🎉 Up to 70% Off Selected ItemsShop Sale
HomeStore

ಸುಖೀ ಕುಟುಂಬ ನಿಮ್ಮದಾಗಲಿ

Product image 1

ಸುಖೀ ಕುಟುಂಬ ನಿಮ್ಮದಾಗಲಿ

ಸುಖೀ ಕುಟುಂಬ ನಿಮ್ಮದಾಗಲಿ

ಆರ್ಥಿಕ ಭದ್ರತೆ ಹಾಗೂ ವ್ಯವಹಾರದ ತಿಳಿವಳಿಕೆ ಎರಡೂ ಇರುವ ಪ್ರಕಾಶಕರು ಸಾಕಷ್ಟಿಲ್ಲದಿರುವ ಸಂದರ್ಭದಲ್ಲಿ, ಸಪ್ನ ಬುಕ್ ಹೌಸ್ ಸಾಹಿತ್ಯದ ವಿವಿಧ ಪ್ರಕಾರದ ಗ್ರಂಥಗಳನ್ನು ಪ್ರಕಟಿಸಿ, ಕನ್ನಡ ಸಾಹಿತ್ಯದ ಸಾಧ್ಯವಿರುವ ಬೆಳವಣಿಗೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷದ ವಿಷಯ. ಒಳ್ಳೆಯ ಕೃತಿಗಳನ್ನು ದೊಡ್ಡ ಮೊತ್ತದಲ್ಲಿ ಪ್ರಕಟ ಮಾಡುತ್ತಿರುವುದಲ್ಲದೆ ಅವುಗಳ ಮಾರಾಟ ಹಾಗೂ ವಿತರಣೆ ಯ ವ್ಯವಸ್ಥೆಯೂ ಆಗುವಂತೆ ಅದು ನೋಡಿಕೊಳ್ಳುತ್ತಿದೆ. ಅದಕ್ಕಾಗಿ ಬೆಂಗಳೂರಿಗಷ್ಟೇ ಸೀಮಿತವಾಗದೆ, ಸಮಗ್ರ ಕರ್ನಾಟಕದ ದೃಷ್ಟಿಯಿಂದ ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಕಲಬುರಗಿ ಹಾಗೂ ಕೊಯಮತ್ತೂರುಗಳಲ್ಲಿಯೂ ಸಪ್ನ ಬುಕ್ ಹೌಸ್ ತನ್ನದೇ ಆದ ಪುಸ್ತಕ ಭಂಡಾರಗಳನ್ನು ಪ್ರತಿಷ್ಠಾಪಿಸಿದೆ.

ಭಾರತದ ದೊಡ್ಡ ಪುಸ್ತಕ ಭಂಡಾರವೆನಿಸಿದ ಸಪ್ನ ಬುಕ್ ಹೌಸ್‌ನಲ್ಲಿ ಸ್ವಂತ ಪ್ರಕಟಣೆಗಳಂತೆಯೇ ಉಳಿದ ಮಹತ್ವದ ಲೇಖಕರ ಕೃತಿಗಳೂ ಲಭ್ಯ ಕರ್ನಾಟಕ ರಾಜ್ಯೋತ್ಸವವನ್ನಂತೂ ಕನ್ನಡ ಪುಸ್ತಕೋತ್ಸವವನ್ನಾಗಿ, ಕರ್ನಾಟಕದ ಎಲ್ಲ ಭಾಗಗಳ ಬಹುಸಂಖ್ಯೆಯ ಲೇಖಕರ ಕೃತಿಗಳನ್ನು ಅಂದು ಬಿಡುಗಡೆಗೊಳಿಸುತ್ತ ಆಯಾ ಲೇಖಕರ ಸನ್ಮಾನ ಸಮಾರಂಭ ಏರ್ಪಡಿಸುವದೂ ಸತ್ಸಂಪ್ರದಾಯವಾಗಿ ಕನ್ನಡ ರಾಜ್ಯೋತ್ಸವವನ್ನು ಚಿರಸ್ಮರಣೀಯ

ಕಾರ್ಯಕ್ರಮವನ್ನಾಗಿಸುತ್ತದೆ.

ಹೀಗೆ ಲೇಖಕ-ಪ್ರಕಾರಕ-ಓದುಗರ ನಡುವೆ ನಿಕಟ ಸಂಪರ್ಕವನ್ನುಂಟು ಮಾಡುವ ಉದ್ದೇಶವೂ ಇದರಲ್ಲಿ ಅಡಕವಾಗಿವೆ. ಇದರಿಂದ ಪುಸ್ತಕಗಳಿಗೆ ಅಗತ್ಯವಾದ ಪರಿಸರವನ್ನು ನಿರ್ಮಿಸಿ, ಪುಸ್ತಕೋದ್ಯಮವನ್ನು ಒಂದು ನಾಡಿನ ಪ್ರಗತಿಶೀಲತೆಯ ಪ್ರತೀಕವಾಗಿಸಿ, ಅನೇಕ ಮಾಧ್ಯಮಗಳ ಮಧ್ಯದಲ್ಲಿಯೂ ಪುಸ್ತಕಗಳು ಗೆಲ್ಲುವಂತೆ ಶ್ರಮಿಸುತ್ತಿರುವ ಸಪ್ನ ಬುಕ್ ಹೌಸ್‌ ಪ್ರಯತ್ನ ಸ್ವಾಗತಾರ್ಹ.

-ಚೆನ್ನವೀರ ಕಣವಿ
$0.32

Original: $1.08

-70%
ಸುಖೀ ಕುಟುಂಬ ನಿಮ್ಮದಾಗಲಿ

$1.08

$0.32

Product Information

Shipping & Returns

Description

ಆರ್ಥಿಕ ಭದ್ರತೆ ಹಾಗೂ ವ್ಯವಹಾರದ ತಿಳಿವಳಿಕೆ ಎರಡೂ ಇರುವ ಪ್ರಕಾಶಕರು ಸಾಕಷ್ಟಿಲ್ಲದಿರುವ ಸಂದರ್ಭದಲ್ಲಿ, ಸಪ್ನ ಬುಕ್ ಹೌಸ್ ಸಾಹಿತ್ಯದ ವಿವಿಧ ಪ್ರಕಾರದ ಗ್ರಂಥಗಳನ್ನು ಪ್ರಕಟಿಸಿ, ಕನ್ನಡ ಸಾಹಿತ್ಯದ ಸಾಧ್ಯವಿರುವ ಬೆಳವಣಿಗೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷದ ವಿಷಯ. ಒಳ್ಳೆಯ ಕೃತಿಗಳನ್ನು ದೊಡ್ಡ ಮೊತ್ತದಲ್ಲಿ ಪ್ರಕಟ ಮಾಡುತ್ತಿರುವುದಲ್ಲದೆ ಅವುಗಳ ಮಾರಾಟ ಹಾಗೂ ವಿತರಣೆ ಯ ವ್ಯವಸ್ಥೆಯೂ ಆಗುವಂತೆ ಅದು ನೋಡಿಕೊಳ್ಳುತ್ತಿದೆ. ಅದಕ್ಕಾಗಿ ಬೆಂಗಳೂರಿಗಷ್ಟೇ ಸೀಮಿತವಾಗದೆ, ಸಮಗ್ರ ಕರ್ನಾಟಕದ ದೃಷ್ಟಿಯಿಂದ ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಕಲಬುರಗಿ ಹಾಗೂ ಕೊಯಮತ್ತೂರುಗಳಲ್ಲಿಯೂ ಸಪ್ನ ಬುಕ್ ಹೌಸ್ ತನ್ನದೇ ಆದ ಪುಸ್ತಕ ಭಂಡಾರಗಳನ್ನು ಪ್ರತಿಷ್ಠಾಪಿಸಿದೆ.

ಭಾರತದ ದೊಡ್ಡ ಪುಸ್ತಕ ಭಂಡಾರವೆನಿಸಿದ ಸಪ್ನ ಬುಕ್ ಹೌಸ್‌ನಲ್ಲಿ ಸ್ವಂತ ಪ್ರಕಟಣೆಗಳಂತೆಯೇ ಉಳಿದ ಮಹತ್ವದ ಲೇಖಕರ ಕೃತಿಗಳೂ ಲಭ್ಯ ಕರ್ನಾಟಕ ರಾಜ್ಯೋತ್ಸವವನ್ನಂತೂ ಕನ್ನಡ ಪುಸ್ತಕೋತ್ಸವವನ್ನಾಗಿ, ಕರ್ನಾಟಕದ ಎಲ್ಲ ಭಾಗಗಳ ಬಹುಸಂಖ್ಯೆಯ ಲೇಖಕರ ಕೃತಿಗಳನ್ನು ಅಂದು ಬಿಡುಗಡೆಗೊಳಿಸುತ್ತ ಆಯಾ ಲೇಖಕರ ಸನ್ಮಾನ ಸಮಾರಂಭ ಏರ್ಪಡಿಸುವದೂ ಸತ್ಸಂಪ್ರದಾಯವಾಗಿ ಕನ್ನಡ ರಾಜ್ಯೋತ್ಸವವನ್ನು ಚಿರಸ್ಮರಣೀಯ

ಕಾರ್ಯಕ್ರಮವನ್ನಾಗಿಸುತ್ತದೆ.

ಹೀಗೆ ಲೇಖಕ-ಪ್ರಕಾರಕ-ಓದುಗರ ನಡುವೆ ನಿಕಟ ಸಂಪರ್ಕವನ್ನುಂಟು ಮಾಡುವ ಉದ್ದೇಶವೂ ಇದರಲ್ಲಿ ಅಡಕವಾಗಿವೆ. ಇದರಿಂದ ಪುಸ್ತಕಗಳಿಗೆ ಅಗತ್ಯವಾದ ಪರಿಸರವನ್ನು ನಿರ್ಮಿಸಿ, ಪುಸ್ತಕೋದ್ಯಮವನ್ನು ಒಂದು ನಾಡಿನ ಪ್ರಗತಿಶೀಲತೆಯ ಪ್ರತೀಕವಾಗಿಸಿ, ಅನೇಕ ಮಾಧ್ಯಮಗಳ ಮಧ್ಯದಲ್ಲಿಯೂ ಪುಸ್ತಕಗಳು ಗೆಲ್ಲುವಂತೆ ಶ್ರಮಿಸುತ್ತಿರುವ ಸಪ್ನ ಬುಕ್ ಹೌಸ್‌ ಪ್ರಯತ್ನ ಸ್ವಾಗತಾರ್ಹ.

-ಚೆನ್ನವೀರ ಕಣವಿ
ಸುಖೀ ಕುಟುಂಬ ನಿಮ್ಮದಾಗಲಿ | Harivu Books