🎉 Up to 70% Off Selected ItemsShop Sale
HomeStore

ಶಿವ ತಾಂಡವ ಸ್ತೋತ್ರ

Product image 1
Product image 2

ಶಿವ ತಾಂಡವ ಸ್ತೋತ್ರ

ಶಿವ ತಾಂಡವ ಸ್ತೋತ್ರ

ಒಮ್ಮೆ ರಾವಣನಿಗೆ ತನ್ನ ಬಲದ ಮೇಲೆ ಅತ್ಯಧಿಕವಾದ ಅಹಂ ಮೂಡಿತು. ತನಗೆ ಯಾರೂ ಸರಿಸಾಟಿ ಇಲ್ಲವೆಂದು ಹಿರಿಹಿರಿ ಹಿಗ್ಗಿದ ತನ್ನಿಮಿತ್ತ ಮದಾಂಧನಾಗಿ ತನ್ನ ಬಲ ಪ್ರಯೋಗವನ್ನು ತನ್ನ ಆರಾಧ್ಯ ದೈವ ಪರಶಿವನ ಮೇಲೆಯೇ ಮಾಡಬೇಕೆಂಬ ಅತಿರೇಕದ ನಿಶ್ಚಯಕ್ಕೊಳಗಾದ.

ಪರಮೇಶ್ವರನ ಸಮೇತ ಕೈಲಾಸವನ್ನೇ ತನ್ನ ಲಂಕೆಗೆ ತಂದುಬಿಡಬೇಕೆಂದು ಉತ್ಸುಕನಾದ.

ಹೀಗೆ ಅಹಂಭಾವಿತನಾದ ರಾವಣ ತನ್ನ ಭುಜದಿಂದ ಕೈಲಾಸ ಪರ್ವತವನ್ನು ಹಿಡಿದು ಮೇಲಕ್ಕೆತ್ತಲು ಪ್ರಯತ್ನಿಸಿದ. ಕೈಲಾಸವು ಅಲುಗಾಡತೊಡಗಿತು. ಶಾಂತ ಶಿವನು ಮಂದಸ್ಮಿತನಾಗಿ ತನ್ನ ಪಾದದ ಅಂಗುಷ್ಟದಿಂದ ಪರ್ವತವನ್ನು ಮೆದುವಾಗಿ ಒತ್ತಿದನು. ಅದರ ರಭಸಕ್ಕೆ ಮಹಾಬಲಶಾಲಿ ಅಭಿಮಾನಿ ರಾವಣನು ಪರ್ವತದಡಿ ಸಿಲುಕಿ ಗಜಗಜ ನಡುಗಿದನು. ಶಿಖರದ ಭಾರವನ್ನು ತಾಳಲಾರದೆ ನರಕ ಯಾತನೆಯಿಂದ ಆರ್ತನಾದ ಮಾಡತೊಡಗಿದನು.

 

ಈ ಸಂಕಟದ ನೋವಿನಿಂದ ಮುಕ್ತಿ ಹೊಂದಲು ಪ್ರಕಾಂಡ ವಿದ್ವಾಂಸನಾದ ರಾವಣನು ತತ್ಕ್ಷಣವೇ ಅಪೂರ್ವ-ಅನುಪಮ “ತಾಂಡವ ಸ್ತೋತ್ರ"ದಿಂದ ಸ್ತುತಿಸಿ ಕೈಲಾಸನಾಥ ಶಿವನನ್ನು ಪ್ರಸನ್ನಗೊಳಿಸಿದನು.

ಈ ಸ್ತೋತ್ರವನ್ನು ಕೇಳಿದ ಮಹಾಶಿವನು ಸಂತುಷ್ಟನಾಗಿ ಕುಣಿದು ಕುಪ್ಪಳಿಸಿದ. ರಾವಣನ ಈ ಸ್ತುತಿಯು ಪರಮೇಶ್ವರನಿಗೆ ಅಮಿತಾನಂದವನ್ನು ನೀಡಿತಾದ್ದರಿಂದ ರಾವಣನನ್ನು ಆ ಪೀಡೆಯಿಂದ ಮುಕ್ತಿಗೊಳಿಸಿದನು.

ಆದ್ದರಿಂದ ಯಾರು ಈ ದಿವ್ಯ ಸ್ತೋತ್ರವನ್ನು ಉಚ್ಚಸ್ವರದಲ್ಲಿ ಮತ್ತು ಭಕ್ತಿಭಾವದಿಂದ ಪಠಿಸುವರೋ ಅವರ ಮೇಲೆ ಪರಮೇಶ್ವರನು ತುಂಬು ಹೃದಯದಿಂದ ಪ್ರಸನ್ನಗೊಂಡು ಸಮಸ್ತ ಮನೋರಥಗಳನ್ನು ಪೂರ್ಣಗೊಳಿಸುತ್ತಾನೆ. ಎಂತಹ ಭಯಂಕರ ಕಷ್ಟಗಳು ಬಂದರೂ ಸಹಿಸುವ ಶಕ್ತಿಯನ್ನು ಕೊಡುತ್ತಾನೆ

$0.32
ಶಿವ ತಾಂಡವ ಸ್ತೋತ್ರ
$0.32

Product Information

Shipping & Returns

Description

ಒಮ್ಮೆ ರಾವಣನಿಗೆ ತನ್ನ ಬಲದ ಮೇಲೆ ಅತ್ಯಧಿಕವಾದ ಅಹಂ ಮೂಡಿತು. ತನಗೆ ಯಾರೂ ಸರಿಸಾಟಿ ಇಲ್ಲವೆಂದು ಹಿರಿಹಿರಿ ಹಿಗ್ಗಿದ ತನ್ನಿಮಿತ್ತ ಮದಾಂಧನಾಗಿ ತನ್ನ ಬಲ ಪ್ರಯೋಗವನ್ನು ತನ್ನ ಆರಾಧ್ಯ ದೈವ ಪರಶಿವನ ಮೇಲೆಯೇ ಮಾಡಬೇಕೆಂಬ ಅತಿರೇಕದ ನಿಶ್ಚಯಕ್ಕೊಳಗಾದ.

ಪರಮೇಶ್ವರನ ಸಮೇತ ಕೈಲಾಸವನ್ನೇ ತನ್ನ ಲಂಕೆಗೆ ತಂದುಬಿಡಬೇಕೆಂದು ಉತ್ಸುಕನಾದ.

ಹೀಗೆ ಅಹಂಭಾವಿತನಾದ ರಾವಣ ತನ್ನ ಭುಜದಿಂದ ಕೈಲಾಸ ಪರ್ವತವನ್ನು ಹಿಡಿದು ಮೇಲಕ್ಕೆತ್ತಲು ಪ್ರಯತ್ನಿಸಿದ. ಕೈಲಾಸವು ಅಲುಗಾಡತೊಡಗಿತು. ಶಾಂತ ಶಿವನು ಮಂದಸ್ಮಿತನಾಗಿ ತನ್ನ ಪಾದದ ಅಂಗುಷ್ಟದಿಂದ ಪರ್ವತವನ್ನು ಮೆದುವಾಗಿ ಒತ್ತಿದನು. ಅದರ ರಭಸಕ್ಕೆ ಮಹಾಬಲಶಾಲಿ ಅಭಿಮಾನಿ ರಾವಣನು ಪರ್ವತದಡಿ ಸಿಲುಕಿ ಗಜಗಜ ನಡುಗಿದನು. ಶಿಖರದ ಭಾರವನ್ನು ತಾಳಲಾರದೆ ನರಕ ಯಾತನೆಯಿಂದ ಆರ್ತನಾದ ಮಾಡತೊಡಗಿದನು.

 

ಈ ಸಂಕಟದ ನೋವಿನಿಂದ ಮುಕ್ತಿ ಹೊಂದಲು ಪ್ರಕಾಂಡ ವಿದ್ವಾಂಸನಾದ ರಾವಣನು ತತ್ಕ್ಷಣವೇ ಅಪೂರ್ವ-ಅನುಪಮ “ತಾಂಡವ ಸ್ತೋತ್ರ"ದಿಂದ ಸ್ತುತಿಸಿ ಕೈಲಾಸನಾಥ ಶಿವನನ್ನು ಪ್ರಸನ್ನಗೊಳಿಸಿದನು.

ಈ ಸ್ತೋತ್ರವನ್ನು ಕೇಳಿದ ಮಹಾಶಿವನು ಸಂತುಷ್ಟನಾಗಿ ಕುಣಿದು ಕುಪ್ಪಳಿಸಿದ. ರಾವಣನ ಈ ಸ್ತುತಿಯು ಪರಮೇಶ್ವರನಿಗೆ ಅಮಿತಾನಂದವನ್ನು ನೀಡಿತಾದ್ದರಿಂದ ರಾವಣನನ್ನು ಆ ಪೀಡೆಯಿಂದ ಮುಕ್ತಿಗೊಳಿಸಿದನು.

ಆದ್ದರಿಂದ ಯಾರು ಈ ದಿವ್ಯ ಸ್ತೋತ್ರವನ್ನು ಉಚ್ಚಸ್ವರದಲ್ಲಿ ಮತ್ತು ಭಕ್ತಿಭಾವದಿಂದ ಪಠಿಸುವರೋ ಅವರ ಮೇಲೆ ಪರಮೇಶ್ವರನು ತುಂಬು ಹೃದಯದಿಂದ ಪ್ರಸನ್ನಗೊಂಡು ಸಮಸ್ತ ಮನೋರಥಗಳನ್ನು ಪೂರ್ಣಗೊಳಿಸುತ್ತಾನೆ. ಎಂತಹ ಭಯಂಕರ ಕಷ್ಟಗಳು ಬಂದರೂ ಸಹಿಸುವ ಶಕ್ತಿಯನ್ನು ಕೊಡುತ್ತಾನೆ

ಶಿವ ತಾಂಡವ ಸ್ತೋತ್ರ | Harivu Books