🎉 Up to 70% Off Selected ItemsShop Sale
HomeStore

ತೋರಣಗಲ್ಲು - ಚಾರಿತ್ರಿಕ ಅಧ್ಯಯನ

Product image 1
Product image 2

ತೋರಣಗಲ್ಲು - ಚಾರಿತ್ರಿಕ ಅಧ್ಯಯನ

ತೋರಣಗಲ್ಲು - ಚಾರಿತ್ರಿಕ ಅಧ್ಯಯನ

ಊರೆಂದರೆ ಮನೆಗಳ ಕೊಂಪೆಯಲ್ಲ ಮನುಷ್ಯರ ಮನುಷ್ಯರ ಮನಗಳ ಇರುವಿಕೆ ಜೀವ ಭಾವಗಳ ವಿಹಂಗಮ ನೋಟವೆಂದು ಹೇಳುವ ಬಾಲ್ಯದ ಗೆಳೆಯ ಅಬ್ದುಲ್ ಹೈತೋ. ನನ್ನೂರು ತೋರಣಗಲ್ಲಿನ ಚಿತ್ರಣವನ್ನು ಕಟ್ಟಿಕೊಟ್ಟ ಬಗೆ ವಿವರಿಸಿದ ರೀತಿ ಯಾವುದೇ ಓದುಗನಿಗೆ ಬೆರಗು ಮತ್ತು ಹೊಸ ಸಂಶೋಧಕರಿಗೆ ಮಾರ್ಗದರ್ಶಿ ಆಕರವೆಂದು ನಾನು ದೃಢವಾಗಿ ಹೇಳುವೆ.

ಯಾವುದೇ ಚರಿತ್ರೆಯ ಕಥನ ಕೆದಕಿದಾಗ ಅದಕ್ಕೊಂದು ಮೂಲವಿರುತ್ತದೆ. ಈ ಕೃತಿಯ ಕತೃ ಅಬ್ದುಲ್ ಹೈತೋ. ತೋರಣಗಲ್ಲಿನ ಮೂಲ ಚಿತ್ರಣವನ್ನು ಕಟ್ಟಿಕೊಡುವಾಗ ಪುಷ್ಟಿಕರಿಸಿದ ವಿಧ. ಅದಕ್ಕೆ ಒದಗಿಸಿದ ಸಾಕ್ಷಿಗಳಿಗೆ ನಿಬ್ಬೆರಗಾದೆ. ವಿಜಯನಗರ ಸಾಮ್ಯಾಜ್ಯಕ್ಕೆ ಬರುವ ಯಾತ್ರಿಕರನ್ನು ಸ್ವಾಗತಿಸುವ ಸಲುವಾಗಿ ಇಲ್ಲಿನ ಬೃಹತ್ ಕಲ್ಲುಗಳಿಗೆ ತೋರಣ ಕಟ್ಟುತ್ತಿದ್ದರೆಂಬ ಕಾರಣಕ್ಕೆ 'ತೋರಣಗಲ್ಲು' ಎಂದು ಕರೆದಿದ್ದನ್ನ ದಾಖಲಿಸುತ್ತಲೇ, ಅದರ ಮೂಲ ಹೆಸರು 'ತೊಗಲಗಲ್ಲೆ' 'ತೂಗಲುಗಲ್ಲು' ಮುಂದೆ ಅದು 'ತೋರಣಗಲ್ಲು' ಎಂದಾಯಿತೆಂದು ನಿರೂಪಿಸುವಾಗ ಅವರು ಕೊಡುವ ಸಬೂಬು ವೈಜ್ಞಾನಿಕ ಸತ್ಯವೆಂದು ನಾನಂತು ಧಾವಿಸುವೆ. ಗತವನ್ನು ವರ್ತಮಾನ ಕಣೋಟದಿಂದ ನೋಡಿದ ಹೈತೋ ನಾನು ಮತ್ತು ತಾನು ಹುಟ್ಟಿದ ಊರಿನ ಚರಿತ್ರೆಯನ್ನು ಇಷ್ಟೊಂದು ಸಂಶೋಧನಾತ್ಮಕವಾಗಿ ಬರೆಯುತ್ತಾನೆಂದು ನನಗನಿಸಿರಲಿಲ್ಲ. ಅದರಲ್ಲೂ ಗುಬ್ಬಿಗಳು ಮೂಲಕ ರೂಪಕಾತ್ಮಕವಾಗಿ ನಿರೂಪಿಸುವ ಶೈಲಿ ಮಕ್ಕಳಿಂದ ಮುಪ್ಪಿನ ಮನಸಿನವರಿಗೂ ಓದಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಈ ಪುಸ್ತಕದಲ್ಲಿ ಚರಿತ್ರೆಯನ್ನ ಕಟ್ಟಿಕೊಡುವ ಹೊಸ ನೋಟಕ್ರಮವನ್ನು ನೋಡಿದೆ.

ನಾನು ಕಂಡಂತೆ ಜೊತೆಯಾಗಿ ಓದುವಾಗಲೇ ಇವನು ಸಾಹಿತ್ಯದ ಹುಚ್ಚು ಹಿಡಿಸಿಕೊಂಡವನಾಗಿದ್ದ, ಗಜಲ್ ಕ್ಷೇತ್ರದಲ್ಲಿ ಹಿಡಿತವಿರುವ ಗೆಳೆಯ ಹೈತೋ ಧಿಡೀರನೆ ಸಂಶೋಧನೆಗೆ ಕೈ ಹಾಕಿ ಯಶಕಂಡದ್ದು ನನಗೆ ಕುತೂಹಲವೂ ಅಷ್ಟೇ ಖುಷಿಯೂ ಆಯಿತು. ಈ ಮೂಲಕ ಈ ಹೊತ್ತಿಗೆ ಓದಿಸಿ: ಪ್ರತಿಯೊಬ್ಬರ ಊರಿನ ಗಾಢ ನೆನಪುಗಳ ಮೆರವಣಿಗೆ ಮಾಡಿಸುವ ಇಂತೊಬ್ಬ ಗೆಳೆಯನ ಈ ಪುಸ್ತಕ ನಾಡಿನ ಜನ ಕೊಂಡು ಓದುವಂತಾಗಲಿ. ನಮ್ಮೂರ ಚರಿತ್ರೆಯೂ ಜಗ ಅರಿಯಲೆಂದು ಆಶಿಸುವೆ.
-ಜಿ. ಬಿ. ಶ್ಯಾಮಲಾ ಶ್ರೀಕಾಂತ್ 

$0.65

Original: $2.16

-70%
ತೋರಣಗಲ್ಲು - ಚಾರಿತ್ರಿಕ ಅಧ್ಯಯನ

$2.16

$0.65

Product Information

Shipping & Returns

Description

ಊರೆಂದರೆ ಮನೆಗಳ ಕೊಂಪೆಯಲ್ಲ ಮನುಷ್ಯರ ಮನುಷ್ಯರ ಮನಗಳ ಇರುವಿಕೆ ಜೀವ ಭಾವಗಳ ವಿಹಂಗಮ ನೋಟವೆಂದು ಹೇಳುವ ಬಾಲ್ಯದ ಗೆಳೆಯ ಅಬ್ದುಲ್ ಹೈತೋ. ನನ್ನೂರು ತೋರಣಗಲ್ಲಿನ ಚಿತ್ರಣವನ್ನು ಕಟ್ಟಿಕೊಟ್ಟ ಬಗೆ ವಿವರಿಸಿದ ರೀತಿ ಯಾವುದೇ ಓದುಗನಿಗೆ ಬೆರಗು ಮತ್ತು ಹೊಸ ಸಂಶೋಧಕರಿಗೆ ಮಾರ್ಗದರ್ಶಿ ಆಕರವೆಂದು ನಾನು ದೃಢವಾಗಿ ಹೇಳುವೆ.

ಯಾವುದೇ ಚರಿತ್ರೆಯ ಕಥನ ಕೆದಕಿದಾಗ ಅದಕ್ಕೊಂದು ಮೂಲವಿರುತ್ತದೆ. ಈ ಕೃತಿಯ ಕತೃ ಅಬ್ದುಲ್ ಹೈತೋ. ತೋರಣಗಲ್ಲಿನ ಮೂಲ ಚಿತ್ರಣವನ್ನು ಕಟ್ಟಿಕೊಡುವಾಗ ಪುಷ್ಟಿಕರಿಸಿದ ವಿಧ. ಅದಕ್ಕೆ ಒದಗಿಸಿದ ಸಾಕ್ಷಿಗಳಿಗೆ ನಿಬ್ಬೆರಗಾದೆ. ವಿಜಯನಗರ ಸಾಮ್ಯಾಜ್ಯಕ್ಕೆ ಬರುವ ಯಾತ್ರಿಕರನ್ನು ಸ್ವಾಗತಿಸುವ ಸಲುವಾಗಿ ಇಲ್ಲಿನ ಬೃಹತ್ ಕಲ್ಲುಗಳಿಗೆ ತೋರಣ ಕಟ್ಟುತ್ತಿದ್ದರೆಂಬ ಕಾರಣಕ್ಕೆ 'ತೋರಣಗಲ್ಲು' ಎಂದು ಕರೆದಿದ್ದನ್ನ ದಾಖಲಿಸುತ್ತಲೇ, ಅದರ ಮೂಲ ಹೆಸರು 'ತೊಗಲಗಲ್ಲೆ' 'ತೂಗಲುಗಲ್ಲು' ಮುಂದೆ ಅದು 'ತೋರಣಗಲ್ಲು' ಎಂದಾಯಿತೆಂದು ನಿರೂಪಿಸುವಾಗ ಅವರು ಕೊಡುವ ಸಬೂಬು ವೈಜ್ಞಾನಿಕ ಸತ್ಯವೆಂದು ನಾನಂತು ಧಾವಿಸುವೆ. ಗತವನ್ನು ವರ್ತಮಾನ ಕಣೋಟದಿಂದ ನೋಡಿದ ಹೈತೋ ನಾನು ಮತ್ತು ತಾನು ಹುಟ್ಟಿದ ಊರಿನ ಚರಿತ್ರೆಯನ್ನು ಇಷ್ಟೊಂದು ಸಂಶೋಧನಾತ್ಮಕವಾಗಿ ಬರೆಯುತ್ತಾನೆಂದು ನನಗನಿಸಿರಲಿಲ್ಲ. ಅದರಲ್ಲೂ ಗುಬ್ಬಿಗಳು ಮೂಲಕ ರೂಪಕಾತ್ಮಕವಾಗಿ ನಿರೂಪಿಸುವ ಶೈಲಿ ಮಕ್ಕಳಿಂದ ಮುಪ್ಪಿನ ಮನಸಿನವರಿಗೂ ಓದಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಈ ಪುಸ್ತಕದಲ್ಲಿ ಚರಿತ್ರೆಯನ್ನ ಕಟ್ಟಿಕೊಡುವ ಹೊಸ ನೋಟಕ್ರಮವನ್ನು ನೋಡಿದೆ.

ನಾನು ಕಂಡಂತೆ ಜೊತೆಯಾಗಿ ಓದುವಾಗಲೇ ಇವನು ಸಾಹಿತ್ಯದ ಹುಚ್ಚು ಹಿಡಿಸಿಕೊಂಡವನಾಗಿದ್ದ, ಗಜಲ್ ಕ್ಷೇತ್ರದಲ್ಲಿ ಹಿಡಿತವಿರುವ ಗೆಳೆಯ ಹೈತೋ ಧಿಡೀರನೆ ಸಂಶೋಧನೆಗೆ ಕೈ ಹಾಕಿ ಯಶಕಂಡದ್ದು ನನಗೆ ಕುತೂಹಲವೂ ಅಷ್ಟೇ ಖುಷಿಯೂ ಆಯಿತು. ಈ ಮೂಲಕ ಈ ಹೊತ್ತಿಗೆ ಓದಿಸಿ: ಪ್ರತಿಯೊಬ್ಬರ ಊರಿನ ಗಾಢ ನೆನಪುಗಳ ಮೆರವಣಿಗೆ ಮಾಡಿಸುವ ಇಂತೊಬ್ಬ ಗೆಳೆಯನ ಈ ಪುಸ್ತಕ ನಾಡಿನ ಜನ ಕೊಂಡು ಓದುವಂತಾಗಲಿ. ನಮ್ಮೂರ ಚರಿತ್ರೆಯೂ ಜಗ ಅರಿಯಲೆಂದು ಆಶಿಸುವೆ.
-ಜಿ. ಬಿ. ಶ್ಯಾಮಲಾ ಶ್ರೀಕಾಂತ್ 

ತೋರಣಗಲ್ಲು - ಚಾರಿತ್ರಿಕ ಅಧ್ಯಯನ | Harivu Books