🎉 Up to 70% Off Selected ItemsShop Sale
HomeStore

ಬೈಲಹಳ್ಳಿ ಸರ್ವೆ

Product image 1

ಬೈಲಹಳ್ಳಿ ಸರ್ವೆ

ಬೈಲಹಳ್ಳಿ ಸರ್ವೆ

.ಬೈಲಹಳ್ಳಿ ಸರ್ವೆಯಲ್ಲಿ ಶ್ರೀ ಅಯ್ಯಂಗಾರ್ಯರು ಈ ಅಂಶಗಳನ್ನು ಮನೋಜ್ಞವಾಗಿ ವಿವರಿಸಿದ್ದಾರೆ. ಬರೆದಿರುವುದು ಪ್ರಬಂಧವಲ್ಲ ; ಅನುಭವ ವಿವರಣೆ. ಹೇಳಿರುವುದು ಕತೆಯಲ್ಲ ; ಸಹಜಸ್ಥಿತಿ, ಅನುಭವ ರಸಾಯನ ಹಳ್ಳಿಯವರ ಜೀವನದಲ್ಲಿರುವ ಜೀವ ಪರಿಚಯ ಮಾಡಿಕೊಡುತ್ತಿದೆ ಬೈಲಹಳ್ಳಿ ಸರ್ವೆ. ಹಳ್ಳಿಯವರೊಡನೆ ಬೆರೆತು ಅವರ ಜೀವನದ ಗತಿಯರಿಯಲು ದುಡಿಯುವ ಮಹನೀಯರು ಪದಗಳಿಗಾಗಿ ಸಂಕಟಪಡಬೇಕಾದುದಿಲ್ಲ. ಶ್ರೀ ಅಯ್ಯಂಗಾರ್ಯರ ಈ ಗ್ರಂಥವೇ ಉದಾಹರಣೆ. ಇಂತಹ ಗ್ರಂಥಗಳಿಂದ ಪಾರಿಭಾಷಿಕ ಮತ್ತು ಪಠ್ಯಾಯ ಪದಗಳಿಗೆ ನಮ್ಮವರು ಪಡುತ್ತಿರುವ ತೊಂದರೆಯೂ ಬಹಳ ಮಟ್ಟಿಗೆ ನಿವಾರಣೆಯಾಗುತ್ತದೆ.

ಶ್ರೀ ಅಯ್ಯಂಗಾರ್ಯರು ತಾವು ಕೈಕೊಂಡ ಕೆಲಸವನ್ನು ಎಷ್ಟು ದಕ್ಷತೆಯಿಂದ ಚತುರತೆಯಿಂದ ನಿರ್ವಹಿಸಬಲ್ಲರೆಂಬುದಕ್ಕೆ ಈ ಹೊತ್ತಿಗೆಯೇ ಸಾಕ್ಷಿ. ಹಳ್ಳಿಯ ಜೀವನದಲ್ಲಿ ಅವರು ಕಂಡಿರುವ ಉಜ್ವಲ ಬೆಳಕು ಸಾಹಿತಿಗಳ ಜೀವನ ಕನ್ನಡ ಸಂಸ್ಕೃತಿ ಸ್ವರೂಪವನ್ನು ಸಂದರ್ಶಿಸಲು ತವಕಪಡುತ್ತಿರುವವರಿಗೆ ಅಮರಜ್ಯೋತಿ.

- ತಿರುಮಲೆ ತಾತಾಚಾರ್ಯ ಶರ್ಮ

'ಬೈಲಹಳ್ಳಿ ಸರ್ವೆ'ಯು ಹಳ್ಳಿಗರ ಸಂಸ್ಕೃತಿಯ ಕೈಪಿಡಿಯಾಗಿದೆ. ಗೊರೂರರ ಗ್ರಂಥಗಳಲ್ಲಿ ಚಿತ್ರಿತವಾದ ಹಳ್ಳಿಗರ ಭಾವ, ಭಾಷೆ, ವಿಚಾರ, ನಂಬಿಕೆ ಅನುಭವಗಳೂ ಹಾಗೂ ಸ್ವಭಾವ ನಿರೂಪಣ, ಹಾಸ್ಯದ ಬುಗ್ಗೆ ಇವುಗಳೂ ಆಧುನಿಕ ಕನ್ನಡ ಸಾಹಿತ್ಯಕ್ಕೆ ಉತ್ತಮ ಕಾಣಿಕೆಗಳಾಗಿವೆ.

-ಸ.ಸ. ಮಾಳವಾಡ

$1.03
ಬೈಲಹಳ್ಳಿ ಸರ್ವೆ
$1.03

Product Information

Shipping & Returns

Description

.ಬೈಲಹಳ್ಳಿ ಸರ್ವೆಯಲ್ಲಿ ಶ್ರೀ ಅಯ್ಯಂಗಾರ್ಯರು ಈ ಅಂಶಗಳನ್ನು ಮನೋಜ್ಞವಾಗಿ ವಿವರಿಸಿದ್ದಾರೆ. ಬರೆದಿರುವುದು ಪ್ರಬಂಧವಲ್ಲ ; ಅನುಭವ ವಿವರಣೆ. ಹೇಳಿರುವುದು ಕತೆಯಲ್ಲ ; ಸಹಜಸ್ಥಿತಿ, ಅನುಭವ ರಸಾಯನ ಹಳ್ಳಿಯವರ ಜೀವನದಲ್ಲಿರುವ ಜೀವ ಪರಿಚಯ ಮಾಡಿಕೊಡುತ್ತಿದೆ ಬೈಲಹಳ್ಳಿ ಸರ್ವೆ. ಹಳ್ಳಿಯವರೊಡನೆ ಬೆರೆತು ಅವರ ಜೀವನದ ಗತಿಯರಿಯಲು ದುಡಿಯುವ ಮಹನೀಯರು ಪದಗಳಿಗಾಗಿ ಸಂಕಟಪಡಬೇಕಾದುದಿಲ್ಲ. ಶ್ರೀ ಅಯ್ಯಂಗಾರ್ಯರ ಈ ಗ್ರಂಥವೇ ಉದಾಹರಣೆ. ಇಂತಹ ಗ್ರಂಥಗಳಿಂದ ಪಾರಿಭಾಷಿಕ ಮತ್ತು ಪಠ್ಯಾಯ ಪದಗಳಿಗೆ ನಮ್ಮವರು ಪಡುತ್ತಿರುವ ತೊಂದರೆಯೂ ಬಹಳ ಮಟ್ಟಿಗೆ ನಿವಾರಣೆಯಾಗುತ್ತದೆ.

ಶ್ರೀ ಅಯ್ಯಂಗಾರ್ಯರು ತಾವು ಕೈಕೊಂಡ ಕೆಲಸವನ್ನು ಎಷ್ಟು ದಕ್ಷತೆಯಿಂದ ಚತುರತೆಯಿಂದ ನಿರ್ವಹಿಸಬಲ್ಲರೆಂಬುದಕ್ಕೆ ಈ ಹೊತ್ತಿಗೆಯೇ ಸಾಕ್ಷಿ. ಹಳ್ಳಿಯ ಜೀವನದಲ್ಲಿ ಅವರು ಕಂಡಿರುವ ಉಜ್ವಲ ಬೆಳಕು ಸಾಹಿತಿಗಳ ಜೀವನ ಕನ್ನಡ ಸಂಸ್ಕೃತಿ ಸ್ವರೂಪವನ್ನು ಸಂದರ್ಶಿಸಲು ತವಕಪಡುತ್ತಿರುವವರಿಗೆ ಅಮರಜ್ಯೋತಿ.

- ತಿರುಮಲೆ ತಾತಾಚಾರ್ಯ ಶರ್ಮ

'ಬೈಲಹಳ್ಳಿ ಸರ್ವೆ'ಯು ಹಳ್ಳಿಗರ ಸಂಸ್ಕೃತಿಯ ಕೈಪಿಡಿಯಾಗಿದೆ. ಗೊರೂರರ ಗ್ರಂಥಗಳಲ್ಲಿ ಚಿತ್ರಿತವಾದ ಹಳ್ಳಿಗರ ಭಾವ, ಭಾಷೆ, ವಿಚಾರ, ನಂಬಿಕೆ ಅನುಭವಗಳೂ ಹಾಗೂ ಸ್ವಭಾವ ನಿರೂಪಣ, ಹಾಸ್ಯದ ಬುಗ್ಗೆ ಇವುಗಳೂ ಆಧುನಿಕ ಕನ್ನಡ ಸಾಹಿತ್ಯಕ್ಕೆ ಉತ್ತಮ ಕಾಣಿಕೆಗಳಾಗಿವೆ.

-ಸ.ಸ. ಮಾಳವಾಡ

ಬೈಲಹಳ್ಳಿ ಸರ್ವೆ | Harivu Books