🎉 Up to 70% Off Selected ItemsShop Sale
HomeStore

ಶ್ರೀಕೃಷ್ಣನ ಕಥೆಗಳಲ್ಲಿ ಜೀವನ ಪಾಠ

Product image 1
Product image 2

ಶ್ರೀಕೃಷ್ಣನ ಕಥೆಗಳಲ್ಲಿ ಜೀವನ ಪಾಠ

ಶ್ರೀಕೃಷ್ಣನ ಕಥೆಗಳಲ್ಲಿ ಜೀವನ ಪಾಠ

ಮಹಾಭಾರತ ನಮ್ಮ ದೇಶದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಪ್ರಮುಖವಾದದ್ದು. ಮಹಾಭಾರತ ದಲ್ಲಿರುವ ಕಥೆಗಳು- ಉಪಕಥೆಗಳು ಅಸಂಖ್ಯ ಮತ್ತು ಅನನ್ಯ. ಅದರ ಭಾಗವೇ ಆಗಿರುವ ಕೃಷ್ಣನ ಕಥೆಗಳು ಕೂಡ ಅಷ್ಟೇ ರೋಚಕ, ಧರ್ಮ ಮತ್ತು ಅಧರ್ಮದ ನಡುವಿನ ಸಂಘರ್ಷವೇ ಇಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಕೃಷ್ಣನ ಬಾಲಲೀಲೆಗಳಿಂದ ಮೊದಲ್ಗೊಂಡು ಆತನಲ್ಲಿದ್ದ ದಯಾಪರ ಗುಣಗಳು, ರಾಜಕೀಯ ಚತುರತೆ, ಆಕರ್ಷಕ ವ್ಯಕ್ತಿತ್ವ, ಬದುಕಿನ ಋಜುಮಾರ್ಗ ಇವೆಲ್ಲವುಗಳಿಂದ ಹೊರಹೊಮ್ಮುವ ನೀತಿ, ಕಾಲಮಿತಿಯ ಚೌಕಟ್ಟಿಲ್ಲದೇ ಎಂದೆಂದಿಗೂ ಅನ್ವಯವಾಗುವ ಸಾರ್ವಕಾಲಿಕ ಸತ್ಯ.

“ಶ್ರೀಕೃಷ್ಣನ ಕಥೆಗಳಲ್ಲಿ ಜೀವನಪಾಠ" ಎಂಬ ಈ ಕೃತಿಯ ಮೂಲಕ ಶ್ರೀಮತಿ ಡಿ.ಕೆ.ರಾಜಮ್ಮನವರು, ಇಂದಿನ ಆಧುನಿಕ ಜಗತ್ತಿಗೆ ಬದುಕುವ ಕಲೆಯ ಅನಾವರಣ ಮಾಡಿದ್ದಾರೆ. ಪ್ರತಿಯೊಂದು ಕಥೆಯ ಕೊನೆಯಲ್ಲೂ, ಆ ಕಥೆ ಬಿಂಬಿಸುವ ನೀತಿಯನ್ನು ಸಂಕ್ಷಿಪ್ತವಾಗಿ ಕೊಟ್ಟಿದ್ದಾರೆ. ಅನೇಕ ಅತ್ಯುತ್ತಮ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟಿರುವ ಶ್ರೀಮತಿ ರಾಜಮ್ಮನವರು ಈ ಪುಸ್ತಕದ ಮೂಲಕ ಮತ್ತೆ ತಮ್ಮ ಛಾಪನ್ನು ಒತ್ತಿದ್ದಾರೆ. ಹೇಗೆ ಶ್ರೀಕೃಷ್ಣನ ಕಥೆಗಳು ಜೀವನಕ್ಕೆ ಪಾಠವಾಗುತ್ತವೆ, ಅದರೊಳಗಿರುವ ನೀತಿಸಾರವೇನು ಎಂಬುದನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.

ಈ ಕೃತಿಯನ್ನು ಓದುಗರ ಮುಂದಿಡುತ್ತಿರುವುದು ನಮ್ಮ ಸಂಸ್ಥೆಯ ಹೆಮ್ಮೆ. ಶ್ರೀಮತಿ ರಾಜಮ್ಮನವರಿಂದ ಇನ್ನಷ್ಟು ಮೌಲಿಕ ಕೃತಿಗಳು ಹೊರಬರಲಿ, ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ.

-ಕೆ.ಬಿ. ಪರಶಿವಪ್ಪ
ಪ್ರಕಾಶಕರು
$0.49

Original: $1.62

-70%
ಶ್ರೀಕೃಷ್ಣನ ಕಥೆಗಳಲ್ಲಿ ಜೀವನ ಪಾಠ

$1.62

$0.49

Product Information

Shipping & Returns

Description

ಮಹಾಭಾರತ ನಮ್ಮ ದೇಶದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಪ್ರಮುಖವಾದದ್ದು. ಮಹಾಭಾರತ ದಲ್ಲಿರುವ ಕಥೆಗಳು- ಉಪಕಥೆಗಳು ಅಸಂಖ್ಯ ಮತ್ತು ಅನನ್ಯ. ಅದರ ಭಾಗವೇ ಆಗಿರುವ ಕೃಷ್ಣನ ಕಥೆಗಳು ಕೂಡ ಅಷ್ಟೇ ರೋಚಕ, ಧರ್ಮ ಮತ್ತು ಅಧರ್ಮದ ನಡುವಿನ ಸಂಘರ್ಷವೇ ಇಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಕೃಷ್ಣನ ಬಾಲಲೀಲೆಗಳಿಂದ ಮೊದಲ್ಗೊಂಡು ಆತನಲ್ಲಿದ್ದ ದಯಾಪರ ಗುಣಗಳು, ರಾಜಕೀಯ ಚತುರತೆ, ಆಕರ್ಷಕ ವ್ಯಕ್ತಿತ್ವ, ಬದುಕಿನ ಋಜುಮಾರ್ಗ ಇವೆಲ್ಲವುಗಳಿಂದ ಹೊರಹೊಮ್ಮುವ ನೀತಿ, ಕಾಲಮಿತಿಯ ಚೌಕಟ್ಟಿಲ್ಲದೇ ಎಂದೆಂದಿಗೂ ಅನ್ವಯವಾಗುವ ಸಾರ್ವಕಾಲಿಕ ಸತ್ಯ.

“ಶ್ರೀಕೃಷ್ಣನ ಕಥೆಗಳಲ್ಲಿ ಜೀವನಪಾಠ" ಎಂಬ ಈ ಕೃತಿಯ ಮೂಲಕ ಶ್ರೀಮತಿ ಡಿ.ಕೆ.ರಾಜಮ್ಮನವರು, ಇಂದಿನ ಆಧುನಿಕ ಜಗತ್ತಿಗೆ ಬದುಕುವ ಕಲೆಯ ಅನಾವರಣ ಮಾಡಿದ್ದಾರೆ. ಪ್ರತಿಯೊಂದು ಕಥೆಯ ಕೊನೆಯಲ್ಲೂ, ಆ ಕಥೆ ಬಿಂಬಿಸುವ ನೀತಿಯನ್ನು ಸಂಕ್ಷಿಪ್ತವಾಗಿ ಕೊಟ್ಟಿದ್ದಾರೆ. ಅನೇಕ ಅತ್ಯುತ್ತಮ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟಿರುವ ಶ್ರೀಮತಿ ರಾಜಮ್ಮನವರು ಈ ಪುಸ್ತಕದ ಮೂಲಕ ಮತ್ತೆ ತಮ್ಮ ಛಾಪನ್ನು ಒತ್ತಿದ್ದಾರೆ. ಹೇಗೆ ಶ್ರೀಕೃಷ್ಣನ ಕಥೆಗಳು ಜೀವನಕ್ಕೆ ಪಾಠವಾಗುತ್ತವೆ, ಅದರೊಳಗಿರುವ ನೀತಿಸಾರವೇನು ಎಂಬುದನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.

ಈ ಕೃತಿಯನ್ನು ಓದುಗರ ಮುಂದಿಡುತ್ತಿರುವುದು ನಮ್ಮ ಸಂಸ್ಥೆಯ ಹೆಮ್ಮೆ. ಶ್ರೀಮತಿ ರಾಜಮ್ಮನವರಿಂದ ಇನ್ನಷ್ಟು ಮೌಲಿಕ ಕೃತಿಗಳು ಹೊರಬರಲಿ, ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ.

-ಕೆ.ಬಿ. ಪರಶಿವಪ್ಪ
ಪ್ರಕಾಶಕರು
ಶ್ರೀಕೃಷ್ಣನ ಕಥೆಗಳಲ್ಲಿ ಜೀವನ ಪಾಠ | Harivu Books