🎉 Up to 70% Off Selected ItemsShop Sale
HomeStore

ಅಲೈದೇವ್ರು

Product image 1
Product image 2

ಅಲೈದೇವ್ರು

ಅಲೈದೇವ್ರು

ಅಲೈದೇವ್ರು ನಾಟಕದ ಕಟ್ಟ ಕಡೆಯ ದೃಶ್ಯದಲ್ಲಿ ಅತ್ಯಂತಿಕ ಮಾರ್ಗವೆಂಬಂತೆ ಮೋನಪ್ಪಜ್ಜ "ತಾ ಇಲ್ಲಿ ಹಲಗಿ, ನಾವು ನಮ್ಮ ಕೆಲಸ ಮಾಡಾನು, ಅವು ಬೇಕಾದ್ರೆ ತಮ್ಮ ಕೆಲಸ ಮಾಡಿಕೊಳ್ಳಿ" ಎಂದು ಹಲಗೆ ಬಾರಿಸತೊಡಗುತ್ತಾನೆ. ಅಂತಿಮ ನಿರ್ಣಯ ಎಂಬಂತಹ ಈ ಹಲಗೆ ಸದ್ದು, ಕೂಡಿದ ಸರ್ವದೈವವನ್ನೂ ಎಚ್ಚರಿಸುವ, "ಬೈಠಕ್-ಜಮಾತ್ ನವರನ್ನು ಮೆಟ್ಟಿನಿಲ್ಲುವ, ಶಶಿಕಲಾ-ರಫೀಕರ ಪ್ರೇಮವನ್ನು ಲೋಕಕ್ಕೆ ಸಾರುವ ಸಂದೇಶವಾಗುತ್ತದೆ. ಕೊನೆಯ ಸನ್ನಿವೇಶದಲ್ಲಿ ಸಣ್ಣಗೆ ಹೊಮ್ಮುವ ಗಾಂಧೀ 'ಸ್ವರ' ಈ ನಾಟಕ ಹೊಮ್ಮಿಸುವ ತಾತ್ವಿಕತೆಯನ್ನು ಸದ್ದಿಲ್ಲದೆ ಧ್ವನಿಸುತ್ತದೆ. ಇಲ್ಲಿ ಪಾತ್ರ ಮತ್ತು ಸನ್ನಿವೇಶಗಳಿಗೆ ಈ ಬಗೆಯ ಮೌಲ್ಯವನ್ನು ತಂದುಕೊಟ್ಟಿರುವುದರಿಂದಲೇ 'ಅಲೈದೇವ್ರು' ನಾಟಕ ಈ ಕಾಲಕ್ಕೆ ಮಹತ್ವದ್ದೇನಿಸುತ್ತದೆ.

-ಬಿ. ಪೀರಭಾಷಾ

ಲೇಖಕ

ಈ ನಾಟಕದ ವೈಧಾನಿಕತೆಯಲ್ಲಿ ಸಾಮಾಜಿಕ ನಾಟಕದ ಅಸಂಗತ ನಾಟಕದ ಸಂಕರವಿದೆ. ಭೂತ, ಭವಿಷ್ಯತ್ ವರ್ತಮಾನಗಳ ಹೆಣಿಗೆಯಿದೆ. ನಿನ್ನೆಯ ಕಣ್ಣುಗಳಿಂದ ಇಂದನ್ನು ವಿಶ್ಲೇಷಿಸುವ, ನಾಳೆಯ ಚಿಂತನೆಯಿಂದ ಇಂದನ್ನು ಸರಿಪಡಿಸುವ ಇರಾದೆ ಇದೆ. ಪುರಾಣ ಮತ್ತು ಆಧುನಿಕತೆಯ ಜೀವನ ವಿನ್ಯಾಸಗಳಿವೆ. ಮುಖ್ಯವಾಗಿ, ಸಾಮಾನ್ಯ ನೋಟಕ್ಕೆ ದಕ್ಕಲಾಗದ ಬಗೆಹರಿಯಲಾಗದ ಮಹಿಳಾ ವಿಷಯವನ್ನಿದು ಒಳಗೊಂಡಿದೆ. ಹೆಣ್ಣು . ಹೆಣ್ಣು ಗಂಡುಗಳು ಮುಕ್ತವಾಗಿ ಸಹಜವಾಗಿ ಬದುಕಿದ್ದ ಆದಿಮ ಕಾಲದ ಸ್ಮೃತಿ, ಅಂದಿನ ನ್ಯಾಯ ವ್ಯವಸ್ಥೆ: ಹೆಣ್ಣನದ ಜೈವಿಕತೆಯ ನೆಪದಲ್ಲಿ ಯಜಮಾನ್ಯತೆಯನ್ನು ಸ್ಥಾಪಿಸಿಕೊಂಡ ಪುರುಷ ರಾಜಕಾರಣದ ಫಲವಾಗಿ ಮನುಷ್ಯಚರಿತ್ರೆ ಅಂದಿನಿ0ದ ಇಂದಿನವರೆಗೂ ಒಡಕಲು ಬಿಂಬವಾಗಿಯೇ ಮುಂಬರಿದ ಚರಿತ್ರೆಯ ನೋಟವಿದೆ.

-ಭಾರತಿದೇವಿ ವಿಮರ್ಶಕಿ

$3.24
ಅಲೈದೇವ್ರು
$3.24

Product Information

Shipping & Returns

Description

ಅಲೈದೇವ್ರು ನಾಟಕದ ಕಟ್ಟ ಕಡೆಯ ದೃಶ್ಯದಲ್ಲಿ ಅತ್ಯಂತಿಕ ಮಾರ್ಗವೆಂಬಂತೆ ಮೋನಪ್ಪಜ್ಜ "ತಾ ಇಲ್ಲಿ ಹಲಗಿ, ನಾವು ನಮ್ಮ ಕೆಲಸ ಮಾಡಾನು, ಅವು ಬೇಕಾದ್ರೆ ತಮ್ಮ ಕೆಲಸ ಮಾಡಿಕೊಳ್ಳಿ" ಎಂದು ಹಲಗೆ ಬಾರಿಸತೊಡಗುತ್ತಾನೆ. ಅಂತಿಮ ನಿರ್ಣಯ ಎಂಬಂತಹ ಈ ಹಲಗೆ ಸದ್ದು, ಕೂಡಿದ ಸರ್ವದೈವವನ್ನೂ ಎಚ್ಚರಿಸುವ, "ಬೈಠಕ್-ಜಮಾತ್ ನವರನ್ನು ಮೆಟ್ಟಿನಿಲ್ಲುವ, ಶಶಿಕಲಾ-ರಫೀಕರ ಪ್ರೇಮವನ್ನು ಲೋಕಕ್ಕೆ ಸಾರುವ ಸಂದೇಶವಾಗುತ್ತದೆ. ಕೊನೆಯ ಸನ್ನಿವೇಶದಲ್ಲಿ ಸಣ್ಣಗೆ ಹೊಮ್ಮುವ ಗಾಂಧೀ 'ಸ್ವರ' ಈ ನಾಟಕ ಹೊಮ್ಮಿಸುವ ತಾತ್ವಿಕತೆಯನ್ನು ಸದ್ದಿಲ್ಲದೆ ಧ್ವನಿಸುತ್ತದೆ. ಇಲ್ಲಿ ಪಾತ್ರ ಮತ್ತು ಸನ್ನಿವೇಶಗಳಿಗೆ ಈ ಬಗೆಯ ಮೌಲ್ಯವನ್ನು ತಂದುಕೊಟ್ಟಿರುವುದರಿಂದಲೇ 'ಅಲೈದೇವ್ರು' ನಾಟಕ ಈ ಕಾಲಕ್ಕೆ ಮಹತ್ವದ್ದೇನಿಸುತ್ತದೆ.

-ಬಿ. ಪೀರಭಾಷಾ

ಲೇಖಕ

ಈ ನಾಟಕದ ವೈಧಾನಿಕತೆಯಲ್ಲಿ ಸಾಮಾಜಿಕ ನಾಟಕದ ಅಸಂಗತ ನಾಟಕದ ಸಂಕರವಿದೆ. ಭೂತ, ಭವಿಷ್ಯತ್ ವರ್ತಮಾನಗಳ ಹೆಣಿಗೆಯಿದೆ. ನಿನ್ನೆಯ ಕಣ್ಣುಗಳಿಂದ ಇಂದನ್ನು ವಿಶ್ಲೇಷಿಸುವ, ನಾಳೆಯ ಚಿಂತನೆಯಿಂದ ಇಂದನ್ನು ಸರಿಪಡಿಸುವ ಇರಾದೆ ಇದೆ. ಪುರಾಣ ಮತ್ತು ಆಧುನಿಕತೆಯ ಜೀವನ ವಿನ್ಯಾಸಗಳಿವೆ. ಮುಖ್ಯವಾಗಿ, ಸಾಮಾನ್ಯ ನೋಟಕ್ಕೆ ದಕ್ಕಲಾಗದ ಬಗೆಹರಿಯಲಾಗದ ಮಹಿಳಾ ವಿಷಯವನ್ನಿದು ಒಳಗೊಂಡಿದೆ. ಹೆಣ್ಣು . ಹೆಣ್ಣು ಗಂಡುಗಳು ಮುಕ್ತವಾಗಿ ಸಹಜವಾಗಿ ಬದುಕಿದ್ದ ಆದಿಮ ಕಾಲದ ಸ್ಮೃತಿ, ಅಂದಿನ ನ್ಯಾಯ ವ್ಯವಸ್ಥೆ: ಹೆಣ್ಣನದ ಜೈವಿಕತೆಯ ನೆಪದಲ್ಲಿ ಯಜಮಾನ್ಯತೆಯನ್ನು ಸ್ಥಾಪಿಸಿಕೊಂಡ ಪುರುಷ ರಾಜಕಾರಣದ ಫಲವಾಗಿ ಮನುಷ್ಯಚರಿತ್ರೆ ಅಂದಿನಿ0ದ ಇಂದಿನವರೆಗೂ ಒಡಕಲು ಬಿಂಬವಾಗಿಯೇ ಮುಂಬರಿದ ಚರಿತ್ರೆಯ ನೋಟವಿದೆ.

-ಭಾರತಿದೇವಿ ವಿಮರ್ಶಕಿ

ಅಲೈದೇವ್ರು | Harivu Books