🎉 Up to 70% Off Selected ItemsShop Sale
HomeStore

ಸುಪಾರಿ ಕೊಲೆ

Product image 1
Product image 2

ಸುಪಾರಿ ಕೊಲೆ

ಸುಪಾರಿ ಕೊಲೆ

ಶಿವಕುಮಾರ ಮಾವಳಿಯ ವೈವಿಧ್ಯ ನನ್ನನ್ನು ಅಚ್ಚರಿಗೊಳಿಸುತ್ತದೆ. ಅವರು ಒಂದೇ ಜಾಡು ಹಿಡಿದು ಬರೆಯುವವರಲ್ಲ. ಸಾಮಾಜಿಕ ಬದ್ಧತೆ ಮತ್ತು ಕಲಾಪ್ರೌಢಿಮೆ ಎರಡನ್ನೂ ತಮ್ಮ ಕಲಾಸೃಷ್ಟಿಯಲ್ಲಿ ತೋರ್ಪಡಿಸಬಲ್ಲ ಪರಿಣತಿ ಹೊಂದಿರುವ ಅವರ ಈ ನಾಟಕ ಅವರ ಚುರುಕುಭಾಷೆ. ರಂಗಕ್ಕೆ ಅಳವಡಿಸುವುದಕ್ಕೆ ಬೇಕಾದ ಚಕ್ಯತೆ, ಚಕಿತಗೊಳಿಸುವ ದೃಶ್ಯವಿನ್ಯಾಸ ಮತ್ತು ಕೊನೆವರೆಗೂ ಕುತೂಹಲ ಉಳಿಸುವ ಕಥಾವಸ್ತುವಿನಿಂದ ಹಿಡಿದಿಡುತ್ತದೆ.

ಮಾವಲಿಯ ಕತೆಗಳಲ್ಲೇ ಸೊಗಸಾದ ಸಂಭಾಷಣೆಗಳಿದ್ದವು. ನಾಟಕ ಕೇವಲ ಸಂಭಾಷಣೆಯ ಮೊತ್ತ ಮಾತ್ರವೇ ಆಗಿರದೇ, ಅದಕ್ಕೊಂದು ರಂಗಕ್ಕೊಗ್ಗುವ ಸಂರಚನೆಯೂ ಬೇಕಾಗುತ್ತದೆ. ಅದನ್ನು ಇಂಗ್ಲಿಷ್ ಸಾಹಿತ್ಯ ಓದಿಕೊಂಡಿರುವ ಅವರು ಸೊಗಸಾಗಿ ಗ್ರಹಿಸಿದ್ದಾರೆ ಮತ್ತು ಅಳವಡಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಈ ಮಾದರಿಯ ನಾಟಕಗಳ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಸಿದ್ಧಾಂತಗಳಿಗೆ ಕಟ್ಟುಬೀಳುವ ಆತುರದಲ್ಲಿ ನಾಟಕಗಳು ತಮ್ಮ ಸಹಜ ರೋಚಕತೆ ಮತ್ತು ರಸಿಕತೆಯನ್ನು ಕಳೆದುಕೊಂಡು ಪ್ರಯೋಗಶೀಲತೆಯಲ್ಲೇ ಗೆಲ್ಲಬೇಕಾದ ಅನಿವಾರ್ಯವನ್ನು ಮೈಮೇಲೆ ಎಳೆದುಕೊಂಡಿವೆ. ಇನ್ನೊಂದು ಕಡೆ ಕಥೆಗಳನ್ನು ಕೆತ್ತಿಕಡೆದು ರಂಗಕ್ಕೆ ಅಳವಡಿಸುವ ಆತುರ ಹೆಚ್ಚುತ್ತಿದೆ.

ಇಂಥ ಹೊತ್ತಲ್ಲಿ ಶಿವಕುಮಾರ ಮಾವಲಿಯಂಥ ನಾಟಕಕಾರರ ಅಗತ್ಯ ರಂಗಭೂಮಿಗೆ ಇದೆ. ಅವರು ಮತ್ತಷ್ಟು ನಾಟಕಗಳನ್ನು ರಚಿಸಿ, ಪ್ರೇಕ್ಷಕ ಮಹಾಶಯರನ್ನು ರಂಜಿಸುತ್ತಿರಲಿ.

-ಜೋಗಿ
$1.08
ಸುಪಾರಿ ಕೊಲೆ
$1.08

Product Information

Shipping & Returns

Description

ಶಿವಕುಮಾರ ಮಾವಳಿಯ ವೈವಿಧ್ಯ ನನ್ನನ್ನು ಅಚ್ಚರಿಗೊಳಿಸುತ್ತದೆ. ಅವರು ಒಂದೇ ಜಾಡು ಹಿಡಿದು ಬರೆಯುವವರಲ್ಲ. ಸಾಮಾಜಿಕ ಬದ್ಧತೆ ಮತ್ತು ಕಲಾಪ್ರೌಢಿಮೆ ಎರಡನ್ನೂ ತಮ್ಮ ಕಲಾಸೃಷ್ಟಿಯಲ್ಲಿ ತೋರ್ಪಡಿಸಬಲ್ಲ ಪರಿಣತಿ ಹೊಂದಿರುವ ಅವರ ಈ ನಾಟಕ ಅವರ ಚುರುಕುಭಾಷೆ. ರಂಗಕ್ಕೆ ಅಳವಡಿಸುವುದಕ್ಕೆ ಬೇಕಾದ ಚಕ್ಯತೆ, ಚಕಿತಗೊಳಿಸುವ ದೃಶ್ಯವಿನ್ಯಾಸ ಮತ್ತು ಕೊನೆವರೆಗೂ ಕುತೂಹಲ ಉಳಿಸುವ ಕಥಾವಸ್ತುವಿನಿಂದ ಹಿಡಿದಿಡುತ್ತದೆ.

ಮಾವಲಿಯ ಕತೆಗಳಲ್ಲೇ ಸೊಗಸಾದ ಸಂಭಾಷಣೆಗಳಿದ್ದವು. ನಾಟಕ ಕೇವಲ ಸಂಭಾಷಣೆಯ ಮೊತ್ತ ಮಾತ್ರವೇ ಆಗಿರದೇ, ಅದಕ್ಕೊಂದು ರಂಗಕ್ಕೊಗ್ಗುವ ಸಂರಚನೆಯೂ ಬೇಕಾಗುತ್ತದೆ. ಅದನ್ನು ಇಂಗ್ಲಿಷ್ ಸಾಹಿತ್ಯ ಓದಿಕೊಂಡಿರುವ ಅವರು ಸೊಗಸಾಗಿ ಗ್ರಹಿಸಿದ್ದಾರೆ ಮತ್ತು ಅಳವಡಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಈ ಮಾದರಿಯ ನಾಟಕಗಳ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಸಿದ್ಧಾಂತಗಳಿಗೆ ಕಟ್ಟುಬೀಳುವ ಆತುರದಲ್ಲಿ ನಾಟಕಗಳು ತಮ್ಮ ಸಹಜ ರೋಚಕತೆ ಮತ್ತು ರಸಿಕತೆಯನ್ನು ಕಳೆದುಕೊಂಡು ಪ್ರಯೋಗಶೀಲತೆಯಲ್ಲೇ ಗೆಲ್ಲಬೇಕಾದ ಅನಿವಾರ್ಯವನ್ನು ಮೈಮೇಲೆ ಎಳೆದುಕೊಂಡಿವೆ. ಇನ್ನೊಂದು ಕಡೆ ಕಥೆಗಳನ್ನು ಕೆತ್ತಿಕಡೆದು ರಂಗಕ್ಕೆ ಅಳವಡಿಸುವ ಆತುರ ಹೆಚ್ಚುತ್ತಿದೆ.

ಇಂಥ ಹೊತ್ತಲ್ಲಿ ಶಿವಕುಮಾರ ಮಾವಲಿಯಂಥ ನಾಟಕಕಾರರ ಅಗತ್ಯ ರಂಗಭೂಮಿಗೆ ಇದೆ. ಅವರು ಮತ್ತಷ್ಟು ನಾಟಕಗಳನ್ನು ರಚಿಸಿ, ಪ್ರೇಕ್ಷಕ ಮಹಾಶಯರನ್ನು ರಂಜಿಸುತ್ತಿರಲಿ.

-ಜೋಗಿ
ಸುಪಾರಿ ಕೊಲೆ | Harivu Books