🎉 Up to 70% Off Selected ItemsShop Sale
HomeStore

ಸಕಲ ದೇವತಾ ದಂಡಕ ರತ್ನಮಾಲಾ

Product image 1
Product image 2

ಸಕಲ ದೇವತಾ ದಂಡಕ ರತ್ನಮಾಲಾ

ಸಕಲ ದೇವತಾ ದಂಡಕ ರತ್ನಮಾಲಾ

ದಂಡಕ ಎಂದರೆ ದೇವರ ಆರಾಧನೆಯ ಕಾಲದಲ್ಲಿ ಹೇಳುವ ಛಂದೋಬದ್ಧವಾದ ಶ್ಲೋಕವೇ ಆಗಿರುತ್ತವೆ. ಇದಕ್ಕೆ ಉದಾಹರಣೆ ಎಂದರೆ ಮಹಾಕವಿ ಕಾಳಿದಾಸನ ಮೇಲೆ ಕಾಳಿಕಾದೇವಿಯು ಕೃಪೆ ತೋರಿ, ಆತನ ನಾಲಿಗೆಯ ಮೇಲೆ ಪ್ರಣವಾಕ್ಷರವಾದ ಓಂಕಾರವನ್ನು ಬರೆಯುತ್ತಾಳೆ. ಆ ಕ್ಷಣದಿಂದಲೇ ಕಾಳಿದಾಸನಿಗೆ ಸಕಲ ವಿದ್ಯೆಗಳೂ ಪ್ರಾಪ್ತಿಯಾಗಿ ಆತನು ಆ ತಾಯಿಯನ್ನು ಶ್ಲೋಕಗಳಿಂದ ಸ್ತುತಿಸುತ್ತಾನೆ, ಆಕೆಯ ವರ್ಣನೆ ಮಾಡುತ್ತಾನೆ. ಆ ಶ್ಲೋಕಗಳ ಸಂಕುಲವೇ ಶ್ಯಾಮಲಾ ದಂಡಕವೆಂದು ಪ್ರಸಿದ್ದಿಯಾಗಿದೆ.

ಈ ರೀತಿಯ ದಂಡಕಗಳು ನಮಗೆ ಸಂಸ್ಕೃತ ಮತ್ತು ತೆಲುಗು ಭಾಷೆಯಲ್ಲಿ ಕಾಣಸಿಗುತ್ತವೆ. ಬೇರೆ ಭಾಷೆಗಳಲ್ಲಿ ಇವು ನನ್ನ ಅನುಭವಕ್ಕೆ ಬಂದಿರುವುದಿಲ್ಲ. ದಂಡಕಗಳು ಸುಲಭ ಸುಂದರ ಸಾಹಿತ್ಯದಿಂದ ಕೂಡಿದ್ದು, ಸಾಹಿತ್ಯ ದೃಷ್ಟಿಯಿಂದ ಮನಸ್ಸಿಗೆ ಮಹದಾನಂದವುಂಟಾಗಿ, ನಮಗೆ ಸುಲಭವಾಗಿ ಅರ್ಥವಾಗುವುದರಿಂದ ಇವುಗಳನ್ನು ಸ್ತುತಿಸುವಾಗ ನಾವು ದೇವರೊಡನೆ ಸಂಭಾಷಣೆಯಲ್ಲಿ ತೊಡಗಿರುವಂತೆ ಭಾಸವಾಗುತ್ತದೆ.

ದಂಡಕಗಳಲ್ಲಿ ದೇವರುಗಳ ಸೌಂದರ್ಯ, ಅವರ ಯಶೋಗಾಧೆ, ಅವರ ಮಹಿಮೆಗಳನ್ನು ಹೇಳುತ್ತಾ ಸಾಗಿ ಕೊನೆಗೆ ನಮ್ಮ ಕಷ್ಟಕಾರ್ಪಣ್ಯಗಳನ್ನು ಅವರಿಗೆ ಭಿನ್ನವಿಸಿ, ಅವುಗಳಿಂದ ಕಾಪಾಡಬೇಕೆಂದು ಪ್ರಾರ್ಥಿಸುವುದು ಆಗಿರುತ್ತದೆ. ಆದ್ದರಿಂದ ಮಹಾಜನರು ಈ ದಂಡಕಗಳನ್ನು ಪಠಿಸಿ ಪರಮಾತ್ಮನ ಕೃಪೆಗೆ ಪಾತ್ರರಾಗಬೇಕೆಂದು ಆಶಿಸುತ್ತೇನೆ.

ಈ ಸಂಕಲನದಲ್ಲಿರುವ ದಂಡಕಗಳು ಮಹಾನ್ ಪುರುಷರುಗಳಿಂದ ಚಿಸಲ್ಪಟ್ಟಿದ್ದು, ಸಂಗ್ರಹಣೆಯಲ್ಲಿ ತಿಳಿಯದೇ ಏನಾದರೂ ಲೋಪದೋಷಗಳು ಇದ್ದಲ್ಲಿ ಅವು ನನ್ನ ಭಾಷಾಜ್ಞಾನದಿಂದಾದ ದೋಷಗಳೆಂದು ಪರಿಗಣಿಸಿ ನನ್ನನ್ನು ಮನ್ನಿಸಿ, ಪ್ರೋತ್ಸಾಹಿಸಬೇಕೆಂದು ಪ್ರಾರ್ಥಿಸುತ್ತೇನೆ.

ಇನ್ನು ಈ ದಂಡಕರತ್ನಾಕರವನ್ನು ಪ್ರಕಾಶನಗೊಳಿಸಿ ಸಹಕರಿಸಿದ ಶ್ರೀನಿಧಿ ಪಬ್ಲಿಕೇಷನ್ಸ್ ಮಾಲೀಕರಾದ ಶ್ರೀಯುತ ನವೀನ್ರವರಿಗೂ ಮತ್ತು ಇದರ ಮುದ್ರಣ ಕಾರ್ಯದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ನನ್ನ ಹೃತ್ತೂರ್ವಕವಾದ ಅಭಿನಂದನೆಗಳು.

ಡಾ|| ಆನಂದ ಗುರೂಜಿ

$0.43
ಸಕಲ ದೇವತಾ ದಂಡಕ ರತ್ನಮಾಲಾ
$0.43

Product Information

Shipping & Returns

Description

ದಂಡಕ ಎಂದರೆ ದೇವರ ಆರಾಧನೆಯ ಕಾಲದಲ್ಲಿ ಹೇಳುವ ಛಂದೋಬದ್ಧವಾದ ಶ್ಲೋಕವೇ ಆಗಿರುತ್ತವೆ. ಇದಕ್ಕೆ ಉದಾಹರಣೆ ಎಂದರೆ ಮಹಾಕವಿ ಕಾಳಿದಾಸನ ಮೇಲೆ ಕಾಳಿಕಾದೇವಿಯು ಕೃಪೆ ತೋರಿ, ಆತನ ನಾಲಿಗೆಯ ಮೇಲೆ ಪ್ರಣವಾಕ್ಷರವಾದ ಓಂಕಾರವನ್ನು ಬರೆಯುತ್ತಾಳೆ. ಆ ಕ್ಷಣದಿಂದಲೇ ಕಾಳಿದಾಸನಿಗೆ ಸಕಲ ವಿದ್ಯೆಗಳೂ ಪ್ರಾಪ್ತಿಯಾಗಿ ಆತನು ಆ ತಾಯಿಯನ್ನು ಶ್ಲೋಕಗಳಿಂದ ಸ್ತುತಿಸುತ್ತಾನೆ, ಆಕೆಯ ವರ್ಣನೆ ಮಾಡುತ್ತಾನೆ. ಆ ಶ್ಲೋಕಗಳ ಸಂಕುಲವೇ ಶ್ಯಾಮಲಾ ದಂಡಕವೆಂದು ಪ್ರಸಿದ್ದಿಯಾಗಿದೆ.

ಈ ರೀತಿಯ ದಂಡಕಗಳು ನಮಗೆ ಸಂಸ್ಕೃತ ಮತ್ತು ತೆಲುಗು ಭಾಷೆಯಲ್ಲಿ ಕಾಣಸಿಗುತ್ತವೆ. ಬೇರೆ ಭಾಷೆಗಳಲ್ಲಿ ಇವು ನನ್ನ ಅನುಭವಕ್ಕೆ ಬಂದಿರುವುದಿಲ್ಲ. ದಂಡಕಗಳು ಸುಲಭ ಸುಂದರ ಸಾಹಿತ್ಯದಿಂದ ಕೂಡಿದ್ದು, ಸಾಹಿತ್ಯ ದೃಷ್ಟಿಯಿಂದ ಮನಸ್ಸಿಗೆ ಮಹದಾನಂದವುಂಟಾಗಿ, ನಮಗೆ ಸುಲಭವಾಗಿ ಅರ್ಥವಾಗುವುದರಿಂದ ಇವುಗಳನ್ನು ಸ್ತುತಿಸುವಾಗ ನಾವು ದೇವರೊಡನೆ ಸಂಭಾಷಣೆಯಲ್ಲಿ ತೊಡಗಿರುವಂತೆ ಭಾಸವಾಗುತ್ತದೆ.

ದಂಡಕಗಳಲ್ಲಿ ದೇವರುಗಳ ಸೌಂದರ್ಯ, ಅವರ ಯಶೋಗಾಧೆ, ಅವರ ಮಹಿಮೆಗಳನ್ನು ಹೇಳುತ್ತಾ ಸಾಗಿ ಕೊನೆಗೆ ನಮ್ಮ ಕಷ್ಟಕಾರ್ಪಣ್ಯಗಳನ್ನು ಅವರಿಗೆ ಭಿನ್ನವಿಸಿ, ಅವುಗಳಿಂದ ಕಾಪಾಡಬೇಕೆಂದು ಪ್ರಾರ್ಥಿಸುವುದು ಆಗಿರುತ್ತದೆ. ಆದ್ದರಿಂದ ಮಹಾಜನರು ಈ ದಂಡಕಗಳನ್ನು ಪಠಿಸಿ ಪರಮಾತ್ಮನ ಕೃಪೆಗೆ ಪಾತ್ರರಾಗಬೇಕೆಂದು ಆಶಿಸುತ್ತೇನೆ.

ಈ ಸಂಕಲನದಲ್ಲಿರುವ ದಂಡಕಗಳು ಮಹಾನ್ ಪುರುಷರುಗಳಿಂದ ಚಿಸಲ್ಪಟ್ಟಿದ್ದು, ಸಂಗ್ರಹಣೆಯಲ್ಲಿ ತಿಳಿಯದೇ ಏನಾದರೂ ಲೋಪದೋಷಗಳು ಇದ್ದಲ್ಲಿ ಅವು ನನ್ನ ಭಾಷಾಜ್ಞಾನದಿಂದಾದ ದೋಷಗಳೆಂದು ಪರಿಗಣಿಸಿ ನನ್ನನ್ನು ಮನ್ನಿಸಿ, ಪ್ರೋತ್ಸಾಹಿಸಬೇಕೆಂದು ಪ್ರಾರ್ಥಿಸುತ್ತೇನೆ.

ಇನ್ನು ಈ ದಂಡಕರತ್ನಾಕರವನ್ನು ಪ್ರಕಾಶನಗೊಳಿಸಿ ಸಹಕರಿಸಿದ ಶ್ರೀನಿಧಿ ಪಬ್ಲಿಕೇಷನ್ಸ್ ಮಾಲೀಕರಾದ ಶ್ರೀಯುತ ನವೀನ್ರವರಿಗೂ ಮತ್ತು ಇದರ ಮುದ್ರಣ ಕಾರ್ಯದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ನನ್ನ ಹೃತ್ತೂರ್ವಕವಾದ ಅಭಿನಂದನೆಗಳು.

ಡಾ|| ಆನಂದ ಗುರೂಜಿ

ಸಕಲ ದೇವತಾ ದಂಡಕ ರತ್ನಮಾಲಾ | Harivu Books