಾಮಗಳನ್ನು ಪಡೆದಿವೆ. 'ನಡೆದುಬಿಡಬೇಕು ಆಚೆ' ಎಂದುಕೊಂಡರೂ ಸಾವಧಾನದಲ್ಲಿ ಇದ್ದಂತೆ ತೋರುತ್ತದೆ. ಮೆಲ್ಲಗಿನ ದನಿಯಲ್ಲೇ ಹೇಳಬೇಕಾದುದನ್ನು ತಣ್ಣಗೆ, ಓದುಗನ ಒಳಗೆ ನಾಟುವಂತೆ ಹೇಳುವುದು ಇಲ್ಲಿನ ಕವಿತೆಗಳ ಶಕ್ತಿ. ನಾಗಶ್ರೀ ಅವರ ಕವಿತೆಗಳಲ್ಲಿ ಇಷ್ಟವಾದ ಮತ್ತೊಂದು ಗುಣವೆಂದರೆ ಸ್ವಂತಿಕೆ. ಚಂದದ ನಗೆಯ 'ನಾಲ್ಕು ಋತುಗಳ ಹುಡುಗಿ'ಯು ಸಮಕಾಲೀನ ಸಂಕಲನಗಳಲ್ಲಿ ಹತ್ತರಲ್ಲೊಬ್ಬ ಕವಿಯಾಗದೆ, ಹೊಸ ಬಣ್ಣದ ಚಿತ್ರ ಬಿಡಿಸುತ್ತಾರೆ ಎಂಬ ಭರವಸೆಯನ್ನು ಕವಿತೆಗಳ ಮೂಲಕವೇ ಮೂಡಿಸಿದ್ದಾರೆ. 'ನಾಲ್ಕು ಋತುಗಳ ಹುಡುಗಿ'ಗೆ ಅಭಿನಂದನೆಗಳು.
— ಎಂ. ಆರ್. ಭಗವತಿ, ಬೆಂಗಳೂರು
ಬದುಕಿನ ಅನುಭವಕ್ಕೆ ದಕ್ಕಿದ ಬಾಲ್ಯ, ಹದಿಹರೆಯ, ಯೌವನ ಹಾಗೂ ಅದರಿಂದಾಚೆಯ ಪ್ರಬುದ್ಧ ದಿನಗಳ ಕವಿತೆಗಳು ಇಲ್ಲಿವೆ. ಇವರ ಕವಿತೆಗಳ ಲಯ, ಸಾಲಿನಿಂದ ಸಾಲಿಗೆ ಮುಂದುವರಿಯುವ ಬಂಧ ಮತ್ತು ಅರ್ಥವಂತಿಕೆ ಗಮನಸೆಳೆಯುವಂತಿವೆ. ಜೀವನ ಪ್ರೀತಿ, ಅಲ್ಲಲ್ಲಿ ಇಣಕಿಹಾಕುವ ವಿಷಾದ, ಮರುಕ್ಷಣದ ಆಶಾವಾದ, ಹಬ್ಬ-ಆಚರಣೆಗಳ ಸಡಗರ, ಪ್ರೀತಿಯ ಅಪ್ಪ, ಅಮ್ಮ, ಸಂಗಾತಿ, ಮನುಷ್ಯ ಸಂಬಂಧಗಳು ಹಾಗೂ ಅವು ಕೊಡುವ ಸುಖ-ನೋವು ಎಲ್ಲವೂ ಇಲ್ಲಿ ಕವಿತೆಯಾಗಿವೆ.
ಇಲ್ಲಿ 'ನೀಲಿ ಮೋಹದ ತರುಣಿ'ಯಿದ್ದಾಳೆ, 'ಕೇಳುವ ಕಿವಿಯಿರದೆಯೂ ಜೀವ ಮಿಡಿತದ ಸದ್ದಾಗುವುದು', 'ಸುಮವೊಂದು ಸೂಜಿಯಾಗಿ ಇರಿಯಬಹುದು' ಎನ್ನುವ ಪ್ರಬುದ್ಧತೆಯೂ ಇದೆ. 'ಮಂತ್ರದಂಡದ ಮುಂದೆ' ತಾನೇ ಕವಿತೆಯಾಗಬೇಕೆಂದು ಕಾದುನಿಂತ ಮುಗ್ಧೆಯೂ ಇದ್ದಾಳೆ. ಕಾವ್ಯಲೋಕಕ್ಕೆ ಪ್ರವೇಶಿಸಿರುವ ಕನಸುಗಣ್ಣಿನ ಪ್ರತಿಭೆಗೆ ಪ್ರೀತಿಯ ಸ್ವಾಗತ. ನಾಗಶ್ರೀ ಅವರ ಕಾವ್ಯ ಮತ್ತಷ್ಟು ಹೊಸ ಲೋಕಗಳಿಗೆ ತೆರೆದುಕೊಳ್ಳಲಿ, ಎಲ್ಲ ಒಳ್ಳೆಯದೂ ಅವರಿಗಿರಲಿ ಎಂದು ಹಾರೈಸುತ್ತೇನೆ.
— ವಿಜಯಶ್ರೀ ಹಾಲಾಡಿ, ದಕ್ಷಿಣ ಕನ್ನಡ
Product Information
Product Information
Shipping & Returns
Shipping & Returns


ನಾಲ್ಕು ಋತುಗಳ ಹುಡುಗಿ
ನಾಲ್ಕು ಋತುಗಳ ಹುಡುಗಿ
ನಾಗಶ್ರೀ ಅವರು ತಮ್ಮ ಮೊದಲ ಸಂಕಲನದಲ್ಲಿಯೇ ಬೆಳೆಯುವ ಕವಿಯಾಗಿ ಭರವಸೆ ಮೂಡಿಸಿದ್ದಾರೆ. ಈ ಸಂಕಲನದಲ್ಲಿನ ಕವಿತೆಗಳು ಕೇವಲ ವೈಯಕ್ತಿಕ ನೆಲೆಯಲ್ಲಷ್ಟೇ ನಿಲ್ಲದೆ, ಸಾಮಾಜಿಕ ಆಯಾಮಗಳನ್ನು ಪಡೆದಿವೆ. 'ನಡೆದುಬಿಡಬೇಕು ಆಚೆ' ಎಂದುಕೊಂಡರೂ ಸಾವಧಾನದಲ್ಲಿ ಇದ್ದಂತೆ ತೋರುತ್ತದೆ. ಮೆಲ್ಲಗಿನ ದನಿಯಲ್ಲೇ ಹೇಳಬೇಕಾದುದನ್ನು ತಣ್ಣಗೆ, ಓದುಗನ ಒಳಗೆ ನಾಟುವಂತೆ ಹೇಳುವುದು ಇಲ್ಲಿನ ಕವಿತೆಗಳ ಶಕ್ತಿ. ನಾಗಶ್ರೀ ಅವರ ಕವಿತೆಗಳಲ್ಲಿ ಇಷ್ಟವಾದ ಮತ್ತೊಂದು ಗುಣವೆಂದರೆ ಸ್ವಂತಿಕೆ. ಚಂದದ ನಗೆಯ 'ನಾಲ್ಕು ಋತುಗಳ ಹುಡುಗಿ'ಯು ಸಮಕಾಲೀನ ಸಂಕಲನಗಳಲ್ಲಿ ಹತ್ತರಲ್ಲೊಬ್ಬ ಕವಿಯಾಗದೆ, ಹೊಸ ಬಣ್ಣದ ಚಿತ್ರ ಬಿಡಿಸುತ್ತಾರೆ ಎಂಬ ಭರವಸೆಯನ್ನು ಕವಿತೆಗಳ ಮೂಲಕವೇ ಮೂಡಿಸಿದ್ದಾರೆ. 'ನಾಲ್ಕು ಋತುಗಳ ಹುಡುಗಿ'ಗೆ ಅಭಿನಂದನೆಗಳು.
— ಎಂ. ಆರ್. ಭಗವತಿ, ಬೆಂಗಳೂರು
ಬದುಕಿನ ಅನುಭವಕ್ಕೆ ದಕ್ಕಿದ ಬಾಲ್ಯ, ಹದಿಹರೆಯ, ಯೌವನ ಹಾಗೂ ಅದರಿಂದಾಚೆಯ ಪ್ರಬುದ್ಧ ದಿನಗಳ ಕವಿತೆಗಳು ಇಲ್ಲಿವೆ. ಇವರ ಕವಿತೆಗಳ ಲಯ, ಸಾಲಿನಿಂದ ಸಾಲಿಗೆ ಮುಂದುವರಿಯುವ ಬಂಧ ಮತ್ತು ಅರ್ಥವಂತಿಕೆ ಗಮನಸೆಳೆಯುವಂತಿವೆ. ಜೀವನ ಪ್ರೀತಿ, ಅಲ್ಲಲ್ಲಿ ಇಣಕಿಹಾಕುವ ವಿಷಾದ, ಮರುಕ್ಷಣದ ಆಶಾವಾದ, ಹಬ್ಬ-ಆಚರಣೆಗಳ ಸಡಗರ, ಪ್ರೀತಿಯ ಅಪ್ಪ, ಅಮ್ಮ, ಸಂಗಾತಿ, ಮನುಷ್ಯ ಸಂಬಂಧಗಳು ಹಾಗೂ ಅವು ಕೊಡುವ ಸುಖ-ನೋವು ಎಲ್ಲವೂ ಇಲ್ಲಿ ಕವಿತೆಯಾಗಿವೆ.
ಇಲ್ಲಿ 'ನೀಲಿ ಮೋಹದ ತರುಣಿ'ಯಿದ್ದಾಳೆ, 'ಕೇಳುವ ಕಿವಿಯಿರದೆಯೂ ಜೀವ ಮಿಡಿತದ ಸದ್ದಾಗುವುದು', 'ಸುಮವೊಂದು ಸೂಜಿಯಾಗಿ ಇರಿಯಬಹುದು' ಎನ್ನುವ ಪ್ರಬುದ್ಧತೆಯೂ ಇದೆ. 'ಮಂತ್ರದಂಡದ ಮುಂದೆ' ತಾನೇ ಕವಿತೆಯಾಗಬೇಕೆಂದು ಕಾದುನಿಂತ ಮುಗ್ಧೆಯೂ ಇದ್ದಾಳೆ. ಕಾವ್ಯಲೋಕಕ್ಕೆ ಪ್ರವೇಶಿಸಿರುವ ಕನಸುಗಣ್ಣಿನ ಪ್ರತಿಭೆಗೆ ಪ್ರೀತಿಯ ಸ್ವಾಗತ. ನಾಗಶ್ರೀ ಅವರ ಕಾವ್ಯ ಮತ್ತಷ್ಟು ಹೊಸ ಲೋಕಗಳಿಗೆ ತೆರೆದುಕೊಳ್ಳಲಿ, ಎಲ್ಲ ಒಳ್ಳೆಯದೂ ಅವರಿಗಿರಲಿ ಎಂದು ಹಾರೈಸುತ್ತೇನೆ.
— ವಿಜಯಶ್ರೀ ಹಾಲಾಡಿ, ದಕ್ಷಿಣ ಕನ್ನಡ
Original: $1.30
-70%$1.30
$0.39Product Information
Product Information
Shipping & Returns
Shipping & Returns
Description
ನಾಗಶ್ರೀ ಅವರು ತಮ್ಮ ಮೊದಲ ಸಂಕಲನದಲ್ಲಿಯೇ ಬೆಳೆಯುವ ಕವಿಯಾಗಿ ಭರವಸೆ ಮೂಡಿಸಿದ್ದಾರೆ. ಈ ಸಂಕಲನದಲ್ಲಿನ ಕವಿತೆಗಳು ಕೇವಲ ವೈಯಕ್ತಿಕ ನೆಲೆಯಲ್ಲಷ್ಟೇ ನಿಲ್ಲದೆ, ಸಾಮಾಜಿಕ ಆಯಾಮಗಳನ್ನು ಪಡೆದಿವೆ. 'ನಡೆದುಬಿಡಬೇಕು ಆಚೆ' ಎಂದುಕೊಂಡರೂ ಸಾವಧಾನದಲ್ಲಿ ಇದ್ದಂತೆ ತೋರುತ್ತದೆ. ಮೆಲ್ಲಗಿನ ದನಿಯಲ್ಲೇ ಹೇಳಬೇಕಾದುದನ್ನು ತಣ್ಣಗೆ, ಓದುಗನ ಒಳಗೆ ನಾಟುವಂತೆ ಹೇಳುವುದು ಇಲ್ಲಿನ ಕವಿತೆಗಳ ಶಕ್ತಿ. ನಾಗಶ್ರೀ ಅವರ ಕವಿತೆಗಳಲ್ಲಿ ಇಷ್ಟವಾದ ಮತ್ತೊಂದು ಗುಣವೆಂದರೆ ಸ್ವಂತಿಕೆ. ಚಂದದ ನಗೆಯ 'ನಾಲ್ಕು ಋತುಗಳ ಹುಡುಗಿ'ಯು ಸಮಕಾಲೀನ ಸಂಕಲನಗಳಲ್ಲಿ ಹತ್ತರಲ್ಲೊಬ್ಬ ಕವಿಯಾಗದೆ, ಹೊಸ ಬಣ್ಣದ ಚಿತ್ರ ಬಿಡಿಸುತ್ತಾರೆ ಎಂಬ ಭರವಸೆಯನ್ನು ಕವಿತೆಗಳ ಮೂಲಕವೇ ಮೂಡಿಸಿದ್ದಾರೆ. 'ನಾಲ್ಕು ಋತುಗಳ ಹುಡುಗಿ'ಗೆ ಅಭಿನಂದನೆಗಳು.
— ಎಂ. ಆರ್. ಭಗವತಿ, ಬೆಂಗಳೂರು
ಬದುಕಿನ ಅನುಭವಕ್ಕೆ ದಕ್ಕಿದ ಬಾಲ್ಯ, ಹದಿಹರೆಯ, ಯೌವನ ಹಾಗೂ ಅದರಿಂದಾಚೆಯ ಪ್ರಬುದ್ಧ ದಿನಗಳ ಕವಿತೆಗಳು ಇಲ್ಲಿವೆ. ಇವರ ಕವಿತೆಗಳ ಲಯ, ಸಾಲಿನಿಂದ ಸಾಲಿಗೆ ಮುಂದುವರಿಯುವ ಬಂಧ ಮತ್ತು ಅರ್ಥವಂತಿಕೆ ಗಮನಸೆಳೆಯುವಂತಿವೆ. ಜೀವನ ಪ್ರೀತಿ, ಅಲ್ಲಲ್ಲಿ ಇಣಕಿಹಾಕುವ ವಿಷಾದ, ಮರುಕ್ಷಣದ ಆಶಾವಾದ, ಹಬ್ಬ-ಆಚರಣೆಗಳ ಸಡಗರ, ಪ್ರೀತಿಯ ಅಪ್ಪ, ಅಮ್ಮ, ಸಂಗಾತಿ, ಮನುಷ್ಯ ಸಂಬಂಧಗಳು ಹಾಗೂ ಅವು ಕೊಡುವ ಸುಖ-ನೋವು ಎಲ್ಲವೂ ಇಲ್ಲಿ ಕವಿತೆಯಾಗಿವೆ.
ಇಲ್ಲಿ 'ನೀಲಿ ಮೋಹದ ತರುಣಿ'ಯಿದ್ದಾಳೆ, 'ಕೇಳುವ ಕಿವಿಯಿರದೆಯೂ ಜೀವ ಮಿಡಿತದ ಸದ್ದಾಗುವುದು', 'ಸುಮವೊಂದು ಸೂಜಿಯಾಗಿ ಇರಿಯಬಹುದು' ಎನ್ನುವ ಪ್ರಬುದ್ಧತೆಯೂ ಇದೆ. 'ಮಂತ್ರದಂಡದ ಮುಂದೆ' ತಾನೇ ಕವಿತೆಯಾಗಬೇಕೆಂದು ಕಾದುನಿಂತ ಮುಗ್ಧೆಯೂ ಇದ್ದಾಳೆ. ಕಾವ್ಯಲೋಕಕ್ಕೆ ಪ್ರವೇಶಿಸಿರುವ ಕನಸುಗಣ್ಣಿನ ಪ್ರತಿಭೆಗೆ ಪ್ರೀತಿಯ ಸ್ವಾಗತ. ನಾಗಶ್ರೀ ಅವರ ಕಾವ್ಯ ಮತ್ತಷ್ಟು ಹೊಸ ಲೋಕಗಳಿಗೆ ತೆರೆದುಕೊಳ್ಳಲಿ, ಎಲ್ಲ ಒಳ್ಳೆಯದೂ ಅವರಿಗಿರಲಿ ಎಂದು ಹಾರೈಸುತ್ತೇನೆ.
— ವಿಜಯಶ್ರೀ ಹಾಲಾಡಿ, ದಕ್ಷಿಣ ಕನ್ನಡ












