🎉 Up to 70% Off Selected ItemsShop Sale
HomeStore

ಉತ್ಕಟ

Product image 1
Product image 2

ಉತ್ಕಟ

ಉತ್ಕಟ

ಭವದ ಆಕರ್ಷಣೆಯನ್ನು ನಿರ್ಲಕ್ಷಿಸಿ ಭಾವದ ಮೋಹಕತೆಗೆ ಮನಸೋತವರು ಕಲಾವಿದರಾಗುತ್ತಾರೆ. ರೂಢಿಯ ಮಾಯೆಗೆ ಬೆನ್ನುಹಾಕಿ ನಡೆಯುವುದರಿಂದಲೇ ಅವರಿಗೆ ನೈತಿಕ ಶಕ್ತಿ ಹೆಚ್ಚು. ಅಂತಹ ಮೋಹನರಾಗಕ್ಕೆ ಮನಸೋತ ಯಕ್ಷಗಾನ ಕಲಾವಿದನೊಬ್ಬನ ಬದುಕಿನ ವೃತ್ತಾಂತವೊಂದು ಈ ಕಾದಂಬರಿಯಲ್ಲಿ ದಾಖಲಾಗಿದೆ.

ಯಕ್ಷಗಾನದ ಆವರಣದೊಳಗಿಂದಲೇ ನೋಡಿ ಬರೆದ ಕಥನವಿದಾದ್ದರಿಂದ, ಸಂಶಯವಿಲ್ಲದ ಖಚಿತತೆ ಈ ಕೃತಿಯ ನಿರೂಪಣೆಗೆ ದಕ್ಕಿದೆ. ಇನ್ನೂ 25 ವರ್ಷವೂ ದಾಟಿರದ ಸೃಜನ್ ಗಣೇಶ್ ಬಳಸುವ ಭಾಷೆಯ ಮೋಡಿಯನ್ನು ಕಂಡು ಬೆರಗಾಗಿದ್ದೇನೆ. ಪದಗಳೊಡನೆ ಆಟವಾಡುವ, ಶ್ಲೇಷೆಯನ್ನು ನಿರಾಯಾಸವಾಗಿ ಹಿಡಿದುಕೊಡುವ, ಭಾವುಕ ಕ್ಷಣಗಳಲ್ಲಿ ತಲ್ಲೀನವಾಗುವ, ಬದುಕಿನ ಕಟುಸತ್ಯಗಳನ್ನು ತಣ್ಣಗೆ ಹೇಳುವ ಪ್ರಬುದ್ಧತೆಯನ್ನು ಈ ವಯಸ್ಸಿಗೇ ಕಾದಂಬರಿಕಾರ ದಕ್ಕಿಸಿಕೊಂಡಿದ್ದಾನೆ. ಶಾಸ್ತ್ರೀಯ ಸಂಗೀತದಲ್ಲಿ ಸಾಹಿತ್ಯಕ್ಕಿಂತಲೂ ಆಲಾಪನೆಯ ಆವೇಶ ಇಷ್ಟವಾಗುವಂತೆ, ಇಲ್ಲಿ ಕಥಾರಸಕ್ಕಿಂತಲೂ ಭಾಷಾರಸವೇ ಮೋಡಿ ಮಾಡಿದೆ.

ನಿರೂಪಣೆಯ ಒಂದು ಉತ್ಕಟ ಗಳಿಗೆಯಲ್ಲಿ 'ಒಂದು ದೇಶಕ್ಕೆ ಆ ದೇಶವನ್ನು ರಕ್ಷಿಸುವ ಸೈನಿಕನೆಷ್ಟು ಮುಖ್ಯವೋ, ಅಷ್ಟೇ ಮುಖ್ಯ ಆ ದೇಶದಲ್ಲಿನ ಕಲಾವಿದ' ಎನ್ನುವ ಬೀಜದ ಮಾತು ಬರುತ್ತದೆ. ಇದೊಂದು ಪರಮಸತ್ಯದ ವಾಕ್ಕಾಗಿದೆ. ಕೆಲವೊಮ್ಮೆ ಆಧುನಿಕ ಆಯುಧಗಳನ್ನು ಬಳಸಿಯೂ ಸೈನಿಕನಿಗೆ ಶತ್ರುಗಳನ್ನು ಗೆಲ್ಲಲಾಗದೇ ಹೋಗಬಹುದು; ಆದರೆ ನಿರಾಯುಧನಾಗಿ ಕಲಾವಿದನೊಬ್ಬ ಎಂತಹ ಶತ್ರುಗಳ ಹೃದಯವನ್ನೂ ಗೆಲ್ಲಬಲ್ಲವನಾಗಿರುತ್ತಾನೆ. ಆ ಕಾರಣಕ್ಕಾಗಿಯೇ ಕಲಾವಿದ ಅನಾಯಾಸವಾಗಿ ಗಡಿಗಳನ್ನು ದಾಟುವಷ್ಟು ಸುಲಭವಾಗಿ ಸೈನಿಕ ದಾಟಲಾರ.

ಭಾವದ ಮೋಡಿ ಒಲಿಸಿಕೊಂಡಂತೆಯೇ ಸೃಜನ್ ಭವವನ್ನೂ ಗೌರವದಿಂದ ನೋಡುವ ಅಗತ್ಯವಿದೆ. ಆಗ ಅವನ ಬರವಣಿಗೆಗೆ ಭಾಷಾರಸದ ಜೊತೆಗೆ ಕಥಾರಸವೂ ದಕ್ಕುತ್ತದೆ. ಅದೇನೂ ಅಂತಹ ಕಠಿಣ ಸವಾಲು ಅವನಿಗಾಗಲಿಕ್ಕಿಲ್ಲ ಎಂಬುದು ಈ ಕೃತಿಯಲ್ಲಿ ಆಗಲೇ ದಾಖಲಾಗಿದೆ."

- ವಸುಧೇಂದ್ರ

$0.39

Original: $1.30

-70%
ಉತ್ಕಟ

$1.30

$0.39

Product Information

Shipping & Returns

Description

ಭವದ ಆಕರ್ಷಣೆಯನ್ನು ನಿರ್ಲಕ್ಷಿಸಿ ಭಾವದ ಮೋಹಕತೆಗೆ ಮನಸೋತವರು ಕಲಾವಿದರಾಗುತ್ತಾರೆ. ರೂಢಿಯ ಮಾಯೆಗೆ ಬೆನ್ನುಹಾಕಿ ನಡೆಯುವುದರಿಂದಲೇ ಅವರಿಗೆ ನೈತಿಕ ಶಕ್ತಿ ಹೆಚ್ಚು. ಅಂತಹ ಮೋಹನರಾಗಕ್ಕೆ ಮನಸೋತ ಯಕ್ಷಗಾನ ಕಲಾವಿದನೊಬ್ಬನ ಬದುಕಿನ ವೃತ್ತಾಂತವೊಂದು ಈ ಕಾದಂಬರಿಯಲ್ಲಿ ದಾಖಲಾಗಿದೆ.

ಯಕ್ಷಗಾನದ ಆವರಣದೊಳಗಿಂದಲೇ ನೋಡಿ ಬರೆದ ಕಥನವಿದಾದ್ದರಿಂದ, ಸಂಶಯವಿಲ್ಲದ ಖಚಿತತೆ ಈ ಕೃತಿಯ ನಿರೂಪಣೆಗೆ ದಕ್ಕಿದೆ. ಇನ್ನೂ 25 ವರ್ಷವೂ ದಾಟಿರದ ಸೃಜನ್ ಗಣೇಶ್ ಬಳಸುವ ಭಾಷೆಯ ಮೋಡಿಯನ್ನು ಕಂಡು ಬೆರಗಾಗಿದ್ದೇನೆ. ಪದಗಳೊಡನೆ ಆಟವಾಡುವ, ಶ್ಲೇಷೆಯನ್ನು ನಿರಾಯಾಸವಾಗಿ ಹಿಡಿದುಕೊಡುವ, ಭಾವುಕ ಕ್ಷಣಗಳಲ್ಲಿ ತಲ್ಲೀನವಾಗುವ, ಬದುಕಿನ ಕಟುಸತ್ಯಗಳನ್ನು ತಣ್ಣಗೆ ಹೇಳುವ ಪ್ರಬುದ್ಧತೆಯನ್ನು ಈ ವಯಸ್ಸಿಗೇ ಕಾದಂಬರಿಕಾರ ದಕ್ಕಿಸಿಕೊಂಡಿದ್ದಾನೆ. ಶಾಸ್ತ್ರೀಯ ಸಂಗೀತದಲ್ಲಿ ಸಾಹಿತ್ಯಕ್ಕಿಂತಲೂ ಆಲಾಪನೆಯ ಆವೇಶ ಇಷ್ಟವಾಗುವಂತೆ, ಇಲ್ಲಿ ಕಥಾರಸಕ್ಕಿಂತಲೂ ಭಾಷಾರಸವೇ ಮೋಡಿ ಮಾಡಿದೆ.

ನಿರೂಪಣೆಯ ಒಂದು ಉತ್ಕಟ ಗಳಿಗೆಯಲ್ಲಿ 'ಒಂದು ದೇಶಕ್ಕೆ ಆ ದೇಶವನ್ನು ರಕ್ಷಿಸುವ ಸೈನಿಕನೆಷ್ಟು ಮುಖ್ಯವೋ, ಅಷ್ಟೇ ಮುಖ್ಯ ಆ ದೇಶದಲ್ಲಿನ ಕಲಾವಿದ' ಎನ್ನುವ ಬೀಜದ ಮಾತು ಬರುತ್ತದೆ. ಇದೊಂದು ಪರಮಸತ್ಯದ ವಾಕ್ಕಾಗಿದೆ. ಕೆಲವೊಮ್ಮೆ ಆಧುನಿಕ ಆಯುಧಗಳನ್ನು ಬಳಸಿಯೂ ಸೈನಿಕನಿಗೆ ಶತ್ರುಗಳನ್ನು ಗೆಲ್ಲಲಾಗದೇ ಹೋಗಬಹುದು; ಆದರೆ ನಿರಾಯುಧನಾಗಿ ಕಲಾವಿದನೊಬ್ಬ ಎಂತಹ ಶತ್ರುಗಳ ಹೃದಯವನ್ನೂ ಗೆಲ್ಲಬಲ್ಲವನಾಗಿರುತ್ತಾನೆ. ಆ ಕಾರಣಕ್ಕಾಗಿಯೇ ಕಲಾವಿದ ಅನಾಯಾಸವಾಗಿ ಗಡಿಗಳನ್ನು ದಾಟುವಷ್ಟು ಸುಲಭವಾಗಿ ಸೈನಿಕ ದಾಟಲಾರ.

ಭಾವದ ಮೋಡಿ ಒಲಿಸಿಕೊಂಡಂತೆಯೇ ಸೃಜನ್ ಭವವನ್ನೂ ಗೌರವದಿಂದ ನೋಡುವ ಅಗತ್ಯವಿದೆ. ಆಗ ಅವನ ಬರವಣಿಗೆಗೆ ಭಾಷಾರಸದ ಜೊತೆಗೆ ಕಥಾರಸವೂ ದಕ್ಕುತ್ತದೆ. ಅದೇನೂ ಅಂತಹ ಕಠಿಣ ಸವಾಲು ಅವನಿಗಾಗಲಿಕ್ಕಿಲ್ಲ ಎಂಬುದು ಈ ಕೃತಿಯಲ್ಲಿ ಆಗಲೇ ದಾಖಲಾಗಿದೆ."

- ವಸುಧೇಂದ್ರ

ಉತ್ಕಟ | Harivu Books