ನೆನಪಿನ ಸೌಟು
ಬಹುಕಾಲ ಶಿಕ್ಷಣ ಕ್ಷೇತ್ರದಲ್ಲೇ ಹೊಸ ಪ್ರಯೋಗಗಳನ್ನು ಮಾಡುತ್ತಾ, ಅನುಭವಗಳನ್ನು ಗಳಿಸುತ್ತ, ಕಾಯೇನ ವಾಚಾ ಮನಸಾ ಅಹರ್ನಿಶಿ ದುಡಿದು, ಹನ್ನೊಂದು ವರ್ಷಗಳ ಹಿಂದೆ ನಿವೃತ್ತಿಯನ್ನು ಪಡೆದೂ, ಈಗಲೂ ಶಿಕ್ಷಣ ಕ್ಷೇತ್ರದಲ್ಲೇ ದುಡಿಯುತ್ತಿರುವ ಜನಪ್ರಸಿದ್ಧ ಶಿಕ್ಷಣವೇತ್ತರಾದ ಡಾ.ಮಹಾಬಲೇಶ್ವರ ರಾವ್ ಅವರ ಆತ್ಮಕಥನವಿದು. ಇದು ನೆನಪುಗಳ ಸೌಟು. ಬದುಕಿನ ಯಾವ ನೆನಪುಗಳನ್ನೂ ಸಾಯಗೊಡದಂತೆ ಈ ಆತ್ಮಕಥನಕಾರನಿಗೆ ಈ ಸೌಟು ಬಡಿಸಿದೆ. ಓದುಗ ಅದನ್ನು ಉಣಬೇಕಿದೆ.
ಸಾಮಾನ್ಯವಾಗಿ, ಈ ಆತ್ಮಕಥನಗಳದ್ದು ಒಂದೇ ಮುಖ, ಒಂದೇ ದಾರಿ, ಒಂದೇ ನೋಟದ್ದಾಗಿರುತ್ತದೆ ಎಂದೇ ನಾನು ಭಾವಿಸಿದವನು. ಅಂದರೆ, ಸರಿಹೊತ್ತಿನವರೆಗಿನ ಬದುಕಿನ ಎಲ್ಲ ವಿವರಗಳನ್ನು ದಾಖಲಿಸುತ್ತ ಹೋಗುವುದು. ಈ ದಾಖಲಿಸುವಿಕೆಯಲ್ಲಿ ವಸ್ತು ವಿಷಯಗಳ ವೈವಿಧ್ಯವಿರುವುದು ಸಹಜವೇ ಆಗಿರುತ್ತದೆ. ಆದರೆ, ನಿರೂಪಣೆ ವ್ಯಕ್ತಿಗತವಾಗಿರುತ್ತದೆ. ಹಾಗಂತ ಎಲ್ಲವನ್ನೂ ದಾಖಲಿಸಲಾಗುತ್ತದೆಯೇ ಎಂದರೆ ಇಲ್ಲ ಎಂದೇ ಹೇಳಬೇಕಾಗುತ್ತದೆ. ಅದು ಸಾಧ್ಯವಿಲ್ಲದ ಮಾತು ಕೂಡ. ಬರೆದುಕೊಳ್ಳುವವನ ಪ್ರಾಮಾಣಿಕತೆ ಯಾವ ಪ್ರಮಾಣದ್ದು ಎಂಬುದು ಸಹ ಇಲ್ಲಿ ಓದುಗನಿಗೆ ತಿಳಿದುಬಿಡುತ್ತದೆ. ಯಾಕೆಂದರೆ, ಡಾ.ರಾವ್ ಅವರಂಥ ವ್ಯಕ್ತಿ ಸಾರ್ವಜನಿಕ ಜೀವನದಲ್ಲೇ ಬಹುಪಾಲು ವೈಯಕ್ತಿಕ ಬದುಕನ್ನು ಸಾಗಿಸಿದ್ದರಿಂದ ಅವರ ಕುರಿತಾಗಿ ಪರಿಚಿತವೆನ್ನುವಂಥ ವ್ಯಕ್ತಿತ್ವವೊಂದು ಸಮಾಜದಲ್ಲಿ ಅದಾಗಲೇ ಒಂದು ಮೂರ್ತರೂಪದಲ್ಲಿ ಸೃಷ್ಟಿಯಾಗಿರುತ್ತದೆ. ಅಷ್ಟೇ ಅಲ್ಲದೆ ಸಮೂಹವೊಂದು ಸ್ವೀಕರಿಸಬಹುದಾದ ಅನೇಕ ಸಂಗತಗಳೂ, ಸ್ವೀಕರಿಸದೇ ಇರುವಂಥ ಅ-ಸಂಗತಗಳೂ ನಡೆದುಹೋಗಿರುತ್ತದೆ. ಹಾಗಂತ ಇವೆರಡೂ ಸಮೂಹಕ್ಕೆ ಸಂಪೂರ್ಣವಾಗೇ ವೇದ್ಯವಾಗಿರುತ್ತದೆ, ಅಥವಾ ವೇದ್ಯವಾಗಿರಬೇಕು ಎಂದೇನಿಲ್ಲ!
ಶಿಕ್ಷಣವೇತ್ತರೊಬ್ಬರ ನಿತ್ಯ ಬದುಕಿನ ಹಲವು ಏರಿಳಿತಗಳ, ಸಾಧಿಸಿದ ಸಾಹಸದ ಸಾಧನೆಗಳ, ಬರೆಹ ಮತ್ತು ಬದುಕಿನ ತಾದಾತ್ಯದ ವಿವರಗಳೆಲ್ಲವನ್ನೂ ವೇದ್ಯಮಾಡಿಸುವ ಆತ್ಮಕಥನವೇ ಈ ನೆನಪಿನ ಸೌಟು. ಶಿಕ್ಷಣಕ್ಕಾಗಿ ಬದುಕನ್ನು ಸವೆಸಿದ ನಿಷ್ಟುರ ಸ್ವಭಾವದ ಒಂದು ಜೀವ ಸಮೂಹದ ನಡುವೆಯೇ ಇದ್ದು ತನ್ನ ನೆನಪುಗಳನ್ನು ಹೇಳಿಕೊಳ್ಳುವುದು ಸಾಮಾನ್ಯದ ಸಂಗತಿಯೇನಲ್ಲ! ಅಂಥ ಅಸಾಮಾನ್ಯವಾದುದನ್ನು ಈ ಕೃತಿ ಮಾಡಿದೆ.
-ಟಿ.ದೇವಿದಾಸ
Product Information
Product Information
Shipping & Returns
Shipping & Returns


ನೆನಪಿನ ಸೌಟು
ನೆನಪಿನ ಸೌಟು
ಬಹುಕಾಲ ಶಿಕ್ಷಣ ಕ್ಷೇತ್ರದಲ್ಲೇ ಹೊಸ ಪ್ರಯೋಗಗಳನ್ನು ಮಾಡುತ್ತಾ, ಅನುಭವಗಳನ್ನು ಗಳಿಸುತ್ತ, ಕಾಯೇನ ವಾಚಾ ಮನಸಾ ಅಹರ್ನಿಶಿ ದುಡಿದು, ಹನ್ನೊಂದು ವರ್ಷಗಳ ಹಿಂದೆ ನಿವೃತ್ತಿಯನ್ನು ಪಡೆದೂ, ಈಗಲೂ ಶಿಕ್ಷಣ ಕ್ಷೇತ್ರದಲ್ಲೇ ದುಡಿಯುತ್ತಿರುವ ಜನಪ್ರಸಿದ್ಧ ಶಿಕ್ಷಣವೇತ್ತರಾದ ಡಾ.ಮಹಾಬಲೇಶ್ವರ ರಾವ್ ಅವರ ಆತ್ಮಕಥನವಿದು. ಇದು ನೆನಪುಗಳ ಸೌಟು. ಬದುಕಿನ ಯಾವ ನೆನಪುಗಳನ್ನೂ ಸಾಯಗೊಡದಂತೆ ಈ ಆತ್ಮಕಥನಕಾರನಿಗೆ ಈ ಸೌಟು ಬಡಿಸಿದೆ. ಓದುಗ ಅದನ್ನು ಉಣಬೇಕಿದೆ.
ಸಾಮಾನ್ಯವಾಗಿ, ಈ ಆತ್ಮಕಥನಗಳದ್ದು ಒಂದೇ ಮುಖ, ಒಂದೇ ದಾರಿ, ಒಂದೇ ನೋಟದ್ದಾಗಿರುತ್ತದೆ ಎಂದೇ ನಾನು ಭಾವಿಸಿದವನು. ಅಂದರೆ, ಸರಿಹೊತ್ತಿನವರೆಗಿನ ಬದುಕಿನ ಎಲ್ಲ ವಿವರಗಳನ್ನು ದಾಖಲಿಸುತ್ತ ಹೋಗುವುದು. ಈ ದಾಖಲಿಸುವಿಕೆಯಲ್ಲಿ ವಸ್ತು ವಿಷಯಗಳ ವೈವಿಧ್ಯವಿರುವುದು ಸಹಜವೇ ಆಗಿರುತ್ತದೆ. ಆದರೆ, ನಿರೂಪಣೆ ವ್ಯಕ್ತಿಗತವಾಗಿರುತ್ತದೆ. ಹಾಗಂತ ಎಲ್ಲವನ್ನೂ ದಾಖಲಿಸಲಾಗುತ್ತದೆಯೇ ಎಂದರೆ ಇಲ್ಲ ಎಂದೇ ಹೇಳಬೇಕಾಗುತ್ತದೆ. ಅದು ಸಾಧ್ಯವಿಲ್ಲದ ಮಾತು ಕೂಡ. ಬರೆದುಕೊಳ್ಳುವವನ ಪ್ರಾಮಾಣಿಕತೆ ಯಾವ ಪ್ರಮಾಣದ್ದು ಎಂಬುದು ಸಹ ಇಲ್ಲಿ ಓದುಗನಿಗೆ ತಿಳಿದುಬಿಡುತ್ತದೆ. ಯಾಕೆಂದರೆ, ಡಾ.ರಾವ್ ಅವರಂಥ ವ್ಯಕ್ತಿ ಸಾರ್ವಜನಿಕ ಜೀವನದಲ್ಲೇ ಬಹುಪಾಲು ವೈಯಕ್ತಿಕ ಬದುಕನ್ನು ಸಾಗಿಸಿದ್ದರಿಂದ ಅವರ ಕುರಿತಾಗಿ ಪರಿಚಿತವೆನ್ನುವಂಥ ವ್ಯಕ್ತಿತ್ವವೊಂದು ಸಮಾಜದಲ್ಲಿ ಅದಾಗಲೇ ಒಂದು ಮೂರ್ತರೂಪದಲ್ಲಿ ಸೃಷ್ಟಿಯಾಗಿರುತ್ತದೆ. ಅಷ್ಟೇ ಅಲ್ಲದೆ ಸಮೂಹವೊಂದು ಸ್ವೀಕರಿಸಬಹುದಾದ ಅನೇಕ ಸಂಗತಗಳೂ, ಸ್ವೀಕರಿಸದೇ ಇರುವಂಥ ಅ-ಸಂಗತಗಳೂ ನಡೆದುಹೋಗಿರುತ್ತದೆ. ಹಾಗಂತ ಇವೆರಡೂ ಸಮೂಹಕ್ಕೆ ಸಂಪೂರ್ಣವಾಗೇ ವೇದ್ಯವಾಗಿರುತ್ತದೆ, ಅಥವಾ ವೇದ್ಯವಾಗಿರಬೇಕು ಎಂದೇನಿಲ್ಲ!
ಶಿಕ್ಷಣವೇತ್ತರೊಬ್ಬರ ನಿತ್ಯ ಬದುಕಿನ ಹಲವು ಏರಿಳಿತಗಳ, ಸಾಧಿಸಿದ ಸಾಹಸದ ಸಾಧನೆಗಳ, ಬರೆಹ ಮತ್ತು ಬದುಕಿನ ತಾದಾತ್ಯದ ವಿವರಗಳೆಲ್ಲವನ್ನೂ ವೇದ್ಯಮಾಡಿಸುವ ಆತ್ಮಕಥನವೇ ಈ ನೆನಪಿನ ಸೌಟು. ಶಿಕ್ಷಣಕ್ಕಾಗಿ ಬದುಕನ್ನು ಸವೆಸಿದ ನಿಷ್ಟುರ ಸ್ವಭಾವದ ಒಂದು ಜೀವ ಸಮೂಹದ ನಡುವೆಯೇ ಇದ್ದು ತನ್ನ ನೆನಪುಗಳನ್ನು ಹೇಳಿಕೊಳ್ಳುವುದು ಸಾಮಾನ್ಯದ ಸಂಗತಿಯೇನಲ್ಲ! ಅಂಥ ಅಸಾಮಾನ್ಯವಾದುದನ್ನು ಈ ಕೃತಿ ಮಾಡಿದೆ.
-ಟಿ.ದೇವಿದಾಸ
Product Information
Product Information
Shipping & Returns
Shipping & Returns
Description
ಬಹುಕಾಲ ಶಿಕ್ಷಣ ಕ್ಷೇತ್ರದಲ್ಲೇ ಹೊಸ ಪ್ರಯೋಗಗಳನ್ನು ಮಾಡುತ್ತಾ, ಅನುಭವಗಳನ್ನು ಗಳಿಸುತ್ತ, ಕಾಯೇನ ವಾಚಾ ಮನಸಾ ಅಹರ್ನಿಶಿ ದುಡಿದು, ಹನ್ನೊಂದು ವರ್ಷಗಳ ಹಿಂದೆ ನಿವೃತ್ತಿಯನ್ನು ಪಡೆದೂ, ಈಗಲೂ ಶಿಕ್ಷಣ ಕ್ಷೇತ್ರದಲ್ಲೇ ದುಡಿಯುತ್ತಿರುವ ಜನಪ್ರಸಿದ್ಧ ಶಿಕ್ಷಣವೇತ್ತರಾದ ಡಾ.ಮಹಾಬಲೇಶ್ವರ ರಾವ್ ಅವರ ಆತ್ಮಕಥನವಿದು. ಇದು ನೆನಪುಗಳ ಸೌಟು. ಬದುಕಿನ ಯಾವ ನೆನಪುಗಳನ್ನೂ ಸಾಯಗೊಡದಂತೆ ಈ ಆತ್ಮಕಥನಕಾರನಿಗೆ ಈ ಸೌಟು ಬಡಿಸಿದೆ. ಓದುಗ ಅದನ್ನು ಉಣಬೇಕಿದೆ.
ಸಾಮಾನ್ಯವಾಗಿ, ಈ ಆತ್ಮಕಥನಗಳದ್ದು ಒಂದೇ ಮುಖ, ಒಂದೇ ದಾರಿ, ಒಂದೇ ನೋಟದ್ದಾಗಿರುತ್ತದೆ ಎಂದೇ ನಾನು ಭಾವಿಸಿದವನು. ಅಂದರೆ, ಸರಿಹೊತ್ತಿನವರೆಗಿನ ಬದುಕಿನ ಎಲ್ಲ ವಿವರಗಳನ್ನು ದಾಖಲಿಸುತ್ತ ಹೋಗುವುದು. ಈ ದಾಖಲಿಸುವಿಕೆಯಲ್ಲಿ ವಸ್ತು ವಿಷಯಗಳ ವೈವಿಧ್ಯವಿರುವುದು ಸಹಜವೇ ಆಗಿರುತ್ತದೆ. ಆದರೆ, ನಿರೂಪಣೆ ವ್ಯಕ್ತಿಗತವಾಗಿರುತ್ತದೆ. ಹಾಗಂತ ಎಲ್ಲವನ್ನೂ ದಾಖಲಿಸಲಾಗುತ್ತದೆಯೇ ಎಂದರೆ ಇಲ್ಲ ಎಂದೇ ಹೇಳಬೇಕಾಗುತ್ತದೆ. ಅದು ಸಾಧ್ಯವಿಲ್ಲದ ಮಾತು ಕೂಡ. ಬರೆದುಕೊಳ್ಳುವವನ ಪ್ರಾಮಾಣಿಕತೆ ಯಾವ ಪ್ರಮಾಣದ್ದು ಎಂಬುದು ಸಹ ಇಲ್ಲಿ ಓದುಗನಿಗೆ ತಿಳಿದುಬಿಡುತ್ತದೆ. ಯಾಕೆಂದರೆ, ಡಾ.ರಾವ್ ಅವರಂಥ ವ್ಯಕ್ತಿ ಸಾರ್ವಜನಿಕ ಜೀವನದಲ್ಲೇ ಬಹುಪಾಲು ವೈಯಕ್ತಿಕ ಬದುಕನ್ನು ಸಾಗಿಸಿದ್ದರಿಂದ ಅವರ ಕುರಿತಾಗಿ ಪರಿಚಿತವೆನ್ನುವಂಥ ವ್ಯಕ್ತಿತ್ವವೊಂದು ಸಮಾಜದಲ್ಲಿ ಅದಾಗಲೇ ಒಂದು ಮೂರ್ತರೂಪದಲ್ಲಿ ಸೃಷ್ಟಿಯಾಗಿರುತ್ತದೆ. ಅಷ್ಟೇ ಅಲ್ಲದೆ ಸಮೂಹವೊಂದು ಸ್ವೀಕರಿಸಬಹುದಾದ ಅನೇಕ ಸಂಗತಗಳೂ, ಸ್ವೀಕರಿಸದೇ ಇರುವಂಥ ಅ-ಸಂಗತಗಳೂ ನಡೆದುಹೋಗಿರುತ್ತದೆ. ಹಾಗಂತ ಇವೆರಡೂ ಸಮೂಹಕ್ಕೆ ಸಂಪೂರ್ಣವಾಗೇ ವೇದ್ಯವಾಗಿರುತ್ತದೆ, ಅಥವಾ ವೇದ್ಯವಾಗಿರಬೇಕು ಎಂದೇನಿಲ್ಲ!
ಶಿಕ್ಷಣವೇತ್ತರೊಬ್ಬರ ನಿತ್ಯ ಬದುಕಿನ ಹಲವು ಏರಿಳಿತಗಳ, ಸಾಧಿಸಿದ ಸಾಹಸದ ಸಾಧನೆಗಳ, ಬರೆಹ ಮತ್ತು ಬದುಕಿನ ತಾದಾತ್ಯದ ವಿವರಗಳೆಲ್ಲವನ್ನೂ ವೇದ್ಯಮಾಡಿಸುವ ಆತ್ಮಕಥನವೇ ಈ ನೆನಪಿನ ಸೌಟು. ಶಿಕ್ಷಣಕ್ಕಾಗಿ ಬದುಕನ್ನು ಸವೆಸಿದ ನಿಷ್ಟುರ ಸ್ವಭಾವದ ಒಂದು ಜೀವ ಸಮೂಹದ ನಡುವೆಯೇ ಇದ್ದು ತನ್ನ ನೆನಪುಗಳನ್ನು ಹೇಳಿಕೊಳ್ಳುವುದು ಸಾಮಾನ್ಯದ ಸಂಗತಿಯೇನಲ್ಲ! ಅಂಥ ಅಸಾಮಾನ್ಯವಾದುದನ್ನು ಈ ಕೃತಿ ಮಾಡಿದೆ.
-ಟಿ.ದೇವಿದಾಸ












